Monday, February 18, 2013

ಗಮ್ಯ ತಲುಪಲು ಹೊರಟಿದ್ದೇನೆ..!

ಳೆದೊಂದು ತಿಂಗಳಿಂದ ಕನಸು ಎಂಬ ಮೂರಕ್ಷರದ ಹಿಂದೆ ಬಿದ್ದಿದ್ದೇನೆ. ಈ ರೀತಿ ಕನಸೆಂಬ ಕುದುರೆಯನ್ನೇರುತ್ತೇನೆ ಎಂದು ಬಹುಶಃ ನನಗೇ ಗೊತ್ತಿರಲಿಲ್ಲ. ಆದರೆ ಈಗ ಕುದುರೆ ಏರಿಯಾಗಿದೆ. ಯುದ್ಧ ಗೆಲ್ಲುತ್ತೇನಾ, ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇನ್ನೇನಿದ್ದರೂ ಗುರಿ ಸಾಧಿಸುವ ತವಕ.

ಆ ಮಹತ್ವದ ಗುರಿ ಸಾಧಿಸುತ್ತೇನಾ ಗೊತ್ತಿಲ್ಲ. ಒಂದಂತೂ ನಿಜ. ನಾನು ತಲುಪಬೇಕೆಂದಿರುವ ಗಮ್ಯ ನನ್ನ ಕಣ್ಣ ಮುಂದೆ ಅಚ್ಚಳಿಯದೆ ಸದಾ ಇರುತ್ತದೆ. ಆದರೆ ದಾರಿಯಲ್ಲಿ ಒಂದಷ್ಟು ಅಡೆ ತಡೆಗಳು, ವ್ಯರ್ಥ ಪ್ರಲಾಪಗಳು ಎಲ್ಲಾ ಜೀವನದ ಹಾದಿಯಲ್ಲಿ ಬರುವಂತೆ ಬರುತ್ತದೆ. ಈ ಕನಸು ಸಾಕಾರವಾದರೆ ನಾನು ಈ ಜಗತ್ತಿನ ಸ್ವರ್ಗಸುಖಿ.

ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಒಂದಿಷ್ಟು ಸೆಂಟಿಮೆಂಟಲ್ ಗಳಿಗೆ ತಲೆ ಬಾಗುತ್ತಿದ್ದೇನಾ ಎಂದು ಮನಸು ಯೋಚಿಸಿರುತ್ತದೆ. ಆದರೆ ಕೆಲವು ಗಮ್ಯವನ್ನು ತಲುಪಬೇಕಾದರೆ ಕೆಲವೊಂದೆಡೆ ನಾನು ಶರಣು ಶರಣಾರ್ಥಿ ಎಂದು ತಲೆಬಾಗಲೇ ಬೇಕಾದೀತು. ಅದರಲ್ಲಿ ಕೆಲವೊಂದು ಮೂರು ವಾರದ ಹಿಂದೆ ನಡೆದು ಹೋಯಿತು.

ನಾನು ತಪ್ಪು ಮಾಡುತ್ತಿದ್ದೇನಾ..? ಹಾಗಂತ ಹೇಳಲು ಯಾವುದೇ ಕಾರಣಗಳಿಲ್ಲ. ಮನಸಿನಲ್ಲಿ ಬಿತ್ತಿದ ಕನಸಿಗೆ ಜೀವ ತುಂಬಲು ಹಾಗೆ ಮುಂದುವರಿಯಲೇ ಬೇಕಾದ ಅನಿವಾರ್ಯತೆ. ಕಳೆದ ವಾರ ಅದರಲ್ಲಿ ಒಂದೆರಡು ಹಂತಗಳನ್ನು ದಾಟಿದ್ದೇನೆ. ಆದರೆ ಈ ಮುಳ್ಳಿನ ಹಾದಿಯಲ್ಲಿ ಎಷ್ಟು ಸರಿಸಿದರೂ ಮುಳ್ಳಿನ ಮೇಲೆ ಕಾಲಿಟ್ಟರೆ ನೋವು ಅನುಭವಿಸಲೇಬೇಕು. ಅದನ್ನು ಎಷ್ಟು ತಪ್ಪಿಸಬೇಕೆಂದು ಹೊರಟರೂ ಯಾವುದೇ ತರಚಿದ ಗಾಯಗಳಿಲ್ಲದೆ ಮುಂದೆ ನಡೆಯಬೇಕಾದರೆ ಅದು ಸೂಕ್ಷ್ಮವಾದ ನಡಿಗೆಯಾಗಿರಬೇಕು. ಎಷ್ಟು ಸರಿಸಿ ನಡೆದರೂ ಹಾದಿ ದುರ್ಗಮವಾಗುತ್ತಿದೆ ಎಂದು ಅನಿಸುತ್ತಿದೆ.

ನಾನು ಈ ಪಾಟಿ ಒಂದು ಕೆಲಸಕ್ಕೆ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ಅನುಭವವಾಗಿತ್ತು. ಆದರೆ ಗಮ್ಯ ತಲುಪುವ ಮುನ್ನವೇ ನನ್ನ ದಾರಿಯಲ್ಲಿ ಬೇರಿನ್ಯಾರೋ ಬಂದರು. ಅಲ್ಲಿಗೆ ನನ್ನ ಉತ್ಸಾಹ ತುಂಬಿದ್ದ ಬುತ್ತಿಗೆ ಚುಚ್ಚಿದ ಅನುಭವ. ಆದರೆ ಅದು ಸೋಲಾಗಲಿಲ್ಲ. ಆಮೇಲೆ ಯಾವತ್ತೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈ ಕನಸಿನ ಹಾದಿಯಲ್ಲಿ ಈಗಾಗಲೇ ಯಶಸ್ಸಿನ ಶೇ.25ರಷ್ಟು ಹಾದಿಯನ್ನು ಸವೆಸಿದ್ದೇನೆ. ಇದು ಬೇಕಾ, ಬೇಡವಾ ಎಂದು ಯೋಚಿಸಿದ್ದೇನೆ. ಬಹಳ ದಿನಗಳ ಯೋಚನೆಗಳ ಬಳಿಕ ಒಂದು ತಿಳಿದುಕೊಂಡಿದ್ದೇನೆ. ಹಾದಿ ಕಠಿಣವಿದೆ. ಆದರೆ ಒಂದು ಸಾರಿ ನಾನು ಆ ಗಮ್ಯವನ್ನು ತಲುಪಿದರೆ ಬಹುಶಃ ಅದೇ ನನ್ನ ಪಾಲಿನ ಜೀವನದ ಅವಿಸ್ಮರಣೀಯ ದಿನ. ಆ ದಿನ ಅವಿಸ್ಮರಣೀಯ ಘಳಿಗೆಯಲ್ಲಿ ಪಾಲುದಾರರಾಗಲು, ಯಶಸ್ಸಿನ ಬಳಿಕ ಒಂದು ಹ್ಯಾಟ್ಸ್ ಆಫ್ ಹೇಳಲು ಎಲ್ಲರೂ ಇರುತ್ತಾರೆ. ಆ ಕ್ಷಣ ಕಣ್ಣಂಚು ತೇವಗೊಳ್ಳಲೇಬೇಕು.

ನನ್ನ ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ. ಮುಳ್ಳಿನ ಹಾದಿಯನ್ನು ಹೂವಿನ ಹಾದಿಯಾಗಿಸಲು ಹೊರಟಿದ್ದೇನೆ. ಈ ನಡಿಗೆಯಲ್ಲಿ ಅಂದುಕೊಂಡಂತೆಯೇ ನಡೆದರೆ ಸಂಪೂರ್ಣ ಕಥೆ ಹೇಳಲು ಮತ್ತೆ ಬರುತ್ತೇನೆ. ಈಗ ಬಲು ದುರ್ಗಮ ಹಾದಿಯಲ್ಲಿದ್ದೇನೆ. ಇನ್ನೂ ಒಂದಷ್ಟು ದುರ್ಗಮ ಹಾದಿ ದಾಟಿದರೆ ಗಮ್ಯ ಮತ್ತಷ್ಟು ಹತ್ತಿರವಾಗುತ್ತದೆ. ಅತ್ತ ಸೂರ್ಯಾಸ್ತದ ವೇಳೆ ಬಾನಿನಲ್ಲಿ ಒಂದಷ್ಟು ಹಕ್ಕಿಗಳು ಕಣ್ಣ ಮುಂದೆ ತಮ್ಮ ಗಮ್ಯದತ್ತ ಹೊರಟಿರುವಂತೆಯೇ ನಾನೂ ಹೊರಟಿದ್ದೇನೆ. ಗಮ್ಯ ತಲುಪಿದ ಮೇಲೆ ಮತ್ತೆ ಬರೆಯುತ್ತೇನೆ. ಕನಸು ನನಸಾದ ಬಳಿಕ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಈಗೇನಿದ್ದರೂ ನನ್ನ ಕನಸು ಬೆಂಬತ್ತುವ ಸಮಯ, ಹೋಗಿ ಬರುವೆ.

6 comments:

VENU VINOD said...

ದೂರ ಪಿದಾಡಿನಿ ?

CHITHRA said...

Iduva hejje sthiravagiddaga thalupuva daari kooda sugamavagiruthhe alva? Aguthe bidi!!"

chidanand said...

annaa... nambikeye devaru,prayathnavedaarii,,,,,

chidanand said...

annaa... nambikeye devaru,prayathnave daarii,,,,,

KalavathiMadhusudan said...

sadhaneya haadiyalli kallu mullu sahaja,samasyeyanu geddavane sadhaka.nimma gurige yashasviyaagali.

Unknown said...

Namaste, E barahavannu namma NANNA POSTge (Blog'galannu parichayisuva putta ankana) balasikollabahudhe?

Vishvaasadhinadha,
Sahyadri Nagaraj (8722631300)
Kannadaprabha