tag:blogger.com,1999:blog-198281512024-03-07T14:17:53.215+05:30MY FEELINGSChevarhttp://www.blogger.com/profile/12119362877342017192noreply@blogger.comBlogger61125tag:blogger.com,1999:blog-19828151.post-92108267660572547172014-06-08T00:10:00.001+05:302014-06-08T00:10:26.318+05:30ಹತ್ತಿರದ ಸಂಬಂಧಿ ದೂರವಾದ ಬಗೆ<div dir="ltr" style="text-align: left;" trbidi="on">
<div style="text-align: justify;">
<strong>ಬ</strong>ದುಕು, ಮನಸು, ಸುಖ, ದುಃಖ. ನಿನ್ನೆ ಕಣ್ಣಲ್ಲಿ ಆನಂದ ಭಾಷ್ಪ. ಇಂದು ಮನಸ್ಸನ್ನು ಕಾಡಿದ ದುಗುಡದಿಂದ ಬಂದ ನಿಜವಾದ ಕಣ್ಣೀರು. ಯಾವುದನ್ನು ನನ್ನ ಎದೆಗೊತ್ತಲಿ, ಯಾವುದನ್ನು ನಾನೇ ದೂರ ಮಾಡಲಿ. ಕಣ್ಣೀರು ಹೇಗೆ ಬಂದರೂ ಮುಂದಿರುವವರಿಗೆ ಅರ್ಥವಾಗುತ್ತದೆ. ಅದಕ್ಕೆ ಕಣ್ಣನ್ನು ಓದುವ ಸಾಮರ್ಥ್ಯ ಬೇಕು.</div>
<div style="text-align: justify;">
</div>
<div style="text-align: justify;">
ಮಾನವ ಸಂಬಂಧ ಎಂದರೇನು..? ನಮಗೆ ಸಿಗುವ ಕ್ಷಣಿಕ ಸುಖ, ಅಪ್ಪ-ಅಮ್ಮ ಮೊಗೆದು ಕೊಡುವ ಪ್ರೀತಿ ಎಲ್ಲವನ್ನೂ ಕುರುಡಾಗಿಸುತ್ತಾ..? ಸಂಬಂಧಗಳಲ್ಲಿ ನಂಬಿಕೆ ಹೇಗೆ ಹುಟ್ಟಬೇಕು. ಕೆಲವೊಂದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೊರಡುವ ಹೊತ್ತಿಗೆ ನಾನು ಅನಾಥವಾಗಿ ಏಕಾಂಗಿಯಾಗಿ ನಿಂತ ಅನುಭವ. ತುಂಬಾ ನಂಬಿಕೆ ಹುಟ್ಟಿಸಿದವರು ಕಾಲ ಕಸವಾಗಿ ಮಾಡಿದ್ದಾರೆ. ಇವರು ಯಾವುದಕ್ಕೂ ಯೋಗ್ಯರಲ್ಲ ಎನಿಸಿಕೊಂಡವರು ನಮ್ಮನ್ನು ಬಿಟ್ಟು ಹೋದವರಿಗೆ ನಮ್ಮಿಂದ ಸಿಕ್ಕಿದ್ದ ಆಪ್ತತೆಯನ್ನು ಅವರಾಗೇ ಪಡೆಯಲು ಯತ್ನಿಸುತ್ತಾರೆ. ಯಾಕೆ ಹೀಗೆಂದು ಯೋಚಿಸಿದರೆ ಒಂದೂ ಗೊತ್ತಾಗುತ್ತಿಲ್ಲ. ಇನ್ನು ಮುಂದಿನದ್ದು ನಾನು ಆತ್ಮೀಯರೊಬ್ಬರ ಮುಂದೆ ಕುಳಿತಾಗ ಅವರು ಹೇಳಿದ ಮಾತು.</div>
<div style="text-align: justify;">
</div>
<div style="text-align: justify;">
ನಾಲ್ಕೈದು ವರ್ಷ ಹಿಂದೆ ಸಿಕ್ಕಿ ಜೊತೆಗಿದ್ದವರು ಇಂದು ನೀನ್ಯಾರೋ ಎಂದು ಕೇಳುತ್ತಿದ್ದಾರೆ. ಎದುರಿಗೆ ನಿಂತಾಗ ಕೇಳುವ ನೇರ ಪ್ರಶ್ನೆಗೆ ಕಣ್ಣಲ್ಲೇ ಕಣ್ಣಿಟ್ಟು ಉತ್ತರ ಹೇಳಲು ಸಾಧ್ಯ ಇಲ್ಲದೇ ಇದ್ದವರು ತಾವು ಮಹಾನ್ ಪ್ರಚಂಡ ಬುದ್ಧಿಶಾಲಿಗಳು ಎಂದು ಕೊಳ್ಳುತ್ತಾರೆ. ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಾರೆ. ತಮ್ಮ ಜೊತೆಗಿರುವವರು ತಮ್ಮನ್ನು ಹೀನಾಯವಾಗಿ ನಡೆಸಿಕೊಂಡರೂ, ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ಮಾತು ಹೇಳಿದರೂ ಸಹಿಸಿಕೊಂಡು ಯಾವುದೋ ಒಂದು ಹೆಸರಿಲ್ಲದ ಸಂಬಂಧ ಹೇಳಿಕೊಂಡು, ವಾಂಛೆಗೆ ಬಲಿಯಾಗಿ ತಮ್ಮನ್ನು ಅರ್ಪಿಸಿಕೊಂಡು ಆದರ್ಶದ ಮಾತುಗಳನ್ನಾಡುತ್ತಾರೆ.</div>
<div style="text-align: justify;">
</div>
<div style="text-align: justify;">
ಜೊತೆಗಿದ್ದವರನ್ನು ಬಲಿಕೊಟ್ಟವರು ಹೇಳಿದ ಮಾತನ್ನು ಒಂದು ದಿನ ಕೇಳಿಸಿಕೊಂಡಿದ್ದರೆ, ನನ್ನ ಜನ್ಮಕ್ಕೆ ಕಾರಣವಾದ ಅಪ್ಪ-ಅಮ್ಮ ಎಂಬ ಎರಡು ಮುದ್ದು ಜೀವದ ಯೋಚನೆಯಿದ್ದರೆ ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿದ್ದು ಒಂದೂರು, ಕೆಲಸ ಕೊಟ್ಟಿದ್ದು ಒಂದೂರು. ಅಂತಹ ಒಂದು ಊರಲ್ಲಿ ಏನು ನಡೆದರೂ ಮನೆಯಲ್ಲಿ ಯಾರಿಗೂ ಗೊತ್ತಾಗಲ್ಲ ಎಂದು ಹೊರಟವರಿಗೆ ಎಂದೋ ಒಂದು ದಿನ ಜ್ಞಾನೋದಯವಾಗಿ ಅಪ್ಪ-ಅಮ್ಮನಿಗೆ ನಾನು ಮೋಸ ಮಾಡಿದ್ದೇನಾ ಎಂದು ಪ್ರಶ್ನಿಸಿಕೊಳ್ಳುತ್ತಾರೆ. ಉತ್ತರ 'ಹೌದು' ಎಂದು ಗೊತ್ತಿದ್ದರೂ ಮನಸ್ಸಿನ ಕೆರಳಿದ ಭಾವನೆಗಳು ಅವೆಲ್ಲವನ್ನೂ ಗೌಣವಾಗಿಸುತ್ತವೆ. ಅಲ್ಲಿ ಅಪ್ಪ ಅಮ್ಮನಿಗೆ ಮತ್ತದೇ ಆತ್ಮವಂಚನೆ. ಮುದ್ದು ಕಂದಮ್ಮಗಳ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಒಂಚೂರು ಒಳ್ಳೆಯ ಮಾತು ಹೇಳಿದರೆ ನೀನ್ಯಾವನೋ ಬಡವಾ ಅಂತಾ ಪ್ರಶ್ನೆ.</div>
<div style="text-align: justify;">
</div>
<div style="text-align: justify;">
ಕಷ್ಟ ಕಾಲದಲ್ಲಿ ಕೇಳಲು ಕಿವಿಯಿತ್ತು ಎಂದುಕೊಂಡು ಮನದ ಸಂಕಟಗಳನ್ನೆಲ್ಲಾ ಹೇಳಿಕೊಂಡಾಗ ನಾ ಜೊತೆಗಿದ್ದೀನಿ ಎಂಬ ಭಾವ ನೀಡಿದವರು, ಅವರನ್ನು ಹಳ್ಳಕ್ಕೆ ಹಿಡಿದು ದೂಡಿದಾಗಲೂ ಅವರ ಬಗ್ಗೆ ಒಂದಕ್ಷರ ಮಾತು ಬರಲ್ಲ. ಅವರು ದೇವತಾ ಸ್ವರೂಪಿಗಳು. ಕೆಲವು ವಿಷಯಗಳು ಬಂದಾಗ ಎಲ್ಲವೂ ಮೌನ, ಮೌನ ಮೌನ. ಇಷ್ಟಪಟ್ಟವರು ಕೇಳಿದರೆ ಭದ್ರಕಾಳಿಯ ರೂಪ, ಇಷ್ಟ ಪಡದೇ ಇರುವವರು ತಮ್ಮ ತೆವಲಿಗೆ ಕೇಳಿದರೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಕೇಳಿಸಿಕೊಂಡವರೋ ಗಂಟಲಿಗೆ ಎಣ್ಣೆ ಬಿದ್ದಾಗ ಕೇಳಿಸಿಕೊಂಡಿದ್ದೂ ಅಲ್ಲದೆ ಒಂಚೂರು ಒಗ್ಗರಣೆಯನ್ನೂ ಸೇರಿಸಿ ಮಾತನಾಡುತ್ತಾರೆ. ಎಲ್ಲವನ್ನೂ ಕೇಳಿಸಿಕೊಂಡಿದ್ದೇನೆ, ಮೌನವಾಗಿದ್ದೇನೆ. </div>
<div style="text-align: justify;">
</div>
<div style="text-align: justify;">
ಎಷ್ಟೋ ಸಾರಿ ಕಠೋರ ಸತ್ಯದ ಅರಿವಿದ್ದರೂ, ಎರಡಲಗಿನ ಕತ್ತಿಯ ನಡುವೆ ನಾನಿದ್ದೀನಿ ಎಂದು ಗೊತ್ತಿದ್ದರೂ ಜೊತೆಗಿರುವವರಿಗೆ ನೋವಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಕಾರಣ ಒಂದೇ, ಸಂಬಂಧ ಒಳ್ಳೆಯದಿದ್ದಾಗ ನೀವು ನೀಡಿದ ಪ್ರೀತಿ. ಆ ಪ್ರೀತಿ ನಾನು ಯಾರ ಬಳಿ ಹೋದರೂ ಸಿಗಲ್ಲ. ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಮಾಡಿಲ್ಲ. ನಿಮ್ಮ ಮೇಲಿನ ಪ್ರೀತಿ ಅದು ಮೊದಲ ಭೇಟಿಯಾಗಿ ಆತ್ಮೀಯರಾಗುವಾಗ ಎಷ್ಟಿತ್ತೋ ಅಷ್ಟೇ ಪ್ರಮಾಣದಲ್ಲಿ ಈಗಲೂ ಇದೆ. ಮುಂದೆಯೂ ಇರುತ್ತದೆ. </div>
<div style="text-align: justify;">
</div>
<div style="text-align: justify;">
ಯಾರೋ ಹೇಳಿದ ಮಾತು ಕೇಳಿ ಅದರ ಬಗ್ಗೆ ಒಂದು ಸಣ್ಣ ಸ್ಪಷ್ಟನೆಯನ್ನೂ ಕೇಳದೇ ನಿರ್ಗಮಿಸೋ ನಿಮಗೆ ಒಳ್ಳೆಯದಾಗಲಿ. ಒಂದು ಕಾಲದಲ್ಲಿ ಕ್ಯಾಕರಿಸಿ ಉಗಿದೋರನ್ನು ಅಪ್ಪಿ ಮುದ್ದಾಡುವಾಗ ಎಲ್ಲರಿಗೂ ಒಂದು ನೆನಪಿರಬೇಕು. ಒಂದೊಮ್ಮೆ ಕಾಲ ಬಂದೇ ಬರುತ್ತದೆ. ಅಂದು ಎಲ್ಲವನ್ನೂ ತಿರುಗಿಸಿ ಹೇಳುವ ಮನಸ್ಸು ಹೇಳಿದ್ದನ್ನು ಕೇಳಬೇಕಾಗುತ್ತದೆ. ಆ ಅಸಹ್ಯ ಯಾರಿಗೂ ಬಾರದೇ ಇರಲಿ. ನನ್ನ ದ್ವೇಷಿಸಿದ ಎಲ್ಲರಿಗೂ ಒಳ್ಳೆಯದಾಗಲಿ. ಕೆಲವು ಸತ್ಯಗಳು ನನ್ನೊಂದಿಗೇ, ನನ್ನಲ್ಲೇ, ಮೂರನೇಯವರಿಗೆ ಗೊತ್ತಾಗದೇ ಮುಗಿದು ಹೋಗಲಿ. ಒಂದು ಸಂಬಂಧ ಮತ್ತೆ ಹುಟ್ಟುವ ಶುಭ ಘಳಿಗೆ ಅಂದ್ರೆ ಇದೇನಾ..?</div>
<div style="text-align: justify;">
</div>
<div style="text-align: justify;">
(ಯಾರೋ ಆತ್ಮೀಯರೊಬ್ಬರು ತುಂಬಾ ಭಾವುಕರಾಗಿ ಮುಂದೆ ಕುಳಿತು ಹೇಳಿದ ಮಾತುಗಳಿದವು. ಇಲ್ಲಿರುವ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಮಾನವ ಸಂಬಂಧಗಳಲ್ಲಿ ನಂಬಿಕೆ ಇಟ್ಟುಕೊಂಡಿರುವವನಾಗಿದ್ದುಕೊಂಡು ಅವರು ಹೇಳಿದ ಮಾತನ್ನು ಈ ಪೋಸ್ಟ್ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ. ಓದಿದ್ದಕ್ಕೆ ಧನ್ಯವಾದ.)</div>
<div style="text-align: justify;">
</div>
</div>
Chevarhttp://www.blogger.com/profile/12119362877342017192noreply@blogger.com2tag:blogger.com,1999:blog-19828151.post-68718637009771977582013-11-01T01:45:00.000+05:302013-11-01T01:45:16.586+05:30ಮನಸಿನ ಭಾವಗಳು ಬದಲಾದಾಗ...!<div dir="ltr" style="text-align: left;" trbidi="on">
<div style="text-align: justify;">
<br /><span style="font-size: large;"><b>ಸಂ</b></span>ಬಂಧಗಳು ಹಾಗೇನೇ... ಒಂದು ಸಾರಿ ತುಂಬಾ ಆಪ್ತವೆನಿಸುತ್ತದೆ. ಇನ್ನೊಂದು ಬಾರಿ ತುಂಬಾ ಬೋರ್ ಅನ್ನಿಸುತ್ತದೆ. ಕೆಲವು ಬಾರಿ ಹಿಂಸೆ, ಕೆಲವು ಸಾರಿ ವಿಕೃತಿಯನ್ನೂ ಮಾಡಿಸಿಬಿಡುತ್ತದೆ.<br /><br />ನಾವು ತುಂಬಾ ಆಪ್ತರೆನಿಸಿಕೊಂಡವರ ಮೌನ ಕೆಲವು ಸಾರಿ ನಮಗೆ ಸಹಿಸಲಸಾಧ್ಯ ಎನ್ನುವ ಹಂತಕ್ಕೆ ನಮ್ಮನ್ನು ತಂದು ನಿಲ್ಲಿಸುತ್ತದೆ. ಆದರೆ ಆ ಸಂಬಂಧವೊಂದು ಕೆಡಲು ಕಾರಣವೂ ಇರುತ್ತದೆ. ಆದರೆ ಹೇಳಬೇಕಾದವರು ಮುನಿಸಿಕೊಂಡರೆ, ಏನೂ ಹೇಳದೆ ಸುಮ್ಮನಿರುವ ಭಾವ ಇದೆಯಲ್ಲಾ. ಅದು ಇಡೀ ದಿನ ನಮ್ಮ ಮನವನ್ನು ಕಾಡುತ್ತಿರುತ್ತದೆ.<br /><br />ಬಾಲ್ಯದಿಂದಲೂ ನಾನು ಕೆಲವೇ ಕೆಲವು ಸಂಬಂಧಗಳನ್ನು ತುಂಬಾ ಆಪ್ತವೆನಿಸಿಕೊಂಡು ಆರಾಧಿಸಿದ್ದೇನೆ. ನನ್ನ ಜೊತೆಗಿದ್ದಾರೆ ಎಂಬ ಅರಿವಾದ ಕೂಡಲೇ ಅವರಿಗೂ ನನಗಿಂತ ಹೆಚ್ಚು ಕಂಫರ್ಟ್ ಕೊಟ್ಟಿದ್ದೇನೆ. ಆದರೆ ಆ ಕಂಫರ್ಟ್ ನಲ್ಲಿ ಕೂರಲು ಇಷ್ಟವಿಲ್ಲದೇ ಇರುವವರು ಇರಬಾರದ ಕಾರಣ ಹುಡುಕಿ ಜಾಗ ಖಾಲಿ ಮಾಡಿದ್ದಾರೆ. ತಪ್ಪಿನ ಅರಿವಾದವರು ಹೋದಷ್ಟೇ ವೇಗವಾಗಿ ವಾಪಸ್ ಬಂದಿದ್ದಾರೆ.<br /><br />ಬಾರದೇ ಇರುವವರಿಗೆ ನಾನು ಎಂದಿನಂತೆ ಕಾಯುತ್ತಿರುತ್ತೇನೆ. ನನ್ನದಲ್ಲದ ತಪ್ಪಿಗೆ ನನ್ನಿಂದ ದೂರವಾದವರು ನನ್ನ ಅರ್ಥ ಮಾಡಿಕೊಂಡು ಮತ್ತೆ ವಾಪಸ್ ಬಂದೇ ಬರುತ್ತಾರೆ ಎಂಬ ಭರವಸೆಯೊಂದಿಗೆ. ನನ್ನ ತಪ್ಪೇನು ಎಂದು ಕುಳಿತು ಯೋಚಿಸಲು ಆರಂಭಿಸಿದರೆ ನನಗಿಂತ ನನ್ನ ಜೊತೆ ಸಿಟ್ಟು ಮಾಡಿಕೊಂಡು ಹೊರಟವರ ತಪ್ಪೇ ಹೆಚ್ಚಿರುತ್ತದೆ. ಆದರೂ ಮೌನವಾಗಿರುತ್ತೇನೆ. ಯಾಕೆಂದರೆ ನನ್ನ ಜೊತೆಗಿರುವವರ ಮನಸು ಅವರಿಗೆ ಇಷ್ಟವಿದ್ದೋ, ಇಲ್ಲದೆಯೋ ಎಲ್ಲವನ್ನೂ ಮಾಡಿಸಿರುತ್ತದೆ. ಅವರ ಮನಸ್ಸಿಗೆ ಸ್ವಂತಿಕೆ ಇಲ್ಲದೇ ಇದ್ದಾಗ, ನನ್ನನ್ನು ದೂರ ಮಾಡು ಎಂದು ಇನ್ಯಾರೋ ಊದಿದ ಪೀಪಿಗೆ ಕಿವಿಗೊಡುವವರಿಗೆ ನಮ್ಮ ಭಾವಗಳು ಅರ್ಥವಾಗುವುದೇ ಇಲ್ಲ. ಆದರೆ ಕೊನೆಗೊಂದು ದಿನ ಇದೆಲ್ಲಾ ಗೊತ್ತಾಗಿ ಅವರು ವಾಪಸ್ ಬಂದಾಗ ಅಷ್ಟೇ ಅಪ್ಯಾಯಮಾನತೆಯಿಂದ ಸ್ವೀಕರಿಸಿದ್ದೇನೆ.<br /><br />ಬದುಕಿನಲ್ಲಿ ನಾನು ಯಾವುದನ್ನು ಕಳೆದುಕೊಂಡಾಗಲೂ ನನ್ನ ತಪ್ಪಿದೆಯಾ ಎಂದು ಯೋಚಿಸಿ, ತಪ್ಪಿದ್ದರೆ ನಾನೇ ಮುಂದೆ ಹೋಗಿ ದೂರವಾಗಲು ಹೋದವರನ್ನು ಹತ್ತಿರಕ್ಕೆಳೆಯುತ್ತೇನೆ. ಇದನ್ನೆಲ್ಲವನ್ನೂ ಮೀರಿ ನಾನಿರುವುದೇ ಹೀಗೆ ಎಂದು ಹೊರಟವರನ್ನು ದೂರದಲ್ಲೇ ನಿಂತು ಹಾರೈಸಿದ್ದೇನೆ. ಯಾವುದೇ ಕ್ಷಣದಲ್ಲಿ ಅವರು ವಾಪಸ್ ಬರಬಹುದು ಎಂಬ ಸದಾಶಯದೊಂದಿಗೆ...<br /><br />ಅಷ್ಟಕ್ಕೂ ಜೊತೆಗಿದ್ದವರ ಮನಸಿನ ಭಾವಗಳು ಬದಲಾಗುವುದೇಕೆ ಎಂಬ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಗುತ್ತಿಲ್ಲ. ಇಷ್ಟು ಮುಗಿಸುತ್ತಿದ್ದಂತೆ ಮೊಬೈಲ್ ರಿಂಗ್ ಆಯ್ತು. ನನ್ನ ಬಿಟ್ಟು ಹೋದವರಿರಬಹುದಾ ಎಂಬ ನಿರೀಕ್ಷೆಯೊಂದಿಗೆ ಫೋನ್ ಎತ್ತಿ ಕಿವಿಗಿಡುತ್ತೇನೆ..</div>
</div>
Chevarhttp://www.blogger.com/profile/12119362877342017192noreply@blogger.com0tag:blogger.com,1999:blog-19828151.post-27100865205845422772013-04-21T02:00:00.001+05:302013-04-21T02:00:40.025+05:30ಗಮ್ಯ ಹುಡುಕುತ್ತಾ ನಡುವೆ ವಿರಾಮದಲಿ...!!<div dir="ltr" style="text-align: left;" trbidi="on">
<div style="text-align: justify;">
<b>ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ<br />ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ</b><br /><br />ನಿಸಾರ್ ಅಹಮದ್ ಅವರ ಈ ಸಾಲುಗಳನ್ನು ಈ ಹೊತ್ತಿಗೆ ಕೇಳುತ್ತಾ ಕುಳಿತರೆ ಮನದಲ್ಲಿ ಆದೇಕೋ ಒಂಥರಾ ಭಾವ. ಏನಾಗಿದೆ, ಏನಾಗ್ತಿದೆ. ಒಂದೂ ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ಮನಸೇನು ಹಂಬಲಿಸುತ್ತಿದೆ ಅದೂ ಅರ್ಥ ಆಗುತ್ತಿಲ್ಲ.<br /><br />ಬಹುಶಃ ಕಳೆದ ಬಾರಿ ನಾನು ಬರೆದಾಗ ನಾನೊಂದು ಗಮ್ಯದ ಬಗ್ಗೆ ಬರೆದಿದ್ದೆ. ಗಮ್ಯ ಸುಂದರವಾಗಿತ್ತು. ಗಮ್ಯದ ಹಾದಿಯನ್ನೂ ಚೆನ್ನಾಗಿಯೇ ಸವೆಸುತ್ತಿದ್ದೆ. ಆದರೆ ಹೊರಡುವ ಮೊದಲೇ ಹೇಳಿದ್ದೆ ಇದು ದುರ್ಗಮ ಹಾದಿ. ಕ್ಷಣ ಕ್ಷಣಕ್ಕೂ ಇಲ್ಲಿ ಎಲ್ಲವೂ ನನ್ನನ್ನು ಹೊಸಕಿ ಹಾಕುತ್ತದೆ. ಆದೇ ರೀತಿ ಆಗುತ್ತಿದೆ. ಆದರೆ ಗಮ್ಯ ಗಮ್ಯವೇ. ನಾನದನ್ನು ತಲುಪಿಯೇ ತಲುಪುತ್ತೇನೆ ಎಂಬ ಪರಿಪೂರ್ಣ ಆತ್ಮವಿಶ್ವಾಸ ನನಗಿದೆ. ತುಂಬಾ ದಿನಗಳ ಕಾಲ ಈ ಕಡೆ ತಲೆ ಹಾಕದೇ ಗಮ್ಯದ ಬಗ್ಗೆ ಗಮನ ಹರಿಸೋಣ ಅಂತಿದ್ದೆ. ಆದರೆ ಮನಸ್ಯಾಕೋ ಕೇಳುತ್ತಿಲ್ಲ. ಏನಾದ್ರೂ ಬರೀಬೇಕು ಎಂದು ತುಡಿಯುತ್ತಿದೆ. ಅದಕ್ಕೆ ಈ ಬರವಣಿಗೆ. ಇದೊಂದು ಕಾಲಹರಣದ ಬರಹ. ಆದರೆ ಕೆಲವು ನಿಮ್ಮ ಜೀವನದಲ್ಲಿ ಆಗಿರಬಹುದು.<br /><br />ಮನದಲ್ಲಿ ಅದೇಕೋ ದುಗುಡ, ಮನದಲ್ಲಿ ಅದೇನೋ ಯೋಚನೆ. ಈ ಎಲ್ಲವನ್ನೂ ಮೆಟ್ಟಿ ನಿಂತು ನಾನು ಹೊರಗೆ ಬರುತ್ತೀನಾ? ಗೊತ್ತಿದ್ದೋ ಗೊತ್ತಿಲ್ಲದೆಯೋ ನಾನ್ಯಾವತ್ತೂ ನನ್ನ ಆತ್ಮೀಯರನ್ನು ವಂಚಿಸಿಲ್ಲ. ಆದರೆ ಅವರು ವಂಚನೆಗೊಳಗಾಗುತ್ತಾರೆ ಎಂದು ಗೊತ್ತಾದಾಗಲೂ ನಾನು ಅವರಿಗೆ ಅದನ್ನು ಹೇಳದಿದ್ದರೆ ನಾನೊಬ್ಬ ಆತ್ಮೀಯ ಅಂತ ಹೇಳಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಅಂತಾ ಅವರಿಗೆ ನಾನು ಎಲ್ಲವನ್ನೂ ಹೇಳಿದ್ದೇನೆ. ಇದು ನಾನು ಪಿಯುಸಿ ಮುಗಿದಾಗಿನಿಂದಲೂ ರೂಢಿಸಿಕೊಂಡಿರೋ ಪದ್ಧತಿ. ಕೆಲವರಿಗೆ ಇದು ಇಷ್ಟವಾಗಿದೆ. ಹೆಚ್ಚಿನವರಿಗೆ ಕಷ್ಟವಾಗಿದೆ.<br /><br />ಅಂದಿನಿಂದಲೂ ನಾನು ಹಲವು ಸಂಗತಿಗಳನ್ನು ಈಗಲೂ ನಾನು ನನ್ನಲ್ಲೇ ಇಟ್ಟುಕೊಂಡು ಬಿಟ್ಟಿದ್ದೇನೆ. ಅದೊಂಥರಾ ಚಿದಂಬರ ರಹಸ್ಯ. ಪ್ರಾಣ ಹೋದರೂ ನಾನು ಗುಟ್ಟು ಬಿಟ್ಟು ಕೊಡಲ್ಲ. ಆದರೆ ನಾನು ಸರಿ ಎಂಬ ಭಾವದಲ್ಲಿ ನಮಗೇ ಅಂತಹ ಒಂದು ನವಿರಾದ ಮೋಸವಾದಾಗ ನನಗೆ ಅದು ತಾಕಿಲ್ಲೆಂದು ಹೇಳುವವರಿಗೆ ನಾವೇನು ಹೇಳಲು ಸಾಧ್ಯ ಅಥವಾ ಅದು ನಮ್ಮ ಆತ್ಮೀಯರು ಅನಿಸಿಕೊಂಡವರಿಗೆ ತಾಕಲ್ಲ ಎಂದರೆ ನಾನೇನು ಮಾಡಲು ಸಾಧ್ಯ ಹೇಳಿ. <br /><br />ಹೀಗೆ ನನ್ನ ಯೋಚನಾ ಲಹರಿ ಮುಂದುವರಿಯುತ್ತದೆ. ನಾನು ಯಾವತ್ತೂ ಬೆಳಕಿಗೆ ಹಾಗೂ ಕತ್ತಲಿಗೆ ಹೆದರಿದವನಲ್ಲ. ಆದರೆ ಬೆಳಕಿನ ಹೊತ್ತಲ್ಲೇ ನಮ್ಮ ಕಣ್ಣನ್ನು ಕತ್ತಲಾಗಿಸಲು ಯಾರಾದರೂ ಬಂದರೆ ಅದಕ್ಕೆ ನಾನು ಹೆದರುತ್ತೇನೆ. ಆದರೆ ಅದು ನನಗೆ ಗೊತ್ತಾಗೇ ಆಗುತ್ತೆ. ಬಹುಶಃ ಇದುವರೆಗೆ ನಾನು ನನ್ನ ಆತ್ಮೀಯರೆನಿಸಿಕೊಂಡ ಕೆಲವರನ್ನು ಕಳೆದುಕೊಳ್ಳುವ ಹಂತದವರೆಗೆ ಬಂದಿದ್ದು ಇದೇ ಕಾರಣಕ್ಕೆ. ಕೆಲವರು ತಾವು ತಪ್ಪು ಮಾಡುತ್ತಾ ತಾವೇನೂ ಮಾಡೇ ಇಲ್ಲವೇನೋ ಎಂಬಂತೆ ಮುಂದೆ ಬಂದು ನಿಂತರು. ಆತ್ಮವಿಶ್ವಾಸವಿಲ್ಲದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವವರನ್ನು ನಾವೇನು ಮಾಡಲು ಸಾಧ್ಯ ಹೇಳಿ. ಎಲ್ಲರನ್ನೂ ನಾನು ಅವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಹೇಳಿದಾಗ ಎಲ್ಲರೂ ಬೆರಗಾಗಿದ್ದಾರೆ. ನಮಗಿದೆಲ್ಲಾ ಗೊತ್ತಿರಲಿಲ್ಲ ಎಂದವರೂ ಇದ್ದಾರೆ. <br /><br />ನಾನ್ಯಾವತ್ತೂ ಆತ್ಮೀಯರ ಆಯ್ಕೆಯಲ್ಲಿ ತುಂಬಾ ಚೂಸಿ. ಆದರೆ ಒಂದು ಸಾರಿ ಹಚ್ಚಿಕೊಂಡು ಬಿಟ್ಟರೆ ಮತ್ಯಾವತ್ತೂ ಅವರನ್ನು ಬಿಟ್ಟು ಕೊಟ್ಟೇ ಇಲ್ಲ. ಅವರಾಗೇ ಬಿಟ್ಟು ಹೋಗುತ್ತೇವೆ ಅಂದ್ರೂ ಮಧುರ ಸಂಬಂಧವೊಂದರ ಉಳಿಕೆಗಾಗಿ ನಾನು ಕಾಂಪ್ರಮೈಸ್ ಆಗ್ತೀನಿ. ಹೀಗಂತ ಹೇಳಿ ನಾನು ತಪ್ಪು ಮಾಡೇ ಇಲ್ವಾ. ನಾನಿಲ್ಲ ವೆಂದರೂ ನನ್ನ ಮನಸು ಒಪ್ಪಿಕೊಳ್ಳಲ್ಲ. ತಪ್ಪುಗಳಾದಾಗ ನಾನೇ ಅವರ ಮೊಗದಲ್ಲಿ ಒಂದು ನಗು ಅರಳುವವರೆಗೆ ಸುಮ್ಮನಿರಲ್ಲ. ಸಾರಿ ಕೇಳ್ತೀನಿ, ಕಾಲೆಳೆಯುತ್ತೀನಿ. ಕೊನೆಗೆ ಅವರೇ ಒಂದು ಥ್ಯಾಂಕ್ಸ್ ಅಂದು ಹೋಗಿ ಬಿಡ್ತಾರೆ. ಆ ಥ್ಯಾಂಕ್ಸ್ ನಲ್ಲಿ ಒಂದು ಪ್ರಾಮಾಣಿಕತೆಯಿದೆ ಎಂದು ನನಗನಿಸಿದರೆ ನನ್ನ ಕಣ್ಣು ತುಂಬಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ನನ್ನಲ್ಲೂ ಒಂದು ಸಂವೇದನೆ ಅನ್ನೋದು ಬಾಕಿ ಉಳಿದಿದೆ.<br /><br />ಗಮ್ಯದ ಕಡೆ ಲಕ್ಷ್ಯ ಕೊಟ್ಟು ಹೊರಟ ನಾನೆಂಬ ದಾರಿ ಹೋಕನಿಗೆ ಹಾದಿಯಲ್ಲಿ ಹಲವು ಎಡರು ತೊಡರುಗಳು ಸಿಕ್ಕಿವೆ. ಯಾಕೋ ಈ ದಾರಿಯಲ್ಲಿ ನಾನು ಹೋಗುತ್ತಿರುವಾಗ ಸುಮಾರು ವರ್ಷಗಳ ಹಿಂದೆ ಹಾಗೂ ಇತ್ತೀಚೇಗೆ ನಡೆದ ಒಂದಷ್ಟು ವಿಷಯಗಳು ನೆನಪಾದವು. ಅದಕ್ಕೆ ಗಮ್ಯದ ಮಧ್ಯೆ ಒಂದು ನಿಲ್ದಾಣದಲ್ಲಿ ಕುಳಿತು ಬರೆಯುತ್ತಿದ್ದೇನೆ. ನಿಮಗಿಷ್ಟವಾಗಿದೆ ಎಂಬ ಭರವಸೆಯೊಂದಿಗೆ ವಿರಮಿಸುವೆ.<br /><br /></div>
</div>
Chevarhttp://www.blogger.com/profile/12119362877342017192noreply@blogger.com0tag:blogger.com,1999:blog-19828151.post-85287282066477586232013-02-18T01:17:00.000+05:302013-02-18T01:17:01.437+05:30ಗಮ್ಯ ತಲುಪಲು ಹೊರಟಿದ್ದೇನೆ..!<div dir="ltr" style="text-align: left;" trbidi="on">
<div style="text-align: justify;">
<b><span style="font-size: large;">ಕ</span></b>ಳೆದೊಂದು ತಿಂಗಳಿಂದ ಕನಸು ಎಂಬ ಮೂರಕ್ಷರದ ಹಿಂದೆ ಬಿದ್ದಿದ್ದೇನೆ. ಈ ರೀತಿ ಕನಸೆಂಬ ಕುದುರೆಯನ್ನೇರುತ್ತೇನೆ ಎಂದು ಬಹುಶಃ ನನಗೇ ಗೊತ್ತಿರಲಿಲ್ಲ. ಆದರೆ ಈಗ ಕುದುರೆ ಏರಿಯಾಗಿದೆ. ಯುದ್ಧ ಗೆಲ್ಲುತ್ತೇನಾ, ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇನ್ನೇನಿದ್ದರೂ ಗುರಿ ಸಾಧಿಸುವ ತವಕ.<br /><br />ಆ ಮಹತ್ವದ ಗುರಿ ಸಾಧಿಸುತ್ತೇನಾ ಗೊತ್ತಿಲ್ಲ. ಒಂದಂತೂ ನಿಜ. ನಾನು ತಲುಪಬೇಕೆಂದಿರುವ ಗಮ್ಯ ನನ್ನ ಕಣ್ಣ ಮುಂದೆ ಅಚ್ಚಳಿಯದೆ ಸದಾ ಇರುತ್ತದೆ. ಆದರೆ ದಾರಿಯಲ್ಲಿ ಒಂದಷ್ಟು ಅಡೆ ತಡೆಗಳು, ವ್ಯರ್ಥ ಪ್ರಲಾಪಗಳು ಎಲ್ಲಾ ಜೀವನದ ಹಾದಿಯಲ್ಲಿ ಬರುವಂತೆ ಬರುತ್ತದೆ. ಈ ಕನಸು ಸಾಕಾರವಾದರೆ ನಾನು ಈ ಜಗತ್ತಿನ ಸ್ವರ್ಗಸುಖಿ. <br /><br />ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಒಂದಿಷ್ಟು ಸೆಂಟಿಮೆಂಟಲ್ ಗಳಿಗೆ ತಲೆ ಬಾಗುತ್ತಿದ್ದೇನಾ ಎಂದು ಮನಸು ಯೋಚಿಸಿರುತ್ತದೆ. ಆದರೆ ಕೆಲವು ಗಮ್ಯವನ್ನು ತಲುಪಬೇಕಾದರೆ ಕೆಲವೊಂದೆಡೆ ನಾನು ಶರಣು ಶರಣಾರ್ಥಿ ಎಂದು ತಲೆಬಾಗಲೇ ಬೇಕಾದೀತು. ಅದರಲ್ಲಿ ಕೆಲವೊಂದು ಮೂರು ವಾರದ ಹಿಂದೆ ನಡೆದು ಹೋಯಿತು.<br /><br />ನಾನು ತಪ್ಪು ಮಾಡುತ್ತಿದ್ದೇನಾ..? ಹಾಗಂತ ಹೇಳಲು ಯಾವುದೇ ಕಾರಣಗಳಿಲ್ಲ. ಮನಸಿನಲ್ಲಿ ಬಿತ್ತಿದ ಕನಸಿಗೆ ಜೀವ ತುಂಬಲು ಹಾಗೆ ಮುಂದುವರಿಯಲೇ ಬೇಕಾದ ಅನಿವಾರ್ಯತೆ. ಕಳೆದ ವಾರ ಅದರಲ್ಲಿ ಒಂದೆರಡು ಹಂತಗಳನ್ನು ದಾಟಿದ್ದೇನೆ. ಆದರೆ ಈ ಮುಳ್ಳಿನ ಹಾದಿಯಲ್ಲಿ ಎಷ್ಟು ಸರಿಸಿದರೂ ಮುಳ್ಳಿನ ಮೇಲೆ ಕಾಲಿಟ್ಟರೆ ನೋವು ಅನುಭವಿಸಲೇಬೇಕು. ಅದನ್ನು ಎಷ್ಟು ತಪ್ಪಿಸಬೇಕೆಂದು ಹೊರಟರೂ ಯಾವುದೇ ತರಚಿದ ಗಾಯಗಳಿಲ್ಲದೆ ಮುಂದೆ ನಡೆಯಬೇಕಾದರೆ ಅದು ಸೂಕ್ಷ್ಮವಾದ ನಡಿಗೆಯಾಗಿರಬೇಕು. ಎಷ್ಟು ಸರಿಸಿ ನಡೆದರೂ ಹಾದಿ ದುರ್ಗಮವಾಗುತ್ತಿದೆ ಎಂದು ಅನಿಸುತ್ತಿದೆ. <br /><br />ನಾನು ಈ ಪಾಟಿ ಒಂದು ಕೆಲಸಕ್ಕೆ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ಅನುಭವವಾಗಿತ್ತು. ಆದರೆ ಗಮ್ಯ ತಲುಪುವ ಮುನ್ನವೇ ನನ್ನ ದಾರಿಯಲ್ಲಿ ಬೇರಿನ್ಯಾರೋ ಬಂದರು. ಅಲ್ಲಿಗೆ ನನ್ನ ಉತ್ಸಾಹ ತುಂಬಿದ್ದ ಬುತ್ತಿಗೆ ಚುಚ್ಚಿದ ಅನುಭವ. ಆದರೆ ಅದು ಸೋಲಾಗಲಿಲ್ಲ. ಆಮೇಲೆ ಯಾವತ್ತೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈ ಕನಸಿನ ಹಾದಿಯಲ್ಲಿ ಈಗಾಗಲೇ ಯಶಸ್ಸಿನ ಶೇ.25ರಷ್ಟು ಹಾದಿಯನ್ನು ಸವೆಸಿದ್ದೇನೆ. ಇದು ಬೇಕಾ, ಬೇಡವಾ ಎಂದು ಯೋಚಿಸಿದ್ದೇನೆ. ಬಹಳ ದಿನಗಳ ಯೋಚನೆಗಳ ಬಳಿಕ ಒಂದು ತಿಳಿದುಕೊಂಡಿದ್ದೇನೆ. ಹಾದಿ ಕಠಿಣವಿದೆ. ಆದರೆ ಒಂದು ಸಾರಿ ನಾನು ಆ ಗಮ್ಯವನ್ನು ತಲುಪಿದರೆ ಬಹುಶಃ ಅದೇ ನನ್ನ ಪಾಲಿನ ಜೀವನದ ಅವಿಸ್ಮರಣೀಯ ದಿನ. ಆ ದಿನ ಅವಿಸ್ಮರಣೀಯ ಘಳಿಗೆಯಲ್ಲಿ ಪಾಲುದಾರರಾಗಲು, ಯಶಸ್ಸಿನ ಬಳಿಕ ಒಂದು ಹ್ಯಾಟ್ಸ್ ಆಫ್ ಹೇಳಲು ಎಲ್ಲರೂ ಇರುತ್ತಾರೆ. ಆ ಕ್ಷಣ ಕಣ್ಣಂಚು ತೇವಗೊಳ್ಳಲೇಬೇಕು.<br /><br />ನನ್ನ ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ. ಮುಳ್ಳಿನ ಹಾದಿಯನ್ನು ಹೂವಿನ ಹಾದಿಯಾಗಿಸಲು ಹೊರಟಿದ್ದೇನೆ. ಈ ನಡಿಗೆಯಲ್ಲಿ ಅಂದುಕೊಂಡಂತೆಯೇ ನಡೆದರೆ ಸಂಪೂರ್ಣ ಕಥೆ ಹೇಳಲು ಮತ್ತೆ ಬರುತ್ತೇನೆ. ಈಗ ಬಲು ದುರ್ಗಮ ಹಾದಿಯಲ್ಲಿದ್ದೇನೆ. ಇನ್ನೂ ಒಂದಷ್ಟು ದುರ್ಗಮ ಹಾದಿ ದಾಟಿದರೆ ಗಮ್ಯ ಮತ್ತಷ್ಟು ಹತ್ತಿರವಾಗುತ್ತದೆ. ಅತ್ತ ಸೂರ್ಯಾಸ್ತದ ವೇಳೆ ಬಾನಿನಲ್ಲಿ ಒಂದಷ್ಟು ಹಕ್ಕಿಗಳು ಕಣ್ಣ ಮುಂದೆ ತಮ್ಮ ಗಮ್ಯದತ್ತ ಹೊರಟಿರುವಂತೆಯೇ ನಾನೂ ಹೊರಟಿದ್ದೇನೆ. ಗಮ್ಯ ತಲುಪಿದ ಮೇಲೆ ಮತ್ತೆ ಬರೆಯುತ್ತೇನೆ. ಕನಸು ನನಸಾದ ಬಳಿಕ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಈಗೇನಿದ್ದರೂ ನನ್ನ ಕನಸು ಬೆಂಬತ್ತುವ ಸಮಯ, ಹೋಗಿ ಬರುವೆ.<br /></div>
</div>
Chevarhttp://www.blogger.com/profile/12119362877342017192noreply@blogger.com6tag:blogger.com,1999:blog-19828151.post-91699031181402565262012-11-13T01:47:00.000+05:302012-11-13T01:47:15.035+05:30ಹಣತೆ ಬೆಳಗುತಿದೆ, ಮನದಲಿ ಕತ್ತಲಿದೆ..!!!<div dir="ltr" style="text-align: left;" trbidi="on">
<span lang="EN">
<div style="text-align: justify;">
ಇದು ದೀಪಗಳ ಹಬ್ಬದ ಸಂಭ್ರಮದ ಸಮಯ. ಕಳೆದ ಬಾರಿ ಈ ಹಬ್ಬಕ್ಕೆ ಊರಲ್ಲಿದ್ದೆ. ಅದು ಒಂದು ಸಂಸ್ಥೆಯಿಂದ ಬಿಟ್ಟು ಇನ್ನೊಂದು ಸಂಸ್ಥೆಗೆ ಸೇರುವ ಮಧ್ಯೆ ಸಿಕ್ಕಿದ್ದ ಬಿಡುವಿನ ಸಂಭ್ರಮ. ಬಹುಶಃ ಸರಿ ಸುಮಾರು ಒಂದು ತಿಂಗಳ ಕಾಲ ನಾನು ಊರಲ್ಲಿದ್ದೆ. ಆದರೆ ಈ ಬರಿ ಕಾಂಕ್ರೀಟ್ ಕಾಡಲ್ಲಿದ್ದೇನೆ.</div>
<div style="text-align: justify;">
<br /></div>
<div style="text-align: justify;">
ಸಂಭ್ರಮ ಪಡುವುದಕ್ಕೆ ಇದು ಸೂಕ್ತ ಕಾಲವಲ್ಲ. ಕಾರಣ ನಾನು ಊರಲ್ಲಿಲ್ಲ. ಊರಲ್ಲಿದ್ದಿದ್ದರೆ ಸಾಲಾಗಿರಿಸಿದ್ದ ಹಣತೆಯ ಬೆಳಕನ್ನು ನೋಡುವ ಸಂಭ್ರಮ. ಅದಾದ ಮೇಲೆ ಪಟಾಕಿ ಹಚ್ಚುವ ಸಂಭ್ರಮ. ನಮ್ಮ ಊರಿನಲ್ಲಿ ಮನೆಯವರೆಲ್ಲಾ ಒಟ್ಟು ಸೇರಿ ಕುಟುಂಬ ಸಮೇತ ಈ ಹಬ್ಬವನ್ನು ಆಚರಿಸುತ್ತೇವೆ. ಮಕ್ಕಳ ಸಂಭ್ರಮ ಹೇಳತೀರದು. </div>
<div style="text-align: justify;">
<br /></div>
<div style="text-align: justify;">
ಇಂದು ಈ ಬರಹ ಬರೆಯಲು ಕುಳಿತಾಗ ನಾನು ಏಕಾಂಗಿ. ಕತ್ತಲೆಯಲ್ಲಿ ಬೆಳಕು ಹುಡುಕುವ ಸಂಭ್ರಮಕ್ಕಿಂತಲೂ ಯಾಕೋ ಯಾರೂ ಜೊತೆಗಿಲ್ಲ ಎಂಬ ಅನಾಥ ಭಾವ. ಅಷ್ಟಕ್ಕೂ ಈ ಒಂಟಿತನಕ್ಕೆ ಕಾರಣವೇನು ಎಂದು ಯೋಚಿಸುತ್ತಾ ಕುಳಿತರೆ ಯಾವುದೇ ಕಾರಣ ಹೊಳೆಯುತ್ತಿಲ್ಲ. ನಾವು ಅಷ್ಟು ಬೇಗ ಯಾರಿಗೋ ಕಾಲ ಕಸವಾಗಿಬಿಡುತ್ತೇವಾ..? ಗೊತ್ತಿಲ್ಲ. ಉತ್ತರ ಹುಡುಕುತ್ತಾ ಹೊರಟಿದ್ದೇನೆ. ಯಾಕೆಂದರೆ ಇದು ಫ್ಯಾಮಿಲಿ ಡ್ರಾಮಾ...!! ನನ್ನವರೆನಿಸಿಕೊಂಡ ಸಂಬಂಧಿಕರೇ ಇಲ್ಲಿ ಪಾತ್ರಧಾರಿಗಳು.</div>
<div style="text-align: justify;">
<br /></div>
<div style="text-align: justify;">
ನನ್ನ ಈ ಬ್ಲಾಗ್ ಕೊನೆಗೊಂದು ಸಾರಿ ಉಸಿರಾಡಿದ್ದು ಕಳೆದ ವರ್ಷ ಇದೇ ತಿಂಗಳು. ಇಂದು ನಾನು ಮತ್ತೆ ನಿಮ್ಮ ಮುಂದೆ ಬರೆಯುತ್ತೇನೆ ಎಂಬ ನಿರೀಕ್ಷೆಯೂ ನನ್ನಲ್ಲಿರಲಿಲ್ಲ. ಮನದಲ್ಲಿ ಯಾಕೋ ಅನಾಥ ಭಾವ. ಇಷ್ಟು ದಿನದಿಂದ ಯಾವತ್ತೂ ಕಾಡದಿದ್ದ ಅದೇನೋ ಅನಾಥ ಭಾವ ನನ್ನನ್ನಿಂದು ಕಾಡಿದೆ. ಇದಕ್ಕೆ ಕಾರಣ ಹುಡುಕಿದರೆ ಕಾರಣ ಸಿಗುತ್ತಾ...? ಸದ್ಯಕ್ಕೆ ಇರುವ ಉತ್ತರ ಗೊತ್ತಿಲ್ಲ ಎಂದು. ಆದರೂ ಸಣ್ಣ ಒಂದು ಕೊಂಡಿ ಸಿಕ್ಕಿದರೂ ಸಾಕು. ಪ್ರವಾಹದಲ್ಲಿ ಸಿಲುಕಿದವನಿಗೆ ಕಡ್ಡಿ ಸಿಕ್ಕಿದಂತೆ ನಾನು ಈಜಿ ದಡ ಸೇರುತ್ತೇನೆ. </div>
<div style="text-align: justify;">
<br /></div>
<div style="text-align: justify;">
ಸಂಬಂಧಗಳೆಂಬ ಮಿಸ್ಸಿಂಗ್ ಲಿಂಕಿನಲ್ಲಿ ಎಲ್ಲೋ ಬೆಳೆದ ನಾನು ಇಷ್ಟು ಅನಾಥನಾಗಲು ಕಾರಣವೇನು. ಉಹೂಂ, ಕುಳಿತು ಎಷ್ಟು ಯೋಚಿಸಿದರೂ ಹೊಳೆಯುತ್ತಿಲ್ಲ. ಆದರೆ ಒಂದಂತೂ ನಿಜ ಮನಸ್ಸು ಸುಮಾರು ದಿನಗಳ ನಂತರ, ಅಲ್ಲ ಸಾರಿ, ತಿಂಗಳ ನಂತರ ಯಾಕೋ ಈ ಪರಿ ಕಾಡುತ್ತಿದೆ. ಮಾಡದ ತಪ್ಪನ್ನು ಒಪ್ಪಿಕೋ ಎಂದರೆ ಯಾವ ಮನಸು ತಾನೇ ಒಪ್ಪುತ್ತೆ ಹೇಳಿ. ಮನಸ್ಸಿಗೇನಾಗಿದೆ ಗೊತ್ತಾಗುತ್ತಿಲ್ಲ. ಈ ಎಲ್ಲಾ ಬೇಸರ, ಸಂತಸ, ದುಗಡ, ದುಮ್ಮಾನಗಳನ್ನು ದೂರ ಮಾಡಲು ಒಂದು ಬ್ರಹ್ಮ ವಿದ್ಯೆ ಇದ್ದಿದ್ದರೆ....... ಎಂದು ಮನಸು ಬಯಸುತ್ತಿದೆ. ಆದರೆ ಈಗ ಒಂಥರಾ ಬರಗಾಲ ಮನಸ್ಸಿಗೆ. ಹಾಗಾಗಿ ಸದ್ಯಕ್ಕೆ ಮನಸ್ಸೂ ಖಾಲಿ ಖಾಲಿ. </div>
<div style="text-align: justify;">
<br /></div>
<div style="text-align: justify;">
ನನ್ನ ಕನಸಿನಲ್ಲಿ ಬಂದ ಆ ಕೆಟ್ಟ ಘಳಿಗೆ ನಿಜವಾಗದೇ ಇರಲಿ ಎಂದು ಮನಸು ಬಯಸುತ್ತಿರುತ್ತದೆ. ಆದರೆ ಅದೆಲ್ಲವನ್ನೂ ಮೀರಿ ನಾನು ನಿಲ್ಲಬಲ್ಲೆ ಎಂದು ಸುಳ್ಳಿನ ಗೋಪುರ ಕಟ್ಟಿ ಬಾಳುವುದಕ್ಕಿಂತ ಎರಡು ಹನಿ ಕಣ್ಣೀರು ಚುಳ್ಳನೆ ಕೆನ್ನೆಗಿಳಿದರೆ ಮನಸಿನಲಿ ಅದ್ಯಾವುದೋ ಸಮಾಧಾನ. ಭೋರ್ಗರೆದ ಎಲ್ಲಾ ಬೇಸರಗಳು ಅದ್ಯಾವುದೋ ಕ್ಷಣದಲ್ಲಿ ನಮ್ಮನ್ನು ಬಿಟ್ಟು ದೂರ ಸಾಗಿರುತ್ತದೆ. ಕಳೆದ ಅಷ್ಟೂ ವರುಷಗಳಲ್ಲಿ ಯಾವಾಗಲೂ ಏನಾದರೂ ಒಂದು ನಡೆಯುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ.</div>
<div style="text-align: justify;">
<br /></div>
<div style="text-align: justify;">
ನನಗೆ ಯಾರ, ಯಾವ ಕೊರತೆಯಿದೆ. ಉಹೂಂ ಯಾರದ್ದೂ ಇಲ್ಲ. ಒಬ್ಬರನ್ನು ಮೀರಿಸಿದವರೊಬ್ಬರು ಎಂಬಂತಿದ್ದಾರೆ ನನ್ನ ಜೊತೆಗೆ. ಆದರೆ ಜೊತೆಗಿದ್ದವರ ಮನಸ್ಸಿಗೇನಾಗಿದೆ. ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ಮನೆಗೆ ಬಂದು ಕುಳಿತರೆ ಎಲ್ಲರೂ ಮನೆಯ ಹೊರಗಡೆ ಕ್ಯಾಂಡಲ್ ಅಥವಾ ಹಣತೆ ಹಚ್ಚಿ ಸಂಭ್ರಮಿಸುತ್ತಿದ್ದರೆ ಇಲ್ಲಿ ಇತ್ತ ನನ್ನ ಕೋಣೆಯಲ್ಲಿ ಅದೇ ಅಮಾವಾಸ್ಯೆಯ ಕಾರ್ಗತ್ತಲು. ಇದೆಲ್ಲವನ್ನೂ ದಾಟಿ ನಾನು ಮುಂದೆ ಹಣತೆ ಬೆಳಗುತ್ತೇನಾ..? ಆ ಹಣತೆ ಮನಸಿನಲ್ಲಿ ಕಾಣಿಸಿರುವ ಕಲ್ಮಶಗಳನ್ನು ದೂರ ಮಾಡುತ್ತಾ ಗೊತ್ತಿಲ್ಲ. ಆದರೆ ನಿರೀಕ್ಷೆಯಿದೆ. ಯಾಕೆಂದರೆ ನಂಬಿಕೆ ಯಾವತ್ತಿಗೂ ಮುಖ್ಯ. ಅದೊಂಥರಾ ಸಣ್ಣ ಮಗುವನ್ನು ನಾವು ಮುದ್ದಾಡುತ್ತಾ ಮೇಲಕ್ಕೆಸೆದಂತೆ. ಮಗುವಿಗೆ ಗೊತ್ತಿರುತ್ತೆ, ನಾನು ಕೆಳಗೆ ಬೀಳಲು ನನ್ನನ್ನು ಎಸೆದ ವ್ಯಕ್ತಿ ಬಿಡಲ್ಲ ಎಂದು. ಅದಕ್ಕೇ ಆ ಮಗು ಅಷ್ಟೆಲ್ಲಾ ರಿಸ್ಕ್ ಜೊತೆ ಮೇಲಕ್ಕೆಸೆಯಲ್ಪಟ್ಟಿದ್ದರೂ ಮಂದಹಾಸದ ನಗುವನ್ನು ನೀಡುತ್ತಿರುತ್ತದೆ. ಸದ್ಯಕ್ಕೆ ನಾನು ಮಗುವಾಗಬೇಕಾದ ಅನಿವಾರ್ಯತೆ. </div>
<div style="text-align: justify;">
<br /></div>
<div style="text-align: justify;">
ಪರವಾಗಿಲ್ಲ, ಕಾಲ ಉರುಳುತ್ತಿರುತ್ತದೆ. ಎಲ್ಲರಿಗೂ ಸತ್ಯ ಯಾವುದೆಂದು ಗೊತ್ತಾಗುತ್ತೆ. ಆದರೆ ಸದ್ಯಕ್ಕೆ ಹಣತೆ ಸರಿಯಿದೆ, ಅದರಲ್ಲಿದ್ದ ಬೆಳಕೂ ಸರಿಯಿತ್ತು. ಆದರೆ ಹಣೆ ಬರಹ ಸರಿಯಿಲ್ಲ. ಅದಕ್ಕಾಗಿ ಈ ಬರಹವನ್ನ ಇಲ್ಲಿಗೆ ಮುಗಿಸುತ್ತಿದ್ದೇನೆ. ಸುಮಾರು ದಿನಗಳ ಬಳಿಕ ಬರೆದಿದ್ದೇನೆ. ಸ್ವಲ್ಪ ತಪ್ಪುಗಳಿರಬಹುದು, ಆದರೆ ಬರಹದ ಭಾವಗಳಲ್ಲಿ ತಪ್ಪಿಲ್ಲ. ಯಾಕೋ ಈ ಸಾಲು ಬರೆಯುವ ಹೊತ್ತಿಗೆ ನನ್ನ ಕಣ್ಣುಗಳೆರಡೂ ತೇವವಾಗಿದೆ. ಆ ಅಸ್ಪಷ್ಟತೆಯ ಹಿಂದೆ ಬಂದು ಒಂದು ತುಂಟ ನಗೆ ಬೀರಿ ಹೋದವರು ಯಾರು..? ಅದು ನೀನೇನಾ......?</div>
</span></div>
Chevarhttp://www.blogger.com/profile/12119362877342017192noreply@blogger.com0tag:blogger.com,1999:blog-19828151.post-46893439402174358692011-11-28T21:53:00.000+05:302011-11-28T21:56:43.032+05:30ನೀನು @ 28<div align="justify"><strong><span style="font-size:130%;">ಇನ್ನು </span></strong>ಕೆಲವೇ ದಿನಗಳಲ್ಲಿ ಅದೇ ಹಳೆಯ ಸಂಭ್ರಮ ಮರುಕಳಿಸುತ್ತಾ ಗೊತ್ತಿಲ್ಲ. ಆದರೆ ಈ ದಿನ ಮಾತ್ರ ಬದಲಾಗುವುದಿಲ್ಲ. ಇದು ಜೀವನದಲ್ಲಿ ಯಾವುದೇ ಕಾರಣಕ್ಕೂ ಬದಲಾಯಿಸಲಾಗದ ದಿನ. ಅಂಕಿ ಸಂಖ್ಯೆಗಳೇ ಹಾಗೆ. ಅದು ಏರುತ್ತಾ ಇರುತ್ತೆ. ಏನೇನೋ ಹೇಳ್ತಾ ಇದ್ದಾನಲ್ಲಾ ಕನ್ಫ್ಯೂಸ್ ಆಗ್ಬೇಡಿ. ಪ್ರತಿ ವರುಷ ನಾನು ಈ ದಿನವನ್ನು ಶ್ರದ್ಧೆಯಿಂದ ಕಾಯುತ್ತೇನೆ. ಆ ದಿನ ನಾನು ಏನೇನು ಮಾಡಬೇಕು ಅಂದ್ಕೊಂಡಿರುತ್ತೇನೇ ಅದೆಲ್ಲವನ್ನೂ ಮಾಡುತ್ತೇನೆ. ಈಗಲೂ ನಾನು ಮಾಡುತ್ತಿರುವುದು ಅದನ್ನೇ.<br /><br />ಮನುಷ್ಯನಿಗೆ ವಯಸ್ಸಾದಂತೆ ಮರೆವು ಅತಿಯಾಗುತ್ತೆ ಅನ್ನೋದು ಹಿರಿಯರ ಮಾತು. ಆ ಮಾತನ್ನು ನೀನು ಉಳಿಸಿಕೊಂಡಿದ್ದೀಯಾ ಬಿಡು. ಅದರಲ್ಲಿ ನಿನ್ನ ತಪ್ಪೇನೂ ಇಲ್ಲ. ವಯಸ್ಸೇ ಹಾಗೆ. ಆದರೆ ನನ್ನ ಸ್ಥಿತಿ ನೋಡು ಯಾವತ್ತೂ ಯಾವುದನ್ನೂ ಮರೆತಿಲ್ಲ. ಎಸ್ಪೆಷಲಿ ಲೈಫ್ @ ವಿವಿ ಕ್ಯಾಂಪಸ್. ಹಾಗೆ ಮರೆಯುವುದಕ್ಕಾಗುವ ದಿನವೇ ಅಲ್ಲ.<br /><br />ನಾವು ಕಾಲೇಜಿಗೆ ಬರುತ್ತಿದ್ದ ದಿನಗಳು ಹೇಗಿದ್ದವು ಎಂದು ಸುಮ್ಮನೆ ಒಂದು ಸಾರಿ ಯೋಚಿಸಿ ನೋಡು. ಬೆಳಗ್ಗೆ 9.30ಕ್ಕೆ ಕ್ಲಾಸಿಗೆ ಬಂದವರಿಗೆ ಮಧ್ಯಾಹ್ನ ಕ್ಲಾಸ್ ಮುಗಿಯುತ್ತಿದ್ದವು. ಆಮೇಲೆ ಇಡೀ ದಿನ ನಾವೇನು ಮಾಡುತ್ತಿದ್ದೆವು. ಆನಂತರ ಏನಾಯ್ತು ಅನ್ನೋದು ನಮಗೆ ಮಾತ್ರ ಗೊತ್ತು. ವರುಷಗಳು ಉರುಳುತ್ತಿದ್ದಂತೆ ಅವು ಯಾವ ರೀತಿಯಲ್ಲಿ ಬದಲಾಯಿತು ಅನ್ನೋದನ್ನು ನಾವು ಚಿಂತಿಸಲೇಬೇಕು. ಆದರೆ ಸದ್ಯ ನಮ್ಮದು ಬ್ಯುಸಿ ಲೈಫ್.. ಯಾವುದಕ್ಕೂ ಪುರುಸೊತ್ತಿಲ್ಲದ ಜೀವನ ನಮ್ಮದು. ಏನೋ ಮಾಡಲು ಹೋಗಿ ಇನ್ಯಾವುದರ ಕಡೆಗೆ ತಿರುಗೋ ನಮ್ಮ ಹುಚ್ಚುಕೋಡಿ ಮನಸು. ಇದರಲ್ಲಿ ಯಾವುದನ್ನು ಬೇಡ ಅಂತೀಯಾ ಹೇಳು ನೋಡೋಣ.<br /><br />ಇವತ್ತಿಗೂ ನನಗೆ ಮಧ್ಯಾಹ್ನದ ಕ್ಯಾಂಟೀನ್ ಊಟ ನೆನಪಾಗುತ್ತೆ. ಮಧ್ಯಾಹ್ನ ಮೊಸರಿಗೆ ಸಕ್ಕರೆ ಹಾಕಿ ತಿಂದ ದಿನಗಳು ಕಾಡಿದ್ದರೆ ಕಣ್ಣಂಚಲ್ಲಿ ತೇವ. ಸಂಜೆಯಾದರೆ ಕ್ಯಾಂಟೀನಲ್ಲಿ ಬನ್ಸ್ ಇದ್ದರೆ ಮೆಲ್ಲನೆ ಸವಿಯುವ ನಿನ್ನ ಬಗೆ. ಬೇರೆ ಯಾರಿಗೂ ಸಿಗದ ಸೂಪರ್ ಸ್ಟ್ರಾಂಗ್ ಕೋಲ್ಡ್ ಕಾಫಿ ತಯಾರು ಮಾಡಲು ಕ್ಯಾಂಟೀನ್ ದೊರೆ ಪ್ರಕಾಶ್ ನೀಡುತ್ತಿದ್ದ ಆದೇಶ. ನೊರೆ ನೊರೆ ಉಕ್ಕಿ ಹರಿಯುತ್ತೇನೇ ಎಂಬಂತೆ ವೆಯ್ಟರ್ ತಂದಿಡುತ್ತಿದ್ದ 2 ಗ್ಲಾಸ್ ಕೋಲ್ಡ್ ಕಾಫಿ. ಅದು ಹೊಟ್ಟೆಗಿಳಿಯುತ್ತಿದ್ದಂತೆ ನೀನು ಮಂದಸ್ಮಿತೆ... :-) ಕಾಫಿ ಕೆಟ್ಟಿತೋ ನನ್ನ ಗ್ರಹಚಾರವೂ ಕೆಟ್ಟಂತೆ...:-( ಅಲ್ಲಿಂದ ಮತ್ತೆ ಲೈಬ್ರರಿಗೆ ತೆರಳಿ ಅಲ್ಲಿಂದ ಒಂದು ಸಣ್ಣ ವಾಕ್. ಆ ವಾಕ್ ನಲ್ಲಿ ಅಮ್ಮನಿಗೊಂದು ಪುಟ್ಟ ಫೋನ್ ಕಾಲ್. ಫೋನ್ ಕೆಳಗಿಟ್ಟರೆ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿ ಸಂಭ್ರಮ ಪಡುವ ನಿನ್ನ ಬಗೆ. ಅದನ್ನು ಗುರುತಿಸುತ್ತಾ ನಕ್ಷತ್ರವನ್ನು ದಿಟ್ಟಿಸಿ ಕತೆ ಹೇಳುತ್ತಿದ್ದುದು ಆ ದೇವರಿಗೇ ಪ್ರೀತಿ... ಅಲ್ಲಿಗೇ ಮುಗಿಯುತ್ತಾ. ಉಹೂಂ, ನೀನು ಅಂತವಳೇ ಅಲ್ಲ... ಅದು ಮೊಗೆದಷ್ಟೂ ಸಿಗುವ ಅಕ್ಷಯಪಾತ್ರೆಯ ಗುಣಸಂಪನ್ನೆ.<br /><br />ಯಾವುದಾದರೂ ಒಂದು ಭಾನುವಾರ ಬೆಳಗಿನ ಜಾವ ಬಂದರೆ ಕಡೆಗೋಲು ಕೃಷ್ಣನ ಊರು ಉಡುಪಿಗೆ. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಬಳಿಕ ತಮ್ಮ ಹೊಟ್ಟೆ ತುಂಬಿಸಿದರೆ ನಮಗೆ ಬೆಳಗ್ಗೆಯೇ ಹೋಟೆಲ್ ಒಳಗೆ ಸೇರುವ ಹುಚ್ಚು.. ಬಸ್ ಇಳಿದು ಈ ಕಡೆ ಬರುತ್ತಿದ್ದಂತೆ ನಮ್ಮ ಸ್ವಾಗತಕ್ಕೆ ಕಾಯ್ತಾ ನಿಂತಿದ್ದಾಳೇನೋ ಎಂಬಂತೆ ಕಾಯುವ <strong><span style="color:#ff0000;">'ಡಯಾನಾ'</span> <span style="color:#cc0000;">- ನಿಮ್ಮ ಸೇವೆಯಲ್ಲಿ</span></strong>. ನಾವು ವಿವಿಯಲ್ಲಿದ್ದ ಕಡೆಯ ದಿನ ಹೋಗಿದ್ದು ನೆನಪಿದೆಯಾ. ಅದು 2006ರ ಮೇ 15. ಅಂದು ನೀನು ನೀಡಿದ ಕೃಷ್ಣನ ಗ್ರೀಟಿಂಗ್ ಕಾರ್ಡಿನಲ್ಲಿ ಬರೆದಿದ್ದು ಇಷ್ಟು -<br /><br /><span style="color:#000099;"><strong>ಆದುದಕ್ಕೆ,<br />ಆಗದಿದ್ದುದಕ್ಕೆ<br />ಕೃಷ್ಣನಿದ್ದ...<br />ಎಂದಿಗೂ ಇರುವ<br />ಇಂದಿನಂತಿರು....<br />ಸಂತೋಷವಾಗಿರು<br /></strong></span><br />(ನಿನಗೆ ಭವಿಷ್ಯದ ಕನಸು ಅಂದು ಬಿದ್ದಿತ್ತಾ ಗೊತ್ತಿಲ್ಲ. ಆದರೆ ಆ ಬರಹದಲ್ಲಿ ನೀನು ಬರೆದ ಎಲ್ಲಾ ಶಬ್ದಗಳೂ ನಿಜವಾಯಿತು. ಆ ಮುನ್ಸೂಚನೆಯನ್ನು ನಿನಗೆ ಅಂದು ನೀನು ನಂಬಿದ್ದ ಆ ದೇವರು ಕೊಟ್ಟಿದ್ದನಾ...? ಗೊತ್ತಿಲ್ಲ, ಅದನ್ನು ನೀನು ಹೇಳಬೇಕು.)<br /><br />ಮೊನ್ನೆ ನೀನು ವಿಶ್ವವಿದ್ಯಾನಿಲಯದಲ್ಲಿ ಕುಳಿತು ನಿನ್ನ ಜೊತೆ ಮಾತನಾಡುತ್ತಿದ್ದ ಹಾಗೆ ಕೂತು ಮಾತನಾಡಬೇಕು ಅಂತಾ ಹೇಳಿದೆ ನೋಡು, ಅದೇಕೋ ಅಂದು ಸುಮ್ಮನೆ ಯೋಚಿಸಿದಾಗ ಇದೆಲ್ಲಾ ನೆನಪಾಯಿತು. ನೀನು ಹೇಳಿದ್ದೆಲ್ಲಾ ಬರೆಯುತ್ತಾ ಕುಳಿತರೆ ನಾನು ಅದ್ಭುತ ಬರಹಗಾರನಾಗದೇ ಇರಲು ಸಾಧ್ಯಾನಾ?. ಸುಮ್ಮನೆ ಯೋಚಿಸಿ ನೋಡು. ಏನಾದರೂ ತಲೆಗೆ ಹೊಳೆದರೆ ಹೇಳು. ಇಂತಹ ಸಾವಿರಾರು ನೆನಪುಗಳನ್ನು ಕೊಟ್ಟ ನಿನ್ನನ್ನು ಎಷ್ಟು ನೆನಪಿಟ್ಟರೂ ಸಾಲದು. ಅದೆಲ್ಲಕ್ಕಿಂತಲೂ ನಿನ್ನ ಆ ಕೇರಿಂಗ್ ನೇಚರ್ ಇದೆಯಲ್ಲಾ. ಅದು ನಾನಿದುವರೆಗೆ ನೋಡಿದ ಯಾರಲ್ಲೂ ಸಿಗಲಿಲ್ಲ.. ಅಂತಹ ಚಾರ್ಮಿ ಲೇಡಿಗೆ ಈಗ ಸಂಭ್ರಮದ ಸಮಯ. ಶುಭಾಶಯ ಹೇಳದೇ ಇರಲು ಸಾಧ್ಯವೇ ಇಲ್ಲ. ಅದಕ್ಕೇ ಹೇಳಿದ್ದು, </div><br /><div align="justify"><br /><strong><span style="color:#660000;">"ನೀನು @ 28"</span></strong>ಗೆ ನಾನು @ ನೆನಪಿನ ಶುಭಾಶಯ.</div>Chevarhttp://www.blogger.com/profile/12119362877342017192noreply@blogger.com1tag:blogger.com,1999:blog-19828151.post-10418201606291719322010-11-28T21:37:00.001+05:302010-11-28T21:46:56.749+05:30ಕರುಣಾಳು ಬಾ ಬೆಳಕೆ, ಆರದಿರಲಿ ಬೆಳಕು<div align="justify"><strong>ಇದು </strong>೨೭ರ ಸಂಭ್ರಮ. ಈ ಸಂಭ್ರಮದಲ್ಲಿ ಅದ್ಭುತವಾದ ಸುಖವಿದೆ. ಯಾಕೋ ಗೊತ್ತಿಲ್ಲ. ೨೦೦೪ರ ಬಳಿಕ ಪ್ರತಿ ವರ್ಷದಲ್ಲೂ ಒಂದೊಂದು ಸೊಬಗು. ಒಂದೊಂದು ಅಚ್ಚರಿ. ಕಣ್ಣ ರೆಪ್ಪೆಯ ಬಡಿದು ತೆಗೆದಿರಬೇಕಾದರೆ ಏನೇನೋ ತಿರುವು. ಎಲ್ಲವೂ ಸುಂದರ ದಿನಗಳು. ಅದರ ನಡುವೆ ಒಂದಿಷ್ಟು ಕೋಪ, ಸಿಟ್ಟು, ಸಿಡುಕು, ಸೆಡವು, ಬೇಸರ, ರೌದ್ರತೆ, ಕೊನೆಗೆ ಅತಿ ಕೆಟ್ಟ ಕೋಪ. ಆಮೇಲೊಂದು ಸುದೀರ್ಘ ಮೌನ. ನಂತರ ಕೆಲವು ಮೇಘ ಸಂದೇಶ ಹೀಗೆ ಕಲ್ಪನೆ ಮತ್ತು ವಾಸ್ತವದ ತೆರೆ ಬಿಚ್ಚುತ್ತಾ ಸಾಗುತ್ತದೆ. ಬಹುಶಃ ವ್ಯಕ್ತಿ ಪರಿಪೂರ್ಣಗೊಳ್ಳುವುದು ಹೀಗೆಯೇ ಏನೋ...? </div><div align="justify"><br />ಎಲ್ಲೋ ದೂರದಲ್ಲಿ ಇಟ್ಟಿದ್ದ ವೀಣೆಯ ತಂತಿ ಹರಿದು ಹೋಗಿತ್ತು. ತಂತಿಯ ಹಿಡಿದು ಸರಿಪಡಿಸಿದರೂ ನಾದ ಹೊರಗೆ ಕೇಳಿಸುತ್ತಲೇ ಇರಲಿಲ್ಲ. ಆದರೆ ಆ ಮೌನದಲ್ಲೂ ಏನೋ ಲಯ, ತಾಳ ಎಲ್ಲವೂ ಸಮ್ಮಿಳಿತವಾಗುತ್ತಿತ್ತು. ಇಂದಿಗೂ ನನಗೆ ಸರಿಯಾಗಿ ನೆನಪಿದೆ. ಅದೆಷ್ಟೋ ಸಾರಿ ಆಕಾಶ ದಿಟ್ಟಿಸಿ ಕೆಲವೇ ಕೆಲವು ನಕ್ಷತ್ರಗಳನ್ನು ದಿಟ್ಟಿಸಿ ನೋಡಿದ್ದೇನೆ. ಆ ನಕ್ಷತ್ರಗಳ ಜೊತೆ ಹಲವು ಬಾರಿ ಚಂದಿರನನ್ನೂ ನೋಡಿದ್ದೇನೆ. ಅವ್ಯಾವುದೂ ಬದಲಾಗಲಿಲ್ಲ. ಬದಲಿಗೆ ನಾವು ಬದಲಾದೆವು. ಹಾಗನ್ನೋದಕ್ಕಿಂತಲೂ ನಾವು ಬದಲಾಗಿದ್ದೇವೆ ಎಂದು ಕಲ್ಪಿಸಿಕೊಂಡೆವು. ಅದರೂ ಪ್ರಯೋಜನವಾಗಲಿಲ್ಲ. </div><div align="justify"><br />ಈ ಕತೆಗಳನ್ನೆಲ್ಲ ಅದ್ಯಾಕೆ ಬರೆದೆನೋ ಗೊತ್ತಿಲ್ಲ. ಇಂದು ಗೆಳತಿಗೆ ೨೭ ಮುಗಿದು ೨೮ರ ಮಡಿಲು ಸೇರಿದ ಸಂಭ್ರಮ. ಬಹುಶಃ ಜೀವನ ಅಂದರೆ ಏನು ಎನ್ನುವುದನ್ನು ಅದ್ಭುತವಾಗಿ ತಿಳಿದ ಗೆಳತಿ. ತನ್ನೆಲ್ಲಾ ಕಷ್ಟಗಳನ್ನು ಬದಿಗೊತ್ತಿ ಪರರ ಹಿತ ಬಯಸುವವಳು. ನನಗೆ ಸುಂದರ ಬದುಕಿನ ಪಾಠ ಹೇಳಿಕೊಟ್ಟವಳು. ಕೆಲವು ದಿನದ ದೀರ್ಘ ಮೌನವನೂ ಸಹಿಸಿಕೊಂಡವಳು. ಅದು ಬಿಟ್ಟರೆ ಈಗಲೂ ಅದೇ ತುಂಟತನ, ವಯ್ಯಾರ, ಹುಸಿಮುನಿಸು. ಇಂತವರು ನಿಮಗೆ ಸಿಗೋದು ಬಲು ಅಪರೂಪ. </div><div align="justify"><br />ಗೆಳತಿಗೆ, ಇಲ್ಲಿರುವ ಪ್ರತಿ ಪದವೂ ನಿನ್ನನ್ನು ಕಾಡುತ್ತೆ. ಕಾಡುತ್ತೆ ಅನ್ನೋದಕ್ಕಿಂತಲೂ ನಿನ್ನ ತಾಕುತ್ತೆ. ಅದರ ನಡುವೆ ಈ ದಿನದ ಕೊನೆಯ ಕ್ಷಣದಲಿ ನಿನ್ನ ಬಗೆಗೆ ಬರೆಯೋಣ ಎನಿಸಿತು. ಈಗಲೂ ನೀನು ಮೊನ್ನೆ ಹೇಳಿದ ಆ ಹಾಡೂ ಸೇರಿದನಂತೆ ಮತ್ತೆರಡು ಹಾಡು ಕೇಳುತ್ತಾ ಇದನ್ನು ಬರೀತಾ ಇದ್ದೇನೆ. ಅದ್ಯಾಕೋ ಮನದಲ್ಲೇನೋ ಆರ್ದ್ರ ಭಾವ. ನನ್ನ ಇಷ್ಟೆಲ್ಲಾ ಸಂಭ್ರಮಗಳಿಗೆ ಕಾರಣಳಾದ ಸುಂದರ, ಸುಮಧುರ, ಸುಲಕ್ಷಣ ಸಂಪನ್ನೆಗೆ ಶುಭ ಹಾರೈಕೆಯಿದು ಆರದಿರಲಿ ಬೆಳಕೂ..</div><div align="justify"> </div><div align="center"><span style="color:#333399;"><strong>೨೮ ರ ಶುಭ ಘಳಿಗೆಯಲಿ ನಿನಗೆ ಜನುಮದಿನದ ಶುಭಾಶಯಗಳು.</strong></span> </div>Chevarhttp://www.blogger.com/profile/12119362877342017192noreply@blogger.com4tag:blogger.com,1999:blog-19828151.post-27457328776053613662010-07-02T19:36:00.011+05:302010-07-02T20:29:15.464+05:30ಬರಡು ಬದುಕಿನಲಿ ಮಳೆ ತಂದ ತಂಪು...!!!<div align="justify">ಮತ್ತದೇ ಸ್ಥಿತಿ. ಮತ್ತದೇ ಕನವರಿಕೆ. ಯಾವ ಮಳೆಯೂ ಇಲ್ಲಿ ಬೆಂಗಳೂರಲ್ಲಿ ಸುರಿಯುತ್ತಿಲ್ಲ. ಅಲ್ಲಿ ಊರಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ ಇಲ್ಲಿ ಎಂದಿನಂತೆ ಬಿಸಿಲು. ರಾತ್ರಿಯಾದರೆ ಸ್ವಲ್ಪ ತಂಪು. ಆದರೆ ಮಳೆ ಸುರಿಯಲು ಇನ್ನೆಷ್ಟು ದಿನ ನಾವು ಕಾಯಬೇಕೋ? </div><div align="justify"> </div><div align="justify"> </div><div align="justify">ಕಳೆದ ತಿಂಗಳ ಎರಡನೇ ವಾರ ನಾನು ಊರಲ್ಲಿದ್ದೆ. ಅಲ್ಲಿ ಒಂದು ವಾರದ ವಾಸ. ಏಳರಲ್ಲಿ ಏಳು ದಿನವೂ ಭರ್ಜರಿ ಮಳೆ. ಮನೆಯ ಹೊರಗೆ ಕಾಲಿಟ್ಟರೆ ದೇಹ ಒದ್ದೆ ಒದ್ದೆ. ಮನೆಯೊಳಗೆ ಹೋದರೆ ಮನದಲ್ಲಿ ಭಾವಗಳು ಒದ್ದೆ ಒದ್ದೆ. ಇಂತಹ ಒಂದು ಮಳೆಗಾಲ ನೋಡಿ ಎಷ್ಟು ವರ್ಷವಾಗಿತ್ತು. ಬೆಂಗಳೂರೆಂಬ ಕಾಂಕ್ರೀಟ್ ನಗರಿಗೆ ಬಂದು ಕಳೆದ ಐದು ವರ್ಷಗಳಲ್ಲೂ ಇಂತಹ ಮಳೆ ನಾನು ನೋಡಿರಲೇ ಇಲ್ಲ. ಕಾಸರಗೋಡು, ಮಂಗಳೂರು, ಮಡಿಕೇರಿ ಎಂದು ಹೋದಲ್ಲೆಲ್ಲಾ ಮಳೆಯದ್ದೇ ಕಾರುಬಾರು. ಆ ಮಳೆಯ ಯಾವುದೊ ಒಂದು ಗುಂಗಿನಲ್ಲಿ ಹಿಂದೆ ಕಳೆದ ಜೀವನ ನೆನಪಿಸಿಕೊಂಡಾಗ ಕಣ್ಣಂಚಿನಲ್ಲಿ ನೀರು ತುಂಬಿದ್ದು ಗೊತ್ತಾಗಲೇ ಇಲ್ಲ. ಮುಖವ ತೋಯಿಸಿದ್ದ ಮಳೆ ನೀರ ನಡುವೆ ಕಣ್ಣೀರು ಸಂಗಮಿಸಿದ್ದು ಯಾರಿಗೂ ತಿಳಿಯಲಿಲ್ಲ.</div><div align="justify"> </div><div align="justify"> </div><div align="justify"> </div><div align="justify">ಊರಲ್ಲಿ ಮಳೆ ಎಂದರೆ ಹಾಗೆ. ರಭಸವಿಲ್ಲದಿದ್ದರೆ ಅದನ್ನು ಮಳೆ ಎಂದು ಕರೆಯಲ್ಲ. ನಿರಂತರವಾಗಿ ಸುರಿಯದಿದ್ದರೆ ಮಳೆ ಎನ್ನಲ್ಲ. ಹಳ್ಳ ಕೊಳ್ಳಗಳು ತುಂಬಿ ನೀರು ಹರಿಯದಿದ್ದರೆ ಅದು ಮಳೆ ಎನಿಸೀತಾದರೂ ಹೇಗೆ? ಅತ್ತ ಕಾಸರಗೋಡು ದಾಟಿ ಹೋದರೆ ಸಮುದ್ರದ ಅಬ್ಬರ ನೋಡ ಬೇಕಿತ್ತು. ಇನ್ನೆರಡು ದಿನ ಮಳೆ ಸುರಿದಿದ್ದಾದರೆ ಸಮುದ್ರದ ಅಲೆ ರಸ್ತೆ ದಾಟಿ ಇತ್ತ ಕಡೆಗೆ ಬಂದು ಕೆಲವು ಮನೆಗಳು ಮುಳುಗಿ ಹೋಗುತ್ತಿತ್ತು. ಹಾಗೆ ಬಂದ ಮಳೆಯಲ್ಲಿ ನೆನೆಯುತ್ತಾ ನನ್ನ ನಾನು ಮರೆತೇ ಹೋದೆ. ಹೃದಯದ ಭಾವಗಳು ಮನ ತಾಕಿದಾಗ ಅದ್ಯಾಕೋ ಒಂಥರಾ..! ಮನಸ್ಸು ಮಳೆಗೆ ಆ ಪರಿಯಲ್ಲಿ ಕಾಡುತ್ತೆ ಅಂತ ಗೊತ್ತಾಗಿದ್ದು ಅದೇ ಮಳೆಗೆ. ಇಲ್ಲ ನಿನ್ನಲ್ಲಿನ್ನೂ ಭಾವಗಳು ಕಳೆದು ಹೋಗಿಲ್ಲ ಅಂತ ಹೇಳಿದ್ದೂ ಅದೇ ಮಳೆ. ಆ ಭಾವಗಳು ಟಿಸಿಲು ಒಡೆಯಲು ಬರಡು ಬದುಕು ಸುಂದರ ನಂದನವಾಗುತ್ತೆ ಅಂತ ಮನಸ್ಸಿಗೆ ಯಾರೋ ಹೇಳಿದ ನೆನಪು ಸುಂದರ ಚಿತ್ತಾರವನ್ನೇ ಸೃಷ್ಟಿಸಿತು. ಆ ಚಿತ್ತಾರ ನನ್ನ ತಂದು ನಿಲ್ಲಿಸಿದ್ದು ಒಂದಾರು ವರ್ಷ ಹಿಂದಕ್ಕೆ. ಅದೆಷ್ಟು ಹೊತ್ತು ಆ ಪರಿ ಕುಳಿತಿದ್ದೆನೋ, ಅದ್ಯಾಕೆ ಆ ರೀತಿ ನೆನಪು ಬಿಚ್ಚಿಕೊಳ್ಳುತ್ತಾ ಹೋಯಿತೋ ಒಂದೂ ನಾ ಕಾಣೆ. ಹಾಗೆ ಒಂದು ವಾರ ನಾನು ಮಳೆಯಲ್ಲಿ ಕೂತಿದ್ದರೆ ಈ ಮನದಲ್ಯಾಕೋ ಹಿತಾನುಭವ. ಎಷ್ಟೆಂದರೂ ಮನವು ಬಿಡದು ಮಾಯೆ. ಹಾಗೆ ಆ ಮಳೆಯ ಮಾಯೆಯಿಂದ ಸಾಗಿ ಇಲ್ಲಿ ಬಂದಿಳಿದರೆ ಇಲ್ಲಿ ಮತ್ತೆ ಯಥಾ ಸ್ಥಿತಿ. ಕಾಯ್ತಾ ಇದ್ದೇನೆ ಇಲ್ಲಿ ಬಾರೋ ಬಾರೋ ಮಳೆ ರಾಯ ಎಂಬ ಅದೇ ಹಳೆಯ ಹಾಡಿನೊಂದಿಗೆ. ಮಳೆ ಇಲ್ಲಿಯೂ <span class="">ಬಂದು ಮನವ </span>ಕಾಡುತ್ತೆ ಅನ್ನೋ ಆಸೆಯೊಂದಿಗೆ...!!!</div>Chevarhttp://www.blogger.com/profile/12119362877342017192noreply@blogger.com1tag:blogger.com,1999:blog-19828151.post-60947658101705805512010-06-21T19:44:00.010+05:302010-06-25T22:14:58.670+05:30ನನ್ನ ಸ್ಮೃತಿಪಟಲದಲ್ಲಿ ಸದಾ ನೀವಿರುತ್ತೀರಿ<div align="justify">ಇದು ೨೫ ಕಳೆದು ೨೬ಕ್ಕೆ ಕಾಲಿಡುವ ಸಂಭ್ರಮ. ಇದು ಸಂಭ್ರಮವೋ, ಸಡಗರವೋ ಒಂದೂ ತಿಳಿಯದಾಗಿದೆ. ಕಳೆದ ಎರಡು ವರ್ಷದಲ್ಲೂ ಇದೇರೀತಿ. ಯಾಕೆ ಹೀಗೆ ಎಂದು ಯೋಚಿಸಿದಷ್ಟೂ ಅರ್ಥವಾಗುತ್ತಿಲ್ಲ. </div><br /><div align="justify"><span class=""></span></div><br /><div align="justify">೯ ತಿಂಗಳು <span class="">ತಾಯ </span>ಗರ್ಭದಲ್ಲಿ ಅಡಗಿದ್ದು ಆ ಬಳಿಕ ಈ ಧರೆಗಿಳಿದ ನಾನು ಮಾಡಿದ್ದೇನು <span class="">ಅಂತಾ </span>ಚಿಂತಿಸಿದರೆ ಅಂತಹ ಯಾವುದೇ ಘನ ಸಾಧನೆ ಮಾಡಿದ ಯಾವುದೇ ವಿಷಯಗಳೂ ನನ್ನ ಮುಂದೆ ಬರುತ್ತಿಲ್ಲ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಈಗೆಲ್ಲೋ ಇದ್ದು ಜೀವನ ಸಾಗಿಸುತ್ತಿದ್ದೇನೆ. <span class="">ತಾಯಿಯ </span>ಪ್ರೀತಿ, ತಂದೆಯ ಒಲವು, ಸಹೋದರರ ಪ್ರೇಮ, ದೊಡ್ಡಮ್ಮ, ತಿಂಗಳ ಆರಂಭದಲ್ಲಿ ನಾನು ಕಳೆದುಕೊಂಡ ನನ್ನ ಪ್ರೀತಿಯ ಅಜ್ಜಿ ( ಈ ಅಜ್ಜಿಯ ಬಗ್ಗೆ ನಾನು ಶೀಘ್ರದಲ್ಲೇ ಬರೆಯಬೇಕು) <span class="">ಹಾಗೂ </span>ಅದ್ಭುತವೆನಿಸುವ ಗೆಳೆಯ ಗೆಳತಿಯರ <span class="">ಪ್ರೀತಿ </span>ಎಲ್ಲವನ್ನೂ ಪಡೆದಿದ್ದೇನೆ. ಯಾರೂ ನನ್ನ ಹಳಿಯಲಿಲ್ಲ, <span class="">ತುಳಿಯಲಿಲ್ಲ. </span>ನೀನು ಹೇಗೆ ಇರುವೆಯೋ ಅದುವೇ ಚೆನ್ನ ಎಂದರು ಕೆಲವರು. ಇಲ್ಲ ನೀನು ಹೀಗಾಗಬಾರದಿತ್ತು, ಹೀಗಿರಬೇಕಿತ್ತು ಅಂದರು ಹಲವರು. ಯಾರು <span class="">ಏನೇ </span>ಹೇಳಿದರೂ ಬೇಡವೆನ್ನಲಿಲ್ಲ. ಎಲ್ಲವನ್ನು ಸ್ವೀಕರಿಸು ಅನ್ನೋ ಹಿಂದೆ ಯಾರೋ ಹೇಳಿದ ಮಾತಿನಂತೆ ಎಲ್ಲವನ್ನೂ ಸ್ವೀಕರಿಸಿದೆ. </div><div align="justify"></div><br /><div align="justify">೫ನೇ ತರಗತಿವರೆಗೆ ಜೊತೆಗಿದ್ದ ಗೆಳೆಯ, ೭ನೇ ತರಗತಿಯಲ್ಲಿ ಹತ್ತಿರವಿದ್ದ ಗೆಳೆಯರು, ಶಾಲಾ ಅಧ್ಯಾಪಕರು, ೮ನೆ ತರಗತಿಗೆ ದೂರದ <span class="">ಊರಿಂದ </span>ಬಂದು ಸೇರಿದ್ದ ಹುಡುಗಿ, ಪ್ಲಸ್ <span class="">ಟು </span>ಕಲಿಯುವಾಗ ಸಿಕ್ಕಿದ ಗೆಳೆಯರು, ಅಲ್ಲೇ ಸಿಕ್ಕಿದ್ದ ಬೆಕ್ಕಿನ ಕಣ್ಣಿನ ಮುಸ್ಲಿಂ ಹುಡುಗಿ, ಡಿಗ್ರಿಯಲ್ಲಿ ಸಿಕ್ಕಿದ<span class="">ವರು, </span>ಪತ್ರಕರ್ತರ ಜಗತ್ತಿಗೆ <span class="">ದೂಡಿದವರು, </span>ಆಮೇಲೆ ಕಲಿತ ಪತ್ರಿಕೋದ್ಯಮ, <span class="">ಮ್ಯಾಡಂ, </span>ಆ ವೇಳೆಗಾಗಲೇ ನನ್ನ ಜೊತೆಗಿದ್ದ ಜೀವದ <span class="">ಆದ್ಯಮ್ </span>ಗೆಳತಿ. ಬೆಂಗಳೂರಲ್ಲಿ ಸಿಕ್ಕಿದ ಯಾಹೂ!, ನಂತರ ಬಂದ ಕ್ಷಮಯಾ <span class="">ಧರಿತ್ರಿ,</span> ಆಮೇಲೆ ಬರೆದ ಅಸಂಖ್ಯ ಒಲವಿನ ಓಲೆ, ಅಲ್ಲಿ ಸಿಕ್ಕಿದ್ದ ಅಭಿಮಾನಿ ಗೆಳತಿ <span class="">ಗ್ರಂಥಪಾಲಕಿ </span>ಮತ್ತು ಈಗ ನನ್ನ ಜೊತೆ ಇರುವ ಎಲ್ಲರೂ ಹಾಗೂ ನಿಮ್ಮೆಲ್ಲರ ನಡುವೆ ಇರುವ ನಾನು... ಮರೆತೆನೆಂದರೂ ಮರೆಯಲಿ ಹ್ಯಾಂಗ <span class="">ನಿಮ್ಮ? </span>ಮರೆತರೂ ನೀವು ಬಿಡ್ತೀರಾ ನನ್ನಾ? </div><br /><div align="justify">ಜನುಮ ದಿನ ಅನ್ನೋದು ವಿಶೇಷ ದಿನ. ಅವತ್ತು ಮಾತ್ರ ಸಂಭ್ರಮಿಸಬೇಕು ಅನ್ನೋದರಲ್ಲಿ ನನಗೆ ಯಾವುದೇ ಅರ್ಥ ಕಾಣಿಸುತ್ತಿಲ್ಲ. ಆದರೆ ಕಳೆದೆರಡು ವರ್ಷದಂತೆ ಈ ವರ್ಷವಾಗದಿರಲಿ ಎನ್ನುವ ಬಯಕೆ ನನ್ನದು. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಈ ಬಾರಿ ಹಾಗಾಗದು ಅನ್ನೋ ವಿಶ್ವಾಸ <span class="">ನನ್ನದು. </span>ಬರೆಯಲು ಇನ್ನೂ ಬಾಕಿಯಿದೆ. ಸದ್ಯಕ್ಕೆ ಇಷ್ಟು ಸಾಕು. ಈ ಸಂಭ್ರಮದ ಹೊತ್ತಿನಲ್ಲಿ ನಿರಂತರವಾಗಿ ನೀವೆಲ್ಲರೂ ನನ್ನ ಸ್ಮೃತಿಪಟಲದಲ್ಲಿರುತ್ತೀರಿ. ಕನಸುಗಳಿಗೆ ಜೀವ ತುಂಬಿದ ಎಲ್ಲರನ್ನೂ ನೆನಪಿಸಿಕೊಳ್ಳುತ್ತಾ ವಿರಮಿಸುತ್ತಿದ್ದೇನೆ. </div><div align="justify"> </div><div align="justify"> </div><div align="justify"> </div><div align="justify"><span class=""></span> </div>Chevarhttp://www.blogger.com/profile/12119362877342017192noreply@blogger.com3tag:blogger.com,1999:blog-19828151.post-76669177580789202482010-03-12T19:07:00.005+05:302010-03-22T18:46:19.022+05:30ಎಲ್ಲಿ ಜಾರಿತು ಮನದಿ ಅಕ್ಷರವು?ಮತ್ತೆ ಯಥಾ ಪ್ರಕಾರ ನಿಮ್ಮ ಮುಂದೆ ಬಂದಿದ್ದೇನೆ. ಒಂದರ್ಥದಲ್ಲಿ ಬರವಣಿಗೆ ನಿಂತು ಹೋಗಿದೆ. ಕಾರಣವೇನು ಎಂದು <span class="">ಯೋಚಿಸಿದರೂ </span>ತಲೆಗೆ ಹೊಳೆಯುತ್ತಿಲ್ಲ. ಇದ್ಯಾವ ಕಾರಣಕ್ಕೆ ಹೀಗಾಗುತ್ತಿದೆ ಗೊತ್ತಾಗುತ್ತಿಲ್ಲ. ಹಿಂದೊಂದು ಕಾಲವಿತ್ತು. ಅಲ್ಲಿ ನಾನು ಬರೆಯಲು ಕುಳಿತರೆ ಒಂದು ಸಣ್ಣನೆಯ ಬರಹ ತಣ್ಣನೆ ಹೊರ ಬರುತ್ತಿತ್ತು. ಅದಕ್ಕೊಂದಷ್ಟು ಮಂದಿ ಕೆಲವರು ಓದುಗರು. ತಿದ್ದಿ ತೀಡಿದವರು ಹಲವರು. ಆದ್ರೆ <span class="">ಈಗ?</span><br /><br /><span class=""><span class="">ಅವ್ಯಾವುದೂ </span>ಇಲ್ಲ. <span class="">ಹೆಚ್ಚೇಕೆ </span>ಬರೆಯಲು ವಿಷಯಗಳೇ ಸಿಗುತ್ತಿಲ್ಲ. ಬರೆಯಲು ಕಂಪ್ಯೂಟರ್ ಮುಂದೆ ಕುಳಿತರೆ ಅನಾಥ ಭಾವ. ಇದೆ ರೀತಿ ಇನ್ನೆಷ್ಟು ದಿನ? <span class="">ಇದೇ </span>ರೀತಿ ಭಾವ ರಹಿತವಾಗಿ ಎಷ್ಟು <span class="">ಕಾಲ? </span><span class="">ಒಂದೂ </span>ಗೊತ್ತಾಗುತ್ತಿಲ್ಲ. ಆದರೆ ಇದೇ ರೀತಿ ಸುಮಾರು ದಿನ ಇರಬಾರದು ಎಂದು ಗಟ್ಟಿ ಮನಸು ಮಾಡಿದ್ದೇನೆ. ಇಲ್ಲದಿದ್ದರೆ ಇಷ್ಟು ವರ್ಷಗಳಲ್ಲಿ ಪ್ರೇಮಿಗಳ ದಿನ ಎರಡಕ್ಷರ ಬರೆಯದಿದ್ದರೆ ಮನಸು ಕೇಳುತ್ತಿರಲಿಲ್ಲ. ಆದ್ರೆ ಈಗ ಯಾವುದೂ ಇಲ್ಲ. ಯುಗಾದಿಗೆ ಬರೆಯೋಣವೆಂದು ಹೊರಟೆ. ಆದರೂ ಬರೆಯಲಾಗಲಿಲ್ಲ. </span><br /><br />ಇಂತಹ ಒಂದು ಭಾವ ಕೊನೆಯಾಗಬೇಕು. ಬರವಣಿಗೆ ಸುಲಲಿತವಾಗಿ ಹೊರ ಹೊಮ್ಮಬೇಕು ಎಂದು ಗಟ್ಟಿ ಮನಸು ಮಾಡಿದ್ದೇನೆ. ಮುಂದಿನದು ನಿರಂತರ ಬರವಣಿಗೆ. ಅದು ಮನದಲ್ಲಿ ಅಕ್ಷರಗಳು ಸುಂದರ ರೂಪವಾಗಿ ಪರಿವರ್ತನೆ ಪಡೆಯಬೇಕು ಎಂಬ ಹುಮ್ಮಸ್ಸಿನೊಂದಿಗೆ ಬರೆಯಲು ಕೂರಬೇಕು. ಮುಂದೊಂದು ದಿನ ನಾನು ನಿತ್ಯ ಬರೆಯುವ ಕನಸುಗಳನ್ನು ಸಾಕ್ಷಾತ್ಕಾರ ಮಾಡಬಹುದು ಎನ್ನುವ ನಂಬಿಕೆಯೊಂದಿಗೆ ಎಲ್ಲೆಲ್ಲೋ ಮನದ ಆಂತರ್ಯದಿ ಚದುರಿದ ಅಕ್ಷರಗಳನ್ನು ನಿಮ್ಮ ಮುಂದೆ ಇರಿಸಿದ ತೃಪ್ತಿ ನನ್ನದು. ಮುಂದೆ ಬರೆಯದೇ ಇರಲು ಕಾರಣಗಳೇ ಇಲ್ಲ. ಸದ್ಯಕ್ಕೊಂದು ವಿರಾಮ ಹಾಕಿ ವಾಪಸ್ ಬರುತ್ತೇನೆ.Chevarhttp://www.blogger.com/profile/12119362877342017192noreply@blogger.com4tag:blogger.com,1999:blog-19828151.post-18804415225301307302010-01-26T21:00:00.002+05:302010-01-26T21:03:57.271+05:30ಹೋದೋರೆಲ್ಲ ಒಳ್ಳೆಯವರು...ಕನ್ನಡ ಚಿತ್ರ ರಂಗ ಆಘಾತಗಳ ಮೇಲೆ ಆಘಾತ ಅನುಭವಿಸುತ್ತಿದೆ. ನಾಗರಹಾವು ಅನ್ನೋ ಒಂದು ಚಿತ್ರದಿಂದ ಜೀವನದುದ್ದಕ್ಕೂ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತಿ ಪಡೆದಿದ್ದ ಅವರಿಂದು ನೆನಪು ಮಾತ್ರ. ಕನ್ನಡ ಚಿತ್ರ ರಂಗಕ್ಕೆ ಕಳೆದ ೨೫ ದಿನಗಳಲ್ಲಿ ಆಘಾತಗಳ ಮೇಲೆ ಆಘಾತ. ಮೊದ್ಲು ಗಾಯಕ ಸಿ. ಅಶ್ವಥ್ ಅವರನ್ನು ಕಳೆದು ಕೊಂಡೆವು. ಅಲ್ಲಿಗೆ 'ಕನ್ನಡವೇ ಸತ್ಯ' ಅಜರಾಮರವಾಗಿ ಉಳಿಯಿತು.<br /><br />ಅದಾಗಿ ಎರಡೇ ದಿನಕ್ಕೆ ಯಜಮಾನನಂತಿದ್ದ ವಿಷ್ಣುವರ್ಧನ್ ಹೊರಟೇ ಬಿಟ್ರು. ಒಂದು ಮುಂಜಾವದಲ್ಲಿ ಅವರು ಮೈಸೂರಿನಲ್ಲಿ ಇಹಲೋಕ ತ್ಯಜಿಸಿದರು. ಅಲ್ಲಿಗೆ ಮತ್ತೊಂದು ಯುಗ ಅಂತ್ಯವಾಯಿತು.<br /><br />ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು ಹೋಗ್ಬಿಟ್ರು. ಚಿತ್ರ ರಂಗದಲ್ಲಿ ನಾಯಕನಾಗದೆ ಪೋಷಕ ಪಾತ್ರದಲ್ಲೇ ೩೭೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವ್ರು ನಟಿಸಿದ್ದಾರೆಂದರೆ ಅವರ ಪ್ರತಿಭೆ ಯಾವ ಮಟ್ಟಕ್ಕಿರಬಹುದು ಅಂತ ನೀವೇ ಯೋಚಿಸಿ ನೋಡಿ. ಆದ್ರೆ ಇವೆಲ್ಲಕ್ಕಿಂತಲೂ ಅಶ್ವಥ್ ಅವರನ್ನು ಮೇರು ನಟನನ್ನಾಗಿಸಿದ್ದು ನಾಗರಹಾವು. ಈ ಚಿತ್ರ ಸುಮ್ಮನೆ ಖ್ಯಾತಿ ಪಡೆಯಲಿಲ್ಲ. ಚಿತ್ರದುರ್ಗದ ಕೋಟೆಯಲ್ಲಿ ಅಶ್ವಥ್ ಹಾಗೂ ವಿಷ್ಣು ಅದ್ಭುತವಾಗಿ ನಟಿಸಿದರು. ಅಲ್ಲಿ ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿಯ ಕಣ್ಣಾಮುಚ್ಚಾಲೆ ಚೆನ್ನಾಗೆ ನಡೀತು. ಕೋಟೆಯ ಮೇಲೆ ನಿಂತು ಮೇಷ್ಟ್ರು ರಾಮಾಚಾರಿ ಅಂತ ಕರೀತಾ ಇರೋ ದೃಶ್ಯ ಈಗಲೂ ಮನಪಟಲದಲ್ಲಿ ಹಾಗೆ ಅಚ್ಚೊತ್ತಿ ನಿಂತಿದೆ... ಕಿವಿಯಲ್ಲಿ ಅದೇ ರಾಮಾಚಾರೀ ಅನ್ನೋ ಕರೆ ಕೇಳ್ತಾ ಇದೆ. ಮೇಷ್ಟ್ರು ಹುಡುಕಾಡ್ತಾ ಇದ್ದಾರೆ. ಯಾಕೋ ಆ ದೃಶ್ಯಗಳಿಗೆ ಕೊನೆಯೇ ಇಲ್ಲ ಅನ್ನೋ ಭಾವ. <br /><br />ಯಾಕೋ ಕಲಾವಿದರ ಅಗಲಿಕೆಯ ಆಘಾತ ನೋಡಿದಾಗ ಮನಸ್ಸಿಗೆ ಬರೋದು ಒಂದೇ ಹಾಡು.. <strong>ಹೋದೋರೆಲ್ಲ ಒಳ್ಳೆಯವರು..</strong>Chevarhttp://www.blogger.com/profile/12119362877342017192noreply@blogger.com0tag:blogger.com,1999:blog-19828151.post-85241588090971289042009-09-24T02:35:00.002+05:302009-09-24T02:41:24.198+05:30ಈ ಮಳೆಯಲ್ಲಿ ನಿಂತು ಊರ ಮಳೆ ನೆನಪು!<div align="justify">ಕೊನೆಗೂ ಕಳೆದ ಮೂರು ವರ್ಷಗಳಿಂದ ಇದ್ದ ಕೊರಗು ದೂರವಾಗಿದೆ. ಮಳೆ ನಿರೀಕ್ಷೆಗೂ ಮೀರಿ ನನ್ನನ್ನು ತೋಯಿಸಿದೆ. ಕಾರಣ ಇಷ್ಟೇ ಓಣಂ ಹೆಸರಲ್ಲಿ ರಜೆ ಪಡೆದು ನಮ್ಮೂರು ಕಾಸರಗೋಡು ಕಡೆ ಹೋಗಿದ್ದೆ. ಭರ್ಜರಿ ೮ ದಿನ ಊರಲ್ಲಿ ಕೆಲಸದ ಯಾವುದೇ ಗುಂಗೇ ಇಲ್ಲದೆ ಕಳೆದಿದ್ದೆ. </div><div align="justify"><br /> ಮಂಗಳೂರು ಬಿಟ್ಟ ಮೇಲೆ ಈ ಪರಿ ನನ್ನ ಮಳೆ ಕಾಡಿದ್ದು ಇದೇ ಮೊದಲ ಬಾರಿ. ಬೆಂಗಳೂರು ಎಂಬ ಕಾಂಕ್ರೀಟ್ ಕಾಡು ತನ್ನ ಹೆಸರಿನಂತೆಯೇ ಮಳೆ ಕಡೆ ಕಣ್ಣೆತ್ತಿಯೂ ನೋಡಲಿಲ್ಲ ಆರಂಭದಲ್ಲಿ. ಆದರೆ ಕಳೆದ ವಾರ ಎರಡು ಬಾರಿ ಮಳೆ ಬಂದು ಕೊರಗು ದೂರವಾಗಿದೆ. ಆದರೆ ಊರಲ್ಲಿ ಬಂದಂತಹ ಮಳೆ ಬೆಂಗಳೂರಲ್ಲಿ ಬರದೇ ಇದ್ದಿದ್ದು ಭಾರಿ ಒಳ್ಳೆಯದೇ ಆಯಿತು. ಯಾಕೆಂದರೆ ಬೆಂಗಳೂರಿನ ಮಳೆ ಮಹಿಮೆ ಬಗ್ಗೆ ಬರೆದು ಮುಗಿಯುವಂತದ್ದಲ್ಲ. ಅಲ್ಲಿ ಒಳ್ಳೆಯದನ್ನು ಬಿಟ್ಟು ಎಲ್ಲವೂ ಇರುತ್ತದೆ. ಅದು ಏನೇ ಇರಲಿ ಈಗ ಊರ ಮಳೆಯ ಹಾದಿಗೆ ಬರೋಣ.</div><div align="justify"><br /> ಬೆಂಗಳೂರಿನಿಂದ ಹೊರಟು ಹಾಸನ ತಲುಪುವಷ್ಟರಲ್ಲೇ ಮಳೆಯ ಹನಿಗಳ ಲೀಲೆ ಆರಂಭವಾಗಿತ್ತು. ಆದರೆ ಅದಾಗಲೇ ಕಣ್ಣೆಳೆಯುತ್ತಿತ್ತು ನಾನು ನಿದ್ರಾದೇವಿ ಪರವಶನಾಗಿದ್ದೆ. ಮತ್ತೆ ಕಣ್ತೆರೆದಾಗ ಬಸ್ ಬಿ.ಸಿ. ರೋಡ್ ಸಮೀಪದ ಮಾಣಿಯಲ್ಲಿತ್ತು. ಅಲ್ಲಿಯೂ ಅದಾಗಲೇ ಮಳೆ ನೀರು ನೆಲವ ತೋಯಿಸಿತ್ತು. ಮಂಗಳೂರಿಗೆ ತಲುಪಿದಾಗ ಹನಿಗಳ ರಭಸ ಜೋರಾಗಿತ್ತು. ಬಸ್ ಇಳಿದು ನಿಲ್ದಾಣ ತಲುಪಬೇಕಾದರೆ ನಾನು ಅರ್ಧಂಬಂರ್ಧ ಒದ್ದೆ ಒದ್ದೆ. ಊರಿಗೆ ತಲುಪಬೇಕಾದರೆ ಮಳೆ ನಿಂತಿತ್ತು. ಆದರೆ ತೋಡಿನಲ್ಲಿ ಹರಿಯುತ್ತಿದ್ದ ಕೆಸರು ನೀರು ತನ್ನ ವೇಗಕ್ಕೆ ಮಿತಿಯೊಡ್ಡಿ ನಿಧಾನವಾಗಿ ಹರಿಯುತ್ತಿತ್ತು. ಈ ಹಿಂದೆಯೇ ಹೇಳಿದಂತೆ ಮಳೆ ಬಂತೆಂದರೆ ನಮ್ಮ ಮನೆ ಜಲಾವೃತ. ಅದೇ ರೀತಿ ಗೇಟ್ನಲ್ಲಿ ನಿಂತು ಮನೆಯತ್ತ ನೋಡಿದರೆ ಮನೆ ಮುಂದೆ ಅಂಗಳದಲ್ಲಿ, ಎದುರುಗಡೆ ಇರುವ ಇರುವ ಕಣಿವೆಯಲ್ಲಿ ನೀರು ಹರಿಯಲು ಆರಂಭವಾಗಿತ್ತು. ಹಾಗೆ ಮಧ್ಯಾಹ್ನವಾಯಿತು. ಆಕಾಶ ಕಪ್ಪಡರಿತು. ಮತ್ತೆ ಸುರಿಯಲಾರಂಭಿಸಿತು ಧೋ ಎಂದು ಮಳೆ. </div><div align="justify"><span class=""></span> </div><div align="justify">ಮಳೆಯ ಹನಿಗಳು ಅಂಗಳದಲ್ಲಿ ಬೀಳುವ ಶಬ್ದಗಳನ್ನು ಕಿವಿಯಲ್ಲಿ ಹಿಡಿದಿಡಲಾರಂಭಿಸಿದ್ದೆ. ಮಳೆರಾಯನಿಗೂ ಗೊತ್ತಾಗಿರಬೇಕು ನನ್ನ ಕುತೂಹಲ. ಹಾಗೆ ಬಿದ್ದ ಮಳೆಯನ್ನು ಗಂಟೆಗಳಲ್ಲಿ ಲೆಕ್ಕಹಾಕಿದರೆ ಸರಿಸುಮಾರು ಒಂದೂವರೆ ಗಂಟೆ.<br /><br /> ಹಾಗೆ ಒಂದು ಮಳೆ ಬಂದರೆ ನಮ್ಮ ಮನೆ ಜಲಾವೃತವಾಗಲು ಬೇಕಾಗುವುದು ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷ. ಮನೆಯ ಮುಂಭಾಗದಲ್ಲಿ, ಹಿಂಭಾಗದಲ್ಲಿ ನೀರು ಹರಿದುಹೋಗಲು ತೋಡು ಇದೆ. ಹೀಗೆ ಒಂದು ಮಳೆ ಬಂದರೆ ಎತ್ತರದ ಪ್ರದೇಶದಲ್ಲಿ ಒಂದೇ ಹಾದಿಯಲ್ಲಿ ಸೇರಿ ಹಳ್ಳ ಕೊಳ್ಳಗಳನ್ನು ದಾಟಿ ಬರಬೇಕು. ಹಾಗೆ ಬರುವ ವೇಳೆಗೆ ನೀರು ಗೇಟು ದಾಟಿ ನಮ್ಮ ಭೂಮಿಯಲ್ಲಿ ಬಂದು ಸೇರುತ್ತವೆ. ಹಾಗೇ ಅದು ನಿಧಾನವಾಗಿ ಪ್ರವಹಿಸುತ್ತಾ ಸಾಗಬೇಕು. ಅಂತಹ ಮಳೆ ನೀರನ್ನು ನೋಡಿ ಖುಷಿ ಪಟ್ಟ ದಿನಗಳೆಷ್ಟೋ. ನಂತರದ ನಾಲ್ಕು ದಿನಗಳಲ್ಲೂ ಮಳೆ ನಿಂತಿರಲಿಲ್ಲ. ಅದರಲ್ಲೂ ಮೂರನೇ ದಿನ ಸುರಿದಿದ್ದು ಭಾರೀ ಮಳೆ. ಮಳೆಯ ರಭಸಕ್ಕೆ ನೀರ ಹನಿಗಳು ವೇಗವಾಗಿ ಗಾಳಿಯ ಜತೆ ಮುಖಕ್ಕೆ ರಾಚುತ್ತಿದ್ದವು. ವಿದ್ಯಾಭ್ಯಾಸ ಪೂರೈಸಿದ ಪುತ್ತೂರು ಹಾಗೂ ಕೊಣಾಜೆಯಲ್ಲಿ ನಮ್ಮ ತರಗತಿ ನಡೆಯುತ್ತಿದ್ದುದು ಮೇಲ್ಮಹಡಿಯಲ್ಲಿ. ಅಲ್ಲಿ ಮೇಲ್ಗಡೆ ಸಿಮೆಂಟ್ ಹೊದಿಕೆ. ಜೋರಾಗಿ ಮಳೆ ಬಂದರೆ ಹನಿಗಳು ಜೋರಾಗಿ ಬಿದ್ದರೆ ತರಗತಿಯಲ್ಲಿ ಏನು ಪಾಠ ಮಾಡುತ್ತಿದ್ದಾರೆ ಎನ್ನುವುದೂ ತಿಳಿಯದಾಗುತ್ತದೆ. ಎಲ್ಲವೂ ಇಂದಿಗೆ ನೆನಪು ಮಾತ್ರ. ಆ ನಂತರದ ದಿನಗಳಲ್ಲಿ ಮಳೆ ಬಂದರೂ ಅದು ಹಿಂದೆ ಕಾಡಿದಷ್ಟು ತೀವ್ರವಾಗಿ ಕಾಡುತ್ತಿರಲಿಲ್ಲ. ಅಂತಹ ತೀವ್ರತೆಯ ಮಳೆ ಇನ್ನೊಂದು ಸಾರಿ ಜೀವನದಲ್ಲಿ ಬರಬೇಕು ಎಂಬ ಆಸೆ ಬೆಂಗಳೂರಲ್ಲಿರಬೇಕಾದರೆ ನಿಜವಾಗಿಯೂ ಮುರುಟಿಹೋಗಿತ್ತು. ಬೆಂಗಳೂರಲ್ಲಿ ಬಂದರೂ ಅದು ಅನಾಹುತಕ್ಕೆ ಕಾರಣವಾಗುತ್ತದೆಯೇ ಹೊರತು ಬೇರೆ ಏನೂ ಸಾಧಿಸಿದಂತಾಗುವುದಿಲ್ಲ. </div><div align="justify"><br /> ಹಾಗೆ ಎರಡು ಮಳೆಗೆ ಕೊಡೆಯೇ ಇಲ್ಲದೆ ನಡೆದಾಡಿದ್ದೆ ಊರಲ್ಲಿ. ಹಾಗೆ ಕಳೆದುಹೋದ ದಿನಗಳನ್ನು ಇಲ್ಲಿ ನಿಮ್ಮ ಮುಂದೆ ಸಾದರಪಡಿಸಲು ಸಮಯದ ಪರಿಧಿಯ ನನಗೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಸದ್ಯದ ಕೊರಗು. ಸದ್ಯ ಮಳೆಯ ಬಗ್ಗೆ ಇಷ್ಟು ಸಾಕು. ಇನ್ನೂ ಬರೆಯೋದಿದೆ ಸಾಕಷ್ಟು. ಸದ್ಯ ಒಂದು ಪುಟ್ಟ ವಿರಾಮ. ಕಲಿತ ಯುನಿವರ್ಸಿಟಿ, ಬೆಳೆದ ಊರು, ಒಂದರ್ಧ ದಿನದ ಪಿಕ್ನಿಕ್. ಇವುಗಳೆಲ್ಲವೂ ನಿಮ್ಮ ಮುಂದಿರಿಸಬೇಕು. ಅಷ್ಟರವರೆಗೆ ಇದನ್ನು ಓದಿಸಿಕೊಳ್ಳಿ.</div><div align="justify"> </div><div align="justify"><span class=""></span> </div>Chevarhttp://www.blogger.com/profile/12119362877342017192noreply@blogger.com2tag:blogger.com,1999:blog-19828151.post-35233644819673647652009-08-23T02:06:00.002+05:302009-08-23T02:39:32.817+05:30ಈ ರಜೆಯ ಮುಂಜಾವದಲಿ ಹೊರಡುತ್ತಿದ್ದೇವೆ...<div align="justify"> ಇಂದು ಆಫೀಸ್ಗೆ ರಜೆ. ಅರ್ಥಾತ್ ನಾನು ಬೆಂಗಳೂರಲ್ಲಿ ಇರಬಾರದು! ಈ ನಿಯಮ ಸಿಂಪಲ್. ಕಚೇರಿಗೆ ಕ್ಲೋಸ್ಡ್ ಹಾಲಿಡೇ ಇದ್ದ ದಿನ ನಾನು ಯಾವ ಕಾರಣಕ್ಕೂ ಬೆಂಗಳೂರಲ್ಲಿ ಇರುವುದಿಲ್ಲ. ಅದು ಬೆಂಗಳೂರಿನ ಮೇಲಿನ ಸಿಟ್ಟಾ? ಇಲ್ಲಾ, ಅಷ್ಟೂ ದಿನಗಳಲ್ಲಿ ಇಲ್ಲಿ ಅನುಭವಿಸಿದ ಟ್ರಾಫಿಕ್ ಜಂಜಾಟವಾ? ನಿರ್ದಿಷ್ಟ ಕಾರಣವಂತೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಒಂದು ಫುಲ್ ಡೇ ಬೆಂಗಳೂರಲ್ಲಿ ಕಳೆಯಲು ನನಗೆ ಪ್ರಿಯ ಎನಿಸುವಂತಹ ಜಾಗ ಯಾವುದೂ ಇಲ್ಲ. ಮೊದಲು ಇಸ್ಕಾನ್ ನನ್ನ ರಮ್ಯ, ಭವ್ಯ ತಾಣವಾಗಿತ್ತು. ಆದರೆ ಬೆಂಗಳೂರು ನನಗೆ ಆಪ್ತವಾದಂತೆ (?) ಇಸ್ಕಾನ್ ನನಗೆ ಭಕ್ತಿಯ ಭಾವವನ್ನು ಸುರಿಸಲಿಲ್ಲ. ಹಾಗಂತ ಪ್ರೀತಿಯ ಕೃಷ್ಣನನ್ನು ನಾನು ದೂರ ಮಾಡಲಿಲ್ಲ. ಆತನ ಮೇಲಿನ ಭಕ್ತಿ ದೂರಾಗಲಿಲ್ಲ. </div><div align="justify">ಬೆಂಗಳೂರು ಎಂಬ ಜಾಗ ಎಲ್ಲರಿಗೂ ವೆಲ್ಕಮ್ ಎನ್ನುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿ ನಾನೂ ಒಬ್ಬನಾಗಿ ಇಲ್ಲಿ ಸೇರಿ ಹೋಗಿದ್ದೆ. ಬೆಂಗಳೂರಿಗೆ ಬಂದು ಕಳೆದ ಈ ಮೂರೂ ಕಾಲು ವರ್ಷದಲ್ಲಿ ಬೆಂಗಳೂರು ಬದಲಾಗಿದೆ. ಆದರೆ ನನ್ನ ಪಾಲಿಗೆ ನಾನು ಬದಲಾಗಲಿಲ್ಲ. ಕೆಲವರು ನೀನು ತುಂಬಾ ಬದಲಾಗಿದ್ದೀಯ ಎಂದು ದೂರಿದರೆ ಅದು ನನ್ನ ದೋಷವಲ್ಲ.<br /> ಆರಂಭದ ಕೆಲದಿನಗಳನ್ನು ಬಿಟ್ಟರೆ ನಾನು ಹಾಗೂ ನನ್ನ ಜತೆ ಕೆಲಸ ಮಾಡುವ ಸಹೋದ್ಯೋಗಿಗಳು ಒಂದಲ್ಲ ಇನ್ನೊಂದು ಕಡೆಗೆ ಟ್ರಿಪ್ ಹೋಗಿ ಬರುತ್ತಿದ್ದೆವು. ಹಾಗೆ ಕಳೆದ ಬಾರಿ ಏಪ್ರಿಲ್ ತಿಂಗಳ ಯುಗಾದಿ ಸಂಭ್ರಮದಲ್ಲಿ ನಾವು ಮಂಜಿನ ನಗರಿ ಮಡಿಕೇರಿಯಲ್ಲಿದ್ದೆವು.<br /> ಈ ಬಾರಿ ನಾವು ಎಲ್ಲವೂ ಅಂದುಕೊಂಡಂತೆಯೇ ಸಾಗಿದ್ದರೆ ನಾವು ಇಂದು ಮುಂಜಾನೆಯ ವೇಳೆ ಚೆನ್ನೈಯಲ್ಲಿ ಇರುತ್ತಿದ್ದೆವು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಚೆನ್ನೈ ಯಾತ್ರೆಯನ್ನು ರದ್ದುಗೊಳಿಸಬೇಕಾಯಿತು. ಹಾಗಂದಾಕ್ಷಣವೇ ನಾನು ಮತ್ತೆ ಮಡಿಕೇರಿ, ಕುಶಾಲ ನಗರದ ಕಡೆಗೆ ಏಕಾಂತ ಯಾತ್ರೆಯ ಸ್ಕೆಚ್ ಹಾಕಲಾರಂಭಿಸಿದ್ದೆ. ಅಂತಹ ಒಂದು ಏಕಾಂತದ ಯಾತ್ರೆ ಮಾಡಿ ಸುಮಾರು ವರ್ಷಗಳೇ ಕಳೆದಿದ್ದವು. ಅಂತಹ ಒಂದು ಏಕಾಂತ ಸದ್ಯಕ್ಕೆ ನನಗೆ ಅಗತ್ಯವಿದೆಯೇ ಎಂದು ಯೋಚಿಸಿದಾಗ ಅನಿವಾರ್ಯವಲ್ಲ, ಆದರೆ ಮಡಿಕೇರಿಗೆ ಹೋಗುವುದು ಮಾತ್ರ ನಿಶ್ಚಿತ ಎಂದು ಮನಸಲ್ಲಿ ಯೋಚಿಸಿದ್ದೆ ನೋಡಿ. ಆದರೆ ನಿನ್ನೆ ಕಚೇರಿಗೆ ಬಂದು ಎಲ್ಲರ ಜತೆ ಚರ್ಚಿಸಬೇಕಾದರೆ ಚೆನ್ನೈ ಇಲ್ಲದಿದ್ದರೂ ಪರವಾಗಿಲ್ಲ. ಬೆಂಗಳೂರ ಸುತ್ತು ಮುತ್ತಲ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬೇಕು ಎನ್ನುವ ಪ್ಲಾನ್ ಹಾಕಲಾರಂಭಿಸಿದೆವು. ನಂದಿ ಹಿಲ್ಸ್, ಸಾವನ್ದುರ್ಗಾ ಈಗಾಗಲೇ ನಮ್ಮನ್ನು ಸ್ವಾಗತಿಸಿಯಾಗಿತ್ತು. ನಂತರ ಹೊಳೆದಿದ್ದು ಮೇಕೆದಾಟು. ಸದ್ಯ ಇಂದಿನ ಗಣೇಶ ಹಬ್ಬ ಮೇಕೆದಾಟುವಿನಲ್ಲಿ ನಿಗದಿಯಾಗಿದೆ. ಎರಡು ಬೈಕ್ಗಳಲ್ಲಿ ನಾಲ್ವರು ಹೊರಟಿದ್ದೇವೆ. ಇದು ಕೊನೆ ಕ್ಷಣದ ಬದಲಾವಣೆಯಾದರೂ ಬೆಂಗಳೂರೆಂಬ ಈ ಮಹಾನಗರಿಯಲ್ಲಿ ಇಂದಿನ ಫುಲ್ ಡೇ ಕಳೆದು ಹೋಗುವುದಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಅದಕ್ಕೇ ಏನಿದ್ದರೂ ಇನ್ನು ಕೆಲವ ಘಂಟೆಗಳಲ್ಲಿ ಸಿದ್ಧಗೊಳ್ಳಬೇಕಿದೆ. ಬಂದ ನಂತರ ವಿವರವಾಗಿ ಸಾಗಿದ ದಾರಿ, ಕ್ರಮಿಸಿದ ದಾರಿಯ ಬಗ್ಗೆ ಬರೆದೇನು. ಅದುವರೆಗೆ ಕಾಯುತ್ತಿರಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಮತ್ತೆ ನಿಮ್ಮ ಮುಂದೆ ಶೀಘ್ರದಲ್ಲೇ ಬರ್ತೀನಿ.</div>Chevarhttp://www.blogger.com/profile/12119362877342017192noreply@blogger.com3tag:blogger.com,1999:blog-19828151.post-23821728584065808042009-08-03T02:37:00.005+05:302009-08-04T02:16:56.601+05:30ಧನ್ಯವಾದಗಳು ನಿಮಗೆ...<div align="justify">ಎಲ್ಲ ಸ್ನೇಹಿತ/ ಸ್ನೇಹಿತೆಯರಿಗೆ ಧನ್ಯವಾದಗಳು. ಯಾಕೆ ಎಂದು ಕೇಳುತ್ತೀರಿ ಎಂದಾದರೆ ಉತ್ತರ ಹಾಗೇ ಸುಮ್ಮನೆ!!! ಗೆಳೆಯರು, ಗೆಳತಿಯರು ಯಾರೂ ಒಂದು ಎಸ್ಎಂಎಸ್, ಒಂದು ಫೋನ್ ಕಾಲ್, ಒಂದು ಇ-ಮೇಲ್ ಯಾವುದನ್ನೂ ಕಳುಹಿಸದೇ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಎಲ್ಲರೂ ಅಭಿನಂದನಾರ್ಹರು. ಅದರ ಜತೆ ನಾನೂ ಯಾವುದೇ ರೀತಿ ಎಸ್ಎಂಎಸ್, ಕಾಲ್, ಇ-ಮೇಲ್ ಅಂತ ತಲೆಕೆಡಿಸಿಕೊಳ್ಳದೆ ನನಗೆ ತಿಳಿದಿರುವ ಗೆಳೆಯರನ್ನು ಹಾಗೇ ಸುಮ್ಮನೆ ಮನಸ್ಸಲ್ಲಿ ನೆನಪಿಸಿಕೊಂಡೆ. ನಿನ್ನೆ ಗೆಳೆತನದ ದಿನ ಮುಗಿದಿದೆ, ಆದರೆ ಗೆಳೆತನ ಇನ್ನೂ ನಿನ್ನೆಗೇ ಮುಗಿಯದೆ ಚಿರಂತನವಾಗಿ ಮುಂದುವರಿಯುತ್ತಾ ಸಾಗುತ್ತಿದೆ. ಈ ದಿನ ಕಳೆದ ನಂತರ ಬರೆಯೋಣ ಎನ್ನಿಸಿತು. ಅದಕ್ಕೆ ಇಂದು ಈ ಅಕ್ಷರ ಮಾಲೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.</div><br /><div align="justify"><strong>Don't walk in front of me,</strong></div><br /><div align="justify"><strong>I may not follow.</strong></div><br /><div align="justify"><strong>Don't walk behind me,</strong></div><br /><div align="justify"><strong>I may not lead.</strong></div><br /><div align="justify"><strong>Walk beside me and be my friend." - Albert camus</strong></div><p align="justify">ನನ್ನ ಮುಂದಿನಿಂದ ನಡೆಯಬೇಡ, ನಾನು ನಿನ್ನನ್ನು ಹಿಂಬಾಲಿಸದೇ ಇರಬಹುದು. ನನ್ನ ಹಿಂಬಾಲಿಸಬೇಡ, ನಾನು ಮುನ್ನಡೆಸದೇ ಇರಬಹುದು. ನನ್ನ ಜತೆಯಾಗಿಯೇ ಹೆಜ್ಜೆ ಹಾಕುತ್ತಾ ನನ್ನ ಸ್ನೇಹಿತ, ಸ್ನೇಹಿತೆಯಾಗಿಯೇ ಇರು. </p><p align="justify">ಸ್ನೇಹಿತರ ದಿನದ ಬಗ್ಗೆ ಬರೆಯೋಣ ಎಂದು ಸುಮ್ಮನೆ ಇಂಟರ್ನೆಟ್ ಮುಂದೆ ಜಾಲಾಡುತ್ತಿದ್ದಾಗ ಕಾಣಿಸಿದ ಸುಂದರ ಸಾಲುಗಳಿವು. ಗೆಳೆತನದ ಬಗ್ಗೆ ಕೇವಲ ಕೆಲವೇ ಪದಗಳಲ್ಲಿ ಹೇಳಿದಂತಹ ಅದ್ಭುತ ಸಾಲುಗಳೆಂದು ನಿಮಗೂ ಅನಿಸಬಹುದು.<br />ಗೆಳೆತನದ ವಿಶೇಷ ದಿನ ನನಗೆಂದೂ ಆದ್ಯತೆಯಾಗಿರಲಿಲ್ಲ. ನನ್ನ ಗೆಳೆಯರು /ಗೆಳತಿಯರು ಎಂದೆಂದಿಗೂ ಮನದಲ್ಲಿ ಅಚ್ಚಳಿಯದೇ ಉಳಿಯುವಂತವರು. </p><p align="justify">ಅವರನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ದಿನ ಎಂದಾದರೆ ಆ ದಿನ ಬಾರದಿದ್ದರೆ ಅವರ ನೆನಪಾಗುವುದಿಲ್ಲವೇ. ಹಾಗಾಗಬಾರದು, ನಮ್ಮ ಒಳಿತು ಕೆಡುಕುಗಳ ನಡುವೆ ನಮ್ಮ ಜತೆಗೆ ಇದ್ದುಕೊಂಡು, ದೂರ ಇದ್ದರೂ ಹಿತ ಹಾರೈಸಿಕೊಂಡು ಬಾಳುವಂತಹ ಒಂದು ಗೆಳೆತನ ಸಾಧ್ಯವಾಗಬೇಕು. ಆ ಸಾಧ್ಯವಾಗುವಿಕೆಗೆ ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಅದು ಬಿಟ್ಟು ನೀ ನನಗಿದ್ದರೆ ನಾ ನಿನಗೆ ಎಂಬಂತಹ ಮಾತು ಅಲ್ಲಿ ಕಾಣಿಸಲೇ ಬಾರದು. </p><p align="justify">ಆದರೆ ಇಂದು ನಾವು ಬ್ಯುಸಿ ಲೈಫ್, ಕೆಲಸದ ಒತ್ತಡ ಇತ್ಯಾದಿ ಕುಂಟು ನೆಪಗಳನ್ನು ಒಡ್ಡಿ ಒಂದು ಸಂಬಂಧವನ್ನು ಭದ್ರವಾಗಿಡಲು ಕಷ್ಟ ಪಡುತ್ತಿದ್ದೇವೆ. ಇದಕ್ಕೆ ಕಾರಣವೇನು ಎಂದು ಯೋಚಿಸುತ್ತಾ ಕುಳಿತರೆ ಹಲವು ಕಾರಣಗಳು ಹೊಳೆದೀತೇನೋ? ಆದರೆ ಒಂದು ಸುಂದರ ಸಂಬಂಧವನ್ನು ನೆನಪಿರಿಸಿಕೊಳ್ಳಲೂ ಅಸಾಧ್ಯವಾದಂತಹ ಅದೇನು ಕೆಲಸ ಇದೆಯೋ ಗೊತ್ತಾಗುತ್ತಿಲ್ಲ. </p><p align="justify">ಬಹುಶಃ ಗೆಳೆತನದ ಬಗ್ಗೆ ಹಿಂದೆಲ್ಲಾ ನಾವು ಇಷ್ಟೆಲ್ಲಾ ಯೋಚಿಸುತ್ತಿರಲಿಲ್ಲವೇನೋ? ನನಗೆ ಗೊತ್ತಿರುವಂತೆ ಫ್ರೆಂಡ್ಶಿಪ್ ಡೇ ನನಗೆ ಮೊದಲು ಎದುರಾಗಿದ್ದು ಪುತ್ತೂರಿನಲ್ಲಿ ಪದವಿ ತರಗತಿಯಲ್ಲಿದ್ದಾಗ. ಆಗೆಲ್ಲಾ ಅದು ಸಂಭ್ರಮ ಎನ್ನಲು ಕಾರಣವಾಗುತ್ತಿತ್ತು. ಆದರೆ ಅದರ ನಂತರದ ದಿನಗಳಲ್ಲಿ ಗೆಳೆತನದ ಬಗ್ಗೆ ವಿಶೇಷ ಗಮನಹರಿಸುತ್ತಿರಲಿಲ್ಲ. ಇದರರ್ಥ ಯಾರ ಜತೆಗೂ ಬೆರೆಯುತ್ತಿರಲಿಲ್ಲ ಎಂದಲ್ಲ. ಆದರೆ ಆ ದಿನ ಬಾರದಿದ್ದರೂ ನಾವು ಸ್ನೇಹಿತರೆಲ್ಲರೂ ಜತೆಯಾಗಿ ಕಾಲಕಳೆಯುತ್ತಿದ್ದವು. </p><p align="justify">ಒಂದು ಸೂಕ್ಷ್ಮ ಸಂಬಂಧ ಗೆಳೆತನವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವವರನ್ನು ಕಂಡರೆ ತೀವ್ರ ಸಂಕಟ ಪಡುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಒಂದು ಕಂಫೋರ್ಟ್ ಝೋನ್ ನಾನೇ ಮಾಡಿಕೊಟ್ಟು ಬಿಡುತ್ತೇನೆ. ಅದೆಲ್ಲವನ್ನೂ ಮೀರಿ ಗೆಳೆತನದಲ್ಲಿ ನಾನು ಸಾಗಿ ಬಂದಿದ್ದೇನೆ. ಇದ್ದ ಕೆಲವೇ ಕೆಲವು ಗೆಳೆಯರಲ್ಲಿ ಎಲ್ಲರೂ ಅವರಿಂದಾಗುವಷ್ಟು ರೀತಿಯಲ್ಲಿ ಸಂಭಾಳಿಸುತ್ತಾ ಸಾಗಿದ್ದಾರೆ ಎನ್ನುವ ಕಾರಣಕ್ಕೆ ಇಂದಿಗೂ ನಾನು ಅತಿ ಖುಷಿ ಪಡುತ್ತಿದ್ದೇನೆ.<br /><br />ಗೆಳೆತನದ ಬಗ್ಗೆ ನಾನು ಅತಿ ಹೆಚ್ಚು ಇಷ್ಟಪಟ್ಟು ನೆನಪಲ್ಲಿ ಉಳಿಸಿಕೊಳ್ಳಲು ನೆರವು ನೀಡಿದ ಕೆಲವು ಇಂಗ್ಲಿಷ್ ಸಾಲುಗಳನ್ನು ಹಾಗೇ ನಿಮ್ಮ ಮುಂದೆ ಇರಿಸುತ್ತಿದ್ದೇನೆ. ನಿಮಗೆ ಇಷ್ಟವಾದೀತು ಎಂಬ ಭರವಸೆಯೊಂದಿಗೆ. ಈ ಸಾಲುಗಳು ನನ್ನ ಕೈಗೆ ಲಭಿಸಿ ಕೆಲ ವರ್ಷಗಳು ಕಳೆದವು. ಇತ್ತೀಚಿನ ದಿನಗಳಲ್ಲಿ ನಾನು ಅತ್ಯಂತ ಆಪ್ತವಾಗಿರಿಸಿಕೊಂಡಿದ್ದು ಈ ಸಾಲುಗಳನ್ನು. ಇದರ ಪ್ರತಿ ಸಾಲಿನಲ್ಲಿ ನನಗೆ ಗೋಚರಿಸುವ ಸತ್ಯಗಳು ಸದಾ ನನ್ನನ್ನು ಜಾಗೃತನನ್ನಾಗಿಯೇ ಇರಿಸಿದೆ. ಹಾಗೆ ಎಲ್ಲೋ ಎಂದು ಕಡೆ ಸಿಕ್ಕಿತು, ಅದನ್ನು ಇನ್ನೆಲ್ಲೋ ಒಂದು ಕಡೆ ಬಿಟ್ಟು ಬಿಡಬೇಕು ಎನ್ನುವಂತೆಯೂ ಇಲ್ಲ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡರೆ ಉತ್ತಮ ಎನಿಸಿದ ಕಾರಣಕ್ಕೆ ಈ ಸಾಲುಗಳು ನಿಮ್ಮ ಮುಂದಿವೆ.</p><br /><div align="justify"><span style="font-size:180%;"><strong>“To You”</strong></span></div><div align="justify"><span style="font-size:180%;"><br /></span>You wiped the tears<br />That fell not from my eyes<br />And saw the well<br />Build up in me<br />A fortress of stone<br />Become an unfeeling heart.<br />Your words, stupid<br />Wise and funny<br />Broke the barrier<br />I feel again<br />Shades of joy, anger,<br />Sorrow and all that<br />You make me laugh<br />You make me cry<br />you make me feel<br />Whole again<br />You make me be<br />Me again<br />Life is good<br />Because you are there<br />My friend, my confidante,<br />A support system<br />You are the best<br />I ever knew.</div><br /><div align="justify"></div><br /><div align="justify">ಹ್ಯಾಪಿ ಫ್ರೆಂಡ್ಶಿಪ್ ಡೇ!!! </div><div align="justify">ಕೆಲವರು ಬೈದರು, ಇನ್ನು ಕೆಲವರು ಕೆಟ್ಟವನು ಎಂದರು, ಮತ್ತೆ ಕೆಲವರು ತರಲೆ, ಹಲವರು ದುಷ್ಟ, ಹೃದಯಕ್ಕೆ ಹತ್ತಿರವಾಗಿಸಿಕೊಳ್ಳದ ಎಂದರೆ ಇನ್ನೊಂದು ವರ್ಗದವರು ಸ್ವೀಟ್ ಎಂದರು. ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ. ಎಲ್ಲರೂ ಅವರವರು ನನ್ನಲ್ಲಿ ಕಂಡ ಒಳ್ಳೆಯ, ಕೆಟ್ಟದ್ದನ್ನು ಹೇಳಿದರು. ಇನ್ನು ಕೆಲವರಲ್ಲಿ ಅಳುಕಿತ್ತು. ಆದರೆ ಮೌನದಲ್ಲೇ ಅಥವಾ ನನ್ನ ಆಪ್ತರಾದವರಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಆ ಕೇಳುವ ಜೀವ ಒಂದೂ ಅಕ್ಷರ ಬಿಡದೆ ಜಗತ್ತು (ಅರ್ಥಾತ್ ನಿನ್ನ ಸುತ್ತುಮುತ್ತಲಿನವರು) ಏನು ಹೇಳುತ್ತೆ ಎನ್ನುವುದನ್ನು ಅತಿ ಮೃದುವಾಗಿ, ಅಷ್ಟೇ ಚೆನ್ನಾಗಿ ನಾಟುವಂತೆ ಹೇಳುತ್ತಿತ್ತು. ಆ ಕಾರಣಕ್ಕೆ ನನ್ನ ಧನ ಹಾಗೂ ಋಣಾತ್ಮಕ ಅಂಶಗಳನ್ನು ಪಟ್ಟಿ ಮಾಡಿ ತೋರಿಸಿ ಹೇಳುತ್ತಿತ್ತು. ನಾನು ಅದನ್ನು ಚಾಚೂ ತಪ್ಪದೆ ಆಲಿಸುತ್ತಿದ್ದೆ. ಆದರೆ ಕೆಲವರು ಒಂದು ಮಧುರ ಭಾಂದವ್ಯವನ್ನು ಅಳಿಸುವ ಯತ್ನ ಮಾಡಿದ್ದರು. ಆದರೆ ಅದು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇ ಇಲ್ಲ ಎನ್ನುವುದೂ ಇಂದು ನನ್ನ ಮುಂದಿರುವ ವಾಸ್ತವ. ಒಬ್ಬ ಸಾಮಾನ್ಯ, ನನ್ನ ಗೆಳೆಯರು, ಹಿತೈಷಿಗಳು ಎನ್ನುವ ಕಾರಣಕ್ಕೆ ಕೇಳುಗನಾಗಿ ಎಲ್ಲವನ್ನೂ ಸ್ವಾಗತಿಸಿದ್ದೇನೆ. ಆ ಕಾರಣಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಿದ್ದೇನೆ. </div><div align="justify"> </div><div align="justify">ಈ ದೀರ್ಘ ಬರಹ ಮನಸಿಗೆ ಖುಷಿಯಾಗಿರಬಹುದು ಎಂದುಕೊಂಡಿದ್ದೇನೆ. ಗೆಳೆತನ ದಿನವೊಂದಕ್ಕೆ ಸೀಮಿತವಾಗದೇ ಮುಂದುವರಿಯಲಿ. ಸಿಗಲಿ, ಬಾಳಲಿ ಹೊಸ ಚಿಗುರು...!!!</div><br /><div align="justify"></div>Chevarhttp://www.blogger.com/profile/12119362877342017192noreply@blogger.com0tag:blogger.com,1999:blog-19828151.post-5456597515123327332009-07-27T02:40:00.002+05:302009-07-28T02:48:25.327+05:30ಎಲ್ಲಾ ಮಳೆ ಲೀಲೆ!!!ಏನಾದರೂ ಬರೆಯಬೇಕು ಎಂದು ಕಳೆದ ಮೂರು ವಾರಗಳಿಂದ ಯೋಚಿಸುತ್ತಾ ಇದ್ದೇನೆ. ಆದರೆ ಏನೂ ಹೊಳೆಯುತ್ತಿಲ್ಲ. ಕಳೆದ ಐದಾರು ವರ್ಷಗಳಲ್ಲಿ ಈ ಥರಾ ಎಂದೂ ಆಗಿಲ್ಲ. ಏನು ಬರೆಯಲು ಕುಳಿತರೂ 10 ರಿಂದ 15 ನಿಮಿಷದೊಳಗೆ ಮುಗಿಯಬೇಕು. ಹೆಚ್ಚು ಎಂದರೆ 20 ನಿಮಿಷ ಮಾತ್ರ.<br />ಆದರೆ ಇಂದು ಹಾಗಾಗುತ್ತಿಲ್ಲ. ನಾನಿಂದು ಈ ಬ್ಲಾಗ್ನಲ್ಲಿ ಬರೆಯಬೇಕೆಂದರೆ ಭಾರಿ ಕಷ್ಟಪಡುತ್ತಿದ್ದೇನೆ. ಯಾಕೆ ಎಂದು ಇನ್ನೂ ತಿಳಿಯುತ್ತಿಲ್ಲ. ಈ ರೀತಿ ಈ ಹಿಂದೆ ಆಗದೇ ಇರುವ ಕಾರಣ ಇದಕ್ಕೆ ಇದೇ ಕಾರಣ ಎಂದು ನಾನು ಹೇಳುವ ಸ್ಥಿತಿಯಲ್ಲಿಯೂ ಇಲ್ಲ. ಒಟ್ಟಿನಲ್ಲಿ ಒಂದು ಮೂಡಿ ಸ್ವಭಾವ ಬರೆಯಲು ಕುಳಿತುಕೊಳ್ಳುವಾಗ ಆರಂಭವಾಗುತ್ತದೆ.<br />ಸದ್ಯ ವಿಶೇಷ ಏನೂ ಇಲ್ಲ. ಈ ಬೆಂಗಳೂರೆಂಬ ಕಾಂಕ್ರೀಟ್ ಕಾಡಿನಲ್ಲಿ ಮಳೆಯೂ ಇಲ್ಲ! ಊರಿಗೆ ಫೋನ್ ಮಾಡಿದರೆ ಮಳೆಯದೇ ಸುದ್ದಿ. ಮಳೆ ಬಂದು ಹಾಗಾಯಿತಂತೆ, ಹೀಗಾಯಿತಂತೆ ಈ ರೀತಿ ಮಳೆಯ ವರದಿಯನ್ನು ಎರಡು ದಿನಕ್ಕೊಮ್ಮೆ ಕೇಳುತ್ತಲೇ ಇರುತ್ತೇನೆ. ಆಗೆಲ್ಲಾ ರಜೆ ಹಾಕಿ ಊರಿಗೆ ಹೋಗಬೇಕು ಎನ್ನುವ ಭಾವ ಕಾಡುತ್ತದೆ. ಊರಲ್ಲಿದ್ದಿದ್ದರೆ ನಾನಾಗುತ್ತಿದ್ದೆ ಮಳೆಯಲ್ಲಿ ಒದ್ದೆ ಒದ್ದೆ!!!<br />ಮಳೆ ಬಂತೆಂದರೆ ಸಾಕು ನಮ್ಮ ಮನೆ ಪರಿಸರವೆಲ್ಲಾ ಜಲಾವೃತ. ಮನೆಯ ಒಳಗಡೆ ನೆಲದಡಿಯಿಂದ ನೀರಿನ ತೇವಾಂಶ ಬರಲು ಆರಂಭಿಸುತ್ತದೆ. ಮನೆಯ ಬಲಬದಿಯ ಎತ್ತರ ಪ್ರದೇಶದಲ್ಲಿರುವ ನೆರೆ ಮನೆಯವರ ಜಮೀನಿನಲ್ಲಿ ಒಂದು ಕೆರೆಯಿದೆ. ಆ ಕೆರೆಯಿಂದ ಮಳೆಗಾಲದಲ್ಲಿ ಹೊರಟ ನೀರು ನಮ್ಮ ಮನೆಯ ಮುಂದಿನಿಂದಲೇ ಸಾಗಬೇಕು. ಅಲ್ಲಿ ನೀರು ನಡೆದದ್ದೇ ಹಾದಿ, ನಾವ್ಯಾರೂ ಅದನ್ನು ಕಟ್ಟಿ ಹಾಕಲು ಹೋಗುವುದೇ ಇಲ್ಲ. ಕಟ್ಟಿ ಹಾಕಿದರೂ ಜೋರಾದ ಒಂದು ಮಳೆ ಬಂದರೆ ಸಾಕು. ಮತ್ತೆ ನಮ್ಮ ಕಾಂಪೌಂಡ್ ತುಂಬಾ ನೀರು ನೀರು ನೀರು. ಹಾಗಂತ ಆ ನೀರು ನಮಗೆ ಯಾವತ್ತೂ ಒಂದು ಹೊರೆ ಅನ್ನಿಸಿಲ್ಲ. ಅಂತಹ ಮಳೆಗಾಲ ಪೂರ್ತಿ ಊರಲ್ಲಿದ್ದು ಎಷ್ಟು ವರ್ಷವಾಯಿತೋ...?<br />ಪ್ರತಿವರ್ಷದಂತೆ ಈ ಬಾರಿಯೂ ಮಳೆ ಕಾರುಬಾರು ಈಗಲೂ ಜೋರು. ಕೆಲವರು ಮಳೆಯದು ತೀರಾ ಅತಿಯಾಯಿತು ಎನಿಸಿದಾಗ ಛೇ, ಈ ಮಳೆ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ ಎದು ದೂರುತ್ತಾರೆಯೇ ವಿನಾ ಮಳೆ ನಿಲ್ಲಲಿ ಎಂದು ಬಯಸುವುದೇ ಇಲ್ಲ.<br />ಆದರೆ, ಇಲ್ಲಿ ಈ ಕಾಂಕ್ರೀಟ್ ಕಾಡಿನಲ್ಲಿ ಮಳೆ ಎಂದರೆ ನರಕ ಸದೃಶವಾಗುತ್ತದೆ. ಕಚೇರಿಯ ಒಳಗಿನಿಂದ ಕುಳಿತು, ರೂಮ್ನ ಒಳಗೆ ಕುಳಿತು ಮಳೆ ಹನಿಯನ್ನು ನೋಡಲು ಬಯಸುತ್ತೇನೆಯೇ ಹೊರತು ಈ ಮಳೆಯಲ್ಲಿ ನೆನೆಯಬೇಕು, ಮಳೆಯಲ್ಲಿ ನೆನೆಯುತ್ತಾ ಒಂದಿಡೀ ದಿನ ಕಳೆಯಬೇಕು ಎಂದು ಕಾಣಿಸುವುದೇ ಇಲ್ಲ.<br />ಸರಿಯಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು, ಇಲ್ಲಿನ ಸಮಸ್ತ ಚರಂಡಿಗಳೂ ನಮ್ಮನ್ನು ಹೊಲಸು ಮಾಡಿ ಹಾಕುತ್ತವೆ. ಚರಂಡಿಯ ತ್ಯಾಜ್ಯ ನನ್ನನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಆದರೆ ಇದೇ ಮಳೆಗೆ ಊರಲ್ಲಿದಿದ್ದರೆ ಎಂಬ ಭಾವ ಕಾಡುತ್ತೆ. ಹಾಗೆ ಊರ ಮಳೆ ಬಿಟ್ಟರೆ ಮತ್ತೆ ಮೂರು ವರ್ಷ ಪುತ್ತೂರಲ್ಲಿ, ಆ ಬಳಿಕ ಎರಡು ವರ್ಷ ಮಂಗಳೂರಲ್ಲಿ ಮಳೆಯದ್ದೇ ಕಾರ್ಬಾರು. ದಕ್ಷಿಣ ಕನ್ನಡದ ಮಟ್ಟಿಗೆ ಮಳೆ ಎಂದಿಗೂ ಮೋಸ ಮಾಡಿಲ್ಲ. ಅದು ಬಿಟ್ಟರೆ ನಾನು ಮಳೆಯನ್ನು ಅತ್ಯಂತ ಇಷ್ಟಪಡುವುದು ನನ್ನ ಸಂಬಂಧಿಕರಿರುವ ಬೇಕಲ ಕೋಟೆ ಸಮೀಪದ ತ್ರಿಕ್ಕನ್ನಾಡ್ ಎಂಬ ಸ್ಥಳ. ರಸ್ತೆಯ ಒಂದು ಬದಿ ಶಿವ ದೇವಸ್ಥಾನ. ರಸ್ತೆ ದಾಟಿದರೆ ಸಮುದ್ರ ತೀರ. ಮಧ್ಯೆ ಹಾದು ಹೋಗುವುದು ಕಾಸರಗೋಡು- ಕಾಂಞಂಗಾಡ್ ಹೆದ್ದಾರಿ. ಸಂಜೆಯ ಸೂರ್ಯಾಸ್ತಮಾನಕ್ಕೆ ಹೇಳಿ ಮಾಡಿಸಿದ ಸ್ಥಳ. ಹಾಗೆ ಅಲ್ಲಿನ ಮರಳದಂಡೆಯಲ್ಲಿ ನಿಂತು ಅದೆಷ್ಟು ಸಂಜೆಯನ್ನು ಕಳೆದೆನೋ ಅದೆಷ್ಟು ಹೊತ್ತು ಅತ್ತೆ ಮಗಳ ಜತೆ ಕಾಲ ಕಳೆದೆನೋ. ಅದೆಷ್ಟು ಬಾರಿ ಅವಳನ್ನು ಸಮಾಧಾನ ಪಡಿಸಿದೆನೋ? ಅದೆಷ್ಟು ಬಾರ ಬಾರಿ ಅವಳು ನನ್ನಲ್ಲಿ ಗೋಗರೆದಳೋ? (ಅತ್ತೆ ಮಗಳು ಎಂದಾಕ್ಷಣ ಏನೇನೋ ಯೋಚನೆ ಬೇಡ)<br />ಹಾಗೆ ಅಲ್ಲಿ ಮಳೆ ಜೋರಾಗಿ ಸುರಿದರೆ ಸಮುದ್ರದ ಅಲೆಗಳು ರಸ್ತೆ ದಾಟಿ ಬರುತ್ತದೆ. ರಸ್ತೆ ನೀರಲ್ಲಿ ಮುಳುಗಡೆ ರಸ್ತೆ ಸ್ವಲ್ಪ ಎತ್ತರದಲ್ಲಿದೆ. ಹಾಗೆ ರಸ್ತೆ ದಾಟಿದ ನೀರು ಮತ್ತೆ ರಸ್ತೆಯ ಈಚೆಗೆ ಬಂದು ಸೇರುತ್ತದೆ. ಹಾಗೆ ಅಲ್ಲೆಲ್ಲಾ ನೀರುನೀರು. ಸಮುದ್ರದ ಉಪ್ಪು ನೀರಲ್ಲಿ ಮನೆಯೊಳಗೆ ಕೂತರೆ ಏನೋ ಒಂಥರಾ. ಕಾಲುಗಳು ಉಪ್ಪಿನ ಅಂಶದಿಂದ ಅಂಟು ಅಂಟು. ಹಾಗೆ ಅಲ್ಲಿ ಮಳೆ ಸುರಿಯುತ್ತಾ ಇರುತ್ತೆ.<br />ಇಂತಹ ಹಲವು ಕತೆಗಳು ಕಣ್ಣ ಮುಂದೆ ಕಟ್ಟುತ್ತಾ ಹೋಗುತ್ತವೆ. ಕೆಲವು ಜೀವಂತ ಕತೆಗಳು. ಕೆಲವು ಕೇವಲ ನನಗೆ ಮಾತ್ರ ತಿಳಿದಿದ್ದು, ಕೆಲವರು ತಿಳಿಯಲು ಪ್ರಯತ್ನಿಸಿದ್ದು. ಆದರೂ ನಾನು ಬಾಯ್ಬಿಡದೇ ಇದ್ದಿದ್ದು. ಕೆಲವರು ನನಗೆ ತಿಳಿಯಲೇ ಬಾರದು ಎಂದು ಎಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾಗದ ಎಲ್ಲಾ ರಹಸ್ಯಗಳು ಅವುಗಳಾಗಿಯೇ ಹೊರ ಬೀಳುತ್ತವೆ. ಯಾರು ಮುಚ್ಚಿಡಲು ಪ್ರಯತ್ನಿಸಿದ್ದರೋ ಅವರಾಗಿಯೇ ಎಲ್ಲವನ್ನು ಬಾಯಿ ಬಿಟ್ಟು ಹೇಳುತ್ತಾರೆ. ಕೇಳುಗ ನಾನು ಮೊದಲೇ ಗೊತ್ತಿದ್ದರೂ ಯಾವುದನ್ನೂ ತೋರ್ಪಡಿಸಿದೆ ಮತ್ತೂ ಅತ್ಯುತ್ತಮ ಎಂಬ ಕೇಳುಗನಾಗುತ್ತೇನೆ. ಅದೇ ಕಾರಣಕ್ಕೆ ಎಲ್ಲರೂ ಬಯ್ಯುತ್ತಾರೆ. ಜೀವನದಲ್ಲಿ ಇಷ್ಟೆಲ್ಲಾ ತಾಳ್ಮೆ ಇಟ್ಟುಕೊಳ್ಳಬಾರದು. ಮುಂದೆ ನಿನಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ನಾನು ಅದನ್ನು ಒಂದು ನಗುವಿನೊಂದಿಗೆ ಸ್ವೀಕರಿಸುತ್ತಾ ಇರುತ್ತೇನೆ. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾನು ಕೇಳುತ್ತಲೇ ಇರುತ್ತೇನೆ. ಯಾರಿಗೊತ್ತು ಮುಂದೊಂದು ದಿನ ಅವರು ಹೇಳಿದ್ದು ನಿಜವಾಗುತ್ತದೋ ಗೊತ್ತಿಲ್ಲ. ಆದರೆ ಒಂದು ಸಂಬಂಧವನ್ನು ವಿನಾಕಾರಣ ಕೊಂದು ಸಾಗುವ ಮನಸು ಇನ್ನೂ ಸಾಧ್ಯವಾಗಿಲ್ಲ. ಹಾಗೊಂದು ದಿನ ಜೀವನದಲ್ಲಿ ಆರಂಭವಾದರೆ ಅಲ್ಲಿ ನಾನು ನಾನಾಗಿರುವುದಿಲ್ಲ. ಮಳೆ ಸುಖವಾಗಿರುವುದಿಲ್ಲ. ತುಂತುರು ಮಳೆ ಹಾನಿಯೂ ಕಿರಿಕಿರಿಯಾಗುತ್ತೆ. ಈ ರೀತಿ ಸುದೀರ್ಘವಾದ ಕತೆ ಹೇಳುವುದು ಸಾಧ್ಯವಾಗುವುದೂ ಇಲ್ಲ. ಮಳೆ ಕತೆ ಹೇಳಲು ಆರಂಭಿಸಿ ಜೀವನದ ಕತೆ ಆರಂಭವಾಗಿದೆಯಲ್ಲಾ. ತಪ್ಪು ನನ್ನದಲ್ಲ ಕಣ್ರೀ. ಬೆಂಗಳೂರಿನ ಮಳೆಯದು. ಊರಲ್ಲಿ ಬಂದ ಮಳೆ ಇಲ್ಲಿಯೂ ಬಂದಿದ್ದರೆ ನಾನು ಇಷ್ಟೆಲ್ಲಾ ಬರೆಯುವುದಿತ್ತಾ? ನಿಮಗೆ ಏನಾದರೂ ಆಕ್ಷೇಪಗಳಿದ್ದರೆ ನನ್ನ ಮೇಲೆ ಹೊರಿಸಬೇಡಿ. ಎಲ್ಲಾ ಮಳೆ ಲೀಲೆ!!!Chevarhttp://www.blogger.com/profile/12119362877342017192noreply@blogger.com1tag:blogger.com,1999:blog-19828151.post-38371745984455577962009-06-24T15:34:00.002+05:302009-06-24T16:12:54.300+05:3024 ಕ್ಕೆ ವಂದನೆ, 25 ಕ್ಕೆ ಪಾದಾರ್ಪಣೆ<div align="justify">ಇಂದಿಗೆ 25 ವರ್ಷಕ್ಕೆ ಪಾದಾರ್ಪಣೆ. ಅರ್ಥಾತ್ ಎಲ್ಲರೂ ಹೇಳುವಂತೆ ರಜತ ಸಂಭ್ರಮದ ಕಾಲ. ಆದರೆ ನನ್ನ ಪಾಲಿಗೆ ಇದು ಜಸ್ಟ್ ಎನದರ್ ಡೇ. ಸಂಭ್ರಮಿಸುವ ಘಳಿಗೆ ಇನ್ನೂ ಕೂಡಿ ಬಂದಿಲ್ಲ. ಈ ದಿನವನ್ನು ಆಚರಿಸಿದರೆ ಅದು ವಿಶೇಷ ಎನ್ನುವುದು ಏನೂ ಸಂಭವಿಸುವುದಿಲ್ಲ ಎಂದೂ ಗೊತ್ತು. ಹಾಗಂತ ಅದು ವೈರಾಗ್ಯವಲ್ಲ. ಹುಟ್ಟು ಸಾವಿನ ನಡುವಣ ಹಾದಿಯಲ್ಲಿ ಕಳೆಯುವ ೩೬೫ ದಿನಕ್ಕೊಂದರಂತೆ ಒಂದಂಕಿ ಏರಿಕೆ ಮಾತ್ರ.<br /><br />ಹಿಂದೊಂದು ಕಾಲವಿತ್ತು. ಜೂ.24 ಅಂದರೆ ಸಾಕು ಅದು ಸಂಭ್ರಮದ ಕ್ಷಣ. ಪ್ರತಿ ವರ್ಷವೂ ಜೂನ್ 24 ಅಂದರೆ ದೊಡ್ಡಮ್ಮನ ಕೊಡುಗೆಗಳದ್ದೇ ಕಾರ್ಬಾರು. ಅಂತಹ ಒಂದು ಗಿಫ್ಟ್ ಕೊಡುತ್ತಿದ್ದರು. ಆದರೆ ಯಾವಾಗ ಎಸ್ಎಸ್ಎಲ್ಸಿ ಮುಗಿಯಿತೋ ಅಲ್ಲಿಗೆ ಸಂಭ್ರಮ ಕ್ಷೀಣಿಸಲಾರಂಭಿಸಿತು. ಆ ನಂತರದ ದಿನಗಳಲ್ಲಿ ಪಿಯುಸಿಯಲ್ಲಿ ಕೆಲವರ ಒತ್ತಾಯಕ್ಕೆ, ಪದವಿ ಕಲಿಯುವ ದಿನಗಳಲ್ಲಿ ಪತ್ರಿಕೋದ್ಯಮದ ಹಾದಿ ತೋರಿಸಿಕೊಟ್ಟ ಗೆಳತಿಯ ಒತ್ತಾಸೆಗೆ, ವಿಶ್ವವಿದ್ಯಾನಿಲಯದಲ್ಲಿ ಜೀವದ ಗೆಳತಿಯ ಮುಖದಲ್ಲಿ ಒಂದು ಮಂದಹಾಸವನ್ನು ಕಾಣಲಿಕ್ಕೆ ಬರ್ತ್ಡೇ ಇತ್ತು. ಅದಕ್ಕೆ ಅವರು ಟ್ರೀಟ್ ಹೆಸರಲ್ಲಿ ಅಸಲು ಬಡ್ಡಿ ಎರಡನ್ನೂ ಸ್ವೀಕರಿಸುತ್ತಿದ್ದರು ಎನ್ನುವುದೂ ಅಷ್ಟೇ ವಾಸ್ತವ!!!<br /> ಬಹುಶಃ ಇಂತಹ ಕೆಲವು ಸಂಭ್ರಮ ಮತ್ತು ಹಲವರ ಪ್ರಯತ್ನಗಳಿಂದಾಗಿ ಇಂದು ನಾನು ನಾನಾಗಿದ್ದೇನೆ. ಇಲ್ಲದಿದ್ದರೆ ಎಲ್ಲಿ ಕಳೆದು ಹೋಗುತ್ತಿದ್ದೆನೋ ಏನೋ?<br />ಕಳೆದ 25 ವರ್ಷಗಳಲ್ಲಿ ಏನೆಲ್ಲಾ ಗಳಿಸಿದೆ, ಏನು ನಷ್ಟವಾಯಿತು ಎನ್ನುವುದಕ್ಕಿಂತ ಎಲ್ಲರೂ ನನ್ನ ಸಂತಸಕ್ಕೆ ಅವರ ಪಾಲಿನಿಂದ ಕೆಲವನ್ನು ನನಗೆ ಕೊಟ್ಟರು. ಆ ಕಾರಣಕ್ಕಾಗಿ ನಾನು ಎಲ್ಲರಿಗೂ ಆಭಾರಿ. ಈ <span class=""> 25 ರ </span>ಸಂಭ್ರಮ ಮುಗಿವ ವೇಳೆಗೆ ಯಾರು ಏನಾಗಿರುತ್ತಾರೋ ಯಾರಿಗೆ ಗೊತ್ತು. ಆ ಸಂದರ್ಭ ಅರ್ಥಾತ್ ಮುಂದಿನ ಜೂ. 24<span class=""> ರ </span>ವೇಳೆಗೆ ನಿಮ್ಮ ಮುಂದೆ ನನ್ನ ಬಗೆಗಿನ ಎಲ್ಲವನ್ನೂ ಬ್ಲಾಗ್ ಅಂಗಣದಲ್ಲಿ ಸುಮ್ಮನೆ ಇಡಬೇಕು ಎನ್ನುವ ಆಶಯವಿದೆ. ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೀನಿ ಎನ್ನುವುದರ ಬಗ್ಗೆ ನನಗೂ ಸಂದೇಹವಿದೆ.<br /> ಕಳೆದು ಹೋದ 24 ವರ್ಷಗಳು ಬದುಕಿನಲ್ಲಿ ಅದರದ್ದೇ ಆದ ಪಾಠ ಕಲಿಸಿತು.ಬಾಲ್ಯ, ಶಾಲೆ, ಕಾಲೇಜು, ಉದ್ಯೋಗ, ಮುಂದೆ.....?<br />ಏನೇ ಇರಲಿ ನನ್ನ ಸುಖ, ದುಃಖ, ನೋವು ನಲಿವು, ಕೋಪ ತಾಪ ಎಲ್ಲವನ್ನೂ ಸಹಿಸಿ, ನನ್ನ ಜತೆಗೇ ಇದ್ದು, ದೂರ ಇದ್ದರೂ ಸದಾ ಹಿತಾಶಯವನ್ನೇ ಬಯಸುವ, ಸಮೀಪವಿದ್ದರೂ ಹಾರೈಕೆಗಳಿಂದಲೇ ಶುಭ ಕೋರುವ, ಜೀವನದ ಅವಿಭಾಜ್ಯ ಅಂಗ ಎಂದೇ ಪರಿಗಣಿಸಲ್ಪಟ್ಟ ಕುಟುಂಬದ ಎಲ್ಲ ಸದಸ್ಯರಿಗೂ 24ರ ಅಂತ್ಯದಲ್ಲಿ 25 ರ ಪಾದಾರ್ಪಣೆ ಸಮಯದಲ್ಲಿ ಒಲವು ತುಂಬಿದ ಥ್ಯಾಂಕ್ಸ್.</div><br /><strong> ನೀವಿರಲು ಜತೆಯಲ್ಲಿ ಬಾಳೆಲ್ಲ ಹಸಿರಾದಂತೆ...</strong><br /><strong>ನಗುತ ನೀವು ಕರೆದರೆ ಮನದಿ ಸಂತೋಷ ಹಾಡಾದಂತೆ...</strong>Chevarhttp://www.blogger.com/profile/12119362877342017192noreply@blogger.com6tag:blogger.com,1999:blog-19828151.post-78864144693395540222009-05-06T17:22:00.004+05:302009-05-06T17:51:34.535+05:30ಗೆಳತಿಯ ಆತ್ಮಸಖಿಗೆ ಶುಭ್ ವಿವಾಹ್!<div align="left"><strong><span style="font-size:130%;color:#000066;">ಮುದ್ದು ಗೆಳತಿಗೆ,</span></strong><br />ನಿನ್ನ ಆತ್ಮ ಸಖಿಗೆ ಪಾಣಿಗ್ರಹಣ ವಿಷಯ ತಿಳಿದು ಸಂತೋಷವಾಯಿತು. ಅದರ ಜತೆಗೆ ನೀನು ಎಂದೋ ಅವಳ ಬಗ್ಗೆ ಹೇಳಿದಾಗ ಕೇಳಿದ್ದ ವಿಷಯಗಳೆಲ್ಲಾ ನೆನಪಿಗೆ ಬಂದು ಮನವ ಕಾಡಿ ಭಾವ ಸಾಂದ್ರವಾಗಿಸಿತು. ಅವಳಿಗೆ ನನ್ನ ಪರಿಚಯವಿಲ್ಲದಿದ್ದರೂ ನೀನು ಹೇಳಿ ಅವಳಿಗೆ ನನ್ನ ಪರಿಚಯವಿದೆ ಎಂದು ತಿಳಿದುಕೊಂಡಿದ್ದೇನೆ. ಅದೇ ಕಾರಣಕ್ಕೆ ಸುಮ್ಮನೆ ಒಂದು ಬಾರಿ ಎಲ್ಲವನ್ನೂ ಮೆಲುಕು ಹಾಕುವ ಯತ್ನವನ್ನು ಮಾಡುತ್ತಿದ್ದೇನೆ.</div><img id="BLOGGER_PHOTO_ID_5332680942187308610" style="DISPLAY: block; MARGIN: 0px auto 10px; WIDTH: 200px; CURSOR: hand; HEIGHT: 134px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjAdU9KZKBumYqxIM9M38aFVy_HFU4YcN0r8ITTfMmONhc-U8JWiMrZ9rZDtRi5hf1VblshI4JOl5jV1UTOz4TxMyjpK9c0zUx5YbnpKlR6won8TDWfRdmElZvToHnh5aCmDbvB/s200/weds.jpg" border="0" /> <p align="justify"> ನಾವು ಆಗಷ್ಟೇ ಕಾಲೇಜು ಸೇರಿದ್ದೆವು. ಯಾರ ಪೂರ್ವಾಪರದ ಬಗ್ಗೆಯೂ ಯಾರಿಗೂ ಅರಿವಿರಲಿಲ್ಲ. ಕಾಲೇಜು ಸೇರಿ ಸುಮಾರು ಮೂರ್ನಾಲ್ಕು ತಿಂಗಳು ಕಳೆದ ನಂತರವೇ ನಾವು ಚಿರಪರಿಚಿತರಾದೆವು. ಅಂದಿನಿಂದ ನೀನು ಎಲ್ಲಾ ಪೂರ್ವಾಪರಗಳನ್ನೂ ಹೇಳುತ್ತಾ ಹೋದೆ.<br /></p><div align="justify"><span class=""></span> </div><div align="justify">ಇವುಗಳ ನಡುವೆ ನನಗೆ ನಿನ್ನಲ್ಲಿ ಇಷ್ಟವಾಗಿ ಕಾಡಿದ್ದು ಒಬ್ಬಳು ಆಸ್ಟ್ರೇಲಿಯಾದಲ್ಲಿರುವ ಹುಡುಗಿ, ಇನ್ನೊಬ್ಬಳು ಈ ಮದುವಣಗಿತ್ತಿ. ವಿಜೇಯ ಬಗ್ಗೆ ಇನ್ನೆಂದಾದರೂ ವಿವರವಾಗಿ <span class="">ಬರೆದೇನು</span>. ಮದುವಣಗಿತ್ತಿಯ ಬಗ್ಗೆ ನೀನು ಸಂಪೂರ್ಣವಾಗಿ ಹೆಳಿದ್ದು ನಾನು ನಿನ್ನ ಮನೆಗೆ ಬಂದಿದ್ದಾಗ. ಅದಕ್ಕಿಂತ ಮೊದಲು ಈ ಹೆಸರಿನ ಹುಡುಗಿ ಇದ್ದಾಳೆ ಎನ್ನುವುದು ತಿಳಿದಿತ್ತೇ ಹೊರತು ಅವಳ ಬಗ್ಗೆ ನೀ ಹೆಚ್ಚು ಬಾಯಿ ಬಿಟ್ಟಿರಲಿಲ್ಲ ಎನ್ನುವುದೇ ಸೂಕ್ತವಾದೀತೇನೋ?</div><div align="justify"><span class=""></span> </div><div align="justify">ಆದರೆ ಅದೊಂದು ದಿನ ನಾನು ನಿನ್ನೂರಿಗೆ ಬಂದಿದ್ದೆ. ನಿನ್ನಲ್ಲಿ ಕೊಟ್ಟ ಮಾತಿಗೆ ಈತ ತಪ್ಪಲಿಲ್ಲ ಎನ್ನುವ ಸಂಭ್ರಮವಿತ್ತು. ನಿನಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತೋರಿಸುವ ಮತ್ತು ಹೇಳುವ ಉನ್ಮಾದವಿತ್ತು. ನನಗೆ ಅದೆಲ್ಲವನ್ನೂ ಕಿವಿಗೆ ತುಂಬಿಕೊಳ್ಳುವ ಕಾತರವಿತ್ತು. ಹಾಗೆ ಅಂದು ಅಪ್ಪ ನಮ್ಮಿಬ್ಬರನ್ನು ನಿನ್ನ ಕಾಲೇಜು ಬಳಿ ಬಿಟ್ಟಾಗ ಮಧ್ಯಾಹ್ನ ಸೂರ್ಯ ನೆತ್ತಿ ಮೇಲೇರುವ ಸಮಯ. </div><div align="justify"><span class=""></span> </div><div align="justify">ಬಾರೋ ನಿನಗೆ ನನ್ನ ಕ್ಲಾಸ್ ತೋರಿಸ್ತೀನಿ ಎಂದು ನೀ ಕಲಿತ ತರಗತಿಯೊಳಗೆ ಕೊಂಡೊಯ್ದೆ. ಅಲ್ಲಿ ಒಂದೆಡೆ ನೀನು, ಇನ್ನೊಂದೆಡೆ ಮದುವಣಗಿತ್ತಿ, ಮತ್ತೊಂದು ಕಡೆ ನಿನ್ನ ಹಾಸ್ಟೆಲ್ಮೇಟ್ ಎಲ್ಲೆಲ್ಲಿ ಕುಳಿತುಕೊಂಡು ಏನೇನು ಕಿತಾಪತಿ ಮಾಡುತ್ತಿದ್ದೀರಿ ಎನ್ನುವುದನ್ನು ವಿವರವಾಗಿ ಹೇಳುತ್ತಾ ಹೋದೆ, ನಾ ಕೇಳುತ್ತಾ ಹೋದೆ. ಕ್ಲಾಸಲ್ಲಿ ಲೆಕ್ಚರರ್ಗೆ ಹೊಡೆಯುತ್ತಿದ್ದ ಲೈನ್, ಹೊಡೆಯುತ್ತಿದ್ದ ಶಿಳ್ಳೆ ಇತ್ಯಾದಿ ನಿಮ್ಮಿಬ್ಬರ ಮಸುಕು ನೆನಪಿನ ತೇರನೆಳೆದು ಮತ್ತೆ ಸಂಭ್ರಮಿಸಿದ್ದೆ.:-)</div><div align="justify"> </div><div align="justify">ಆನಂತರ ನಾವು ಶಾಲೆಯ ಬಳಿ ಹೋಗಿ ಅಲ್ಲಿ ಮಣ್ಣಿನಲ್ಲೇ ಕುಳಿತಿದ್ದು ನೆನಪಿದೆಯಾ? ಅಲ್ಲಿನ ಮರಗಳ ನಡುವಣ ಗುಡ್ಡವನ್ನು ತೋರಿಸಿ ನೋಡು ಇಲ್ಲೇ ನಾವಿಬ್ಬರೂ ಆಟವಾಡುತ್ತಾ ಇದ್ದಿದ್ದು. ನಾವು ಮಾಡದ ತಂಟೆಗಳಿಲ್ಲ ಎಂದು ಹೇಳಿದ್ದೆ. ಹಾಗೇ ಇನ್ನೂ ಏನೇನೋ ವಿಷಯಗಳನ್ನು ಅವಳ ಬಗ್ಗೆ ವಿವರವಾಗಿ ಹೇಳಿದ್ದೆ. ಆನಂತರ ಮನೆಗೆ ವಾಪಸಾಗಬೇಕಾದರೆ ಮನೆಗೆ ಬರುವ ಯಾವುದೋ ಕ್ರಾಸ್ನಲ್ಲಿ ನಿಲ್ಲಿಸಿ,ಇಲ್ಲಿ ನಾವು ಐಸ್ಕ್ರೀಂ ತಿನ್ನುತ್ತಾ ಇದ್ವಿ ಎಂದಿದ್ದೆ. ಆ ಬಾಲ್ಯದ ದಿನಗಳೆಲ್ಲಾ ನಿನ್ನ ಗೆಳತಿಯ ಹೆಸರಲ್ಲಿ ನಿನ್ನನ್ನು ಬಹುವಾಗಿ ಕಾಡುತ್ತೆ. ಅವಳು ನೀನು ಮಾಡುತ್ತಿದ್ದ ಕಿತಾಪತಿ, ಮನೆಗೆ ಬಂದರೆ ಅಮ್ಮನ ಮಧ್ಯಸ್ಥಿಕೆ, ನಿನ್ನ ತಂಟೆ, ಗೆಳತಿಯ ಜತೆಗಿನ ಜಗಳ ಇತ್ಯಾದಿ ಇತ್ಯಾದಿ... ನೀನು ಗೆಳತಿಯ ಬಗ್ಗೆ ಹೇಳಿದ ಎಲ್ಲಾ ಮಾತುಗಳನ್ನು ಬರೆಯಲು ಹೊರಟರೆ ಅದುವೇ ಒಂದು ಕತೆಯಾದೀತೇನೋ?</div><div align="justify"><span class=""></span> </div><div align="justify">ಅದಾದ ನಂತರದ ದಿನಗಳಲ್ಲಿ ನೀನು ಅವಳ ಬಗ್ಗೆ ಹೇಳಿದ್ದು ಆಕೆ ಬೆಳೆದು ಬಂದ ಪರಿಸ್ಥಿತಿ. ನೀವಿಬ್ಬರೂ ಒಬ್ಬರಿಗೊಬ್ಬರು ನೆರವಾಗುವ ರೀತಿ, ಪೇಟೆಯ ಬೀದೀಲಿ ನಡೆದುಕೊಂಡು ಹೊರಟರೆ ಉಂಟಾಗುತ್ತಿದ್ದ ಸಂಚಲನ. ಅವಳ ಮನೆ, ಅವಳ ಕಷ್ಟ, ಅವಳು ಕೆಲಸ, ಬದುಕಿನ ನಡುವಿನ ಅವಳ ಹೋರಾಟ..... ಈ ಎಲ್ಲಾ ಕಾರಣಗಳಿಗಾಗಿ ನಿಮ್ಮಿಬ್ಬರ ಮೇಲಿನ ಅಭಿಮಾನ ಇನ್ನೂ ಜೀವಂತ. ಆ ಗೆಳತಿ ಕಳೆದ ಒಂದೂವರೆ ದಶಕಗಳಿಂದಲೂ ಹೆಚ್ಚು ಕಾಲ ನಿನ್ನ ಬೆನ್ನಿಗೆ ನೆರಳಾಗಿ ನಿಂತಿದ್ದಳು ಎನ್ನುವ ಅಭಿಮಾನ. </div><br /><br /><div align="justify"></div><img id="BLOGGER_PHOTO_ID_5332681311831652866" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 214px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEi_X3VGn_1O618juknTeBZO7XnPZj1B2XNZmsdiD-hdn8un5Mfjp8sg2KKZ2AcRpJapA-ghZeSPmus9M0CJKrN9h8GBmMVgILCh0z4eYFaW6xbADkckDnWt-2M1JSl7O8TNxUJ1/s320/weds1.jpg" border="0" /> <p align="center"><span style="font-size:85%;">(ಚಿತ್ರ </span><span class=""><span style="font-size:85%;">ಕೃಪೆ: ಇಂಟರ್ ನೆಟ್)</span> </span></p><div align="justify">ಈಗ ಅವಳಿಗೆ ಮದುವೆ ಸಂಭ್ರಮ. ಸಪ್ತಪದಿ ತುಳಿದು, ಹಿನ್ನೆಲೆಯಲ್ಲಿ ಮಾಂಗಲ್ಯಂ ತಂತು ನಾನೇನಾ.... ಎಂದು ಹೇಳುತ್ತಿದ್ದರೆ ಅವಳು ಅಲ್ಲಿ ಮಾಂಗಲ್ಯ ಕೊರಳಿಗೇರಿಸಲು ತಲೆ ಬಾಗಿಸಿರುತ್ತಾಳೆ. ಆ ವೇಳೆ ಅವಳ ಮುಖದಲ್ಲಿ ನಾಚಿಕೆಯ ರಂಗೊಡೆದಿರಬೇಕು. ನಿನ್ನ ಪರಮಾಪ್ತೆ, ಸಖಿ, ಅತ್ಮ ಬಂಧು ಎಂಬ ವಿಶೇಷಣಗಳೊಂದಿಗೆ ನಿನ್ನ ಕಣ್ಣ ಮುಂದೆ ಬೆಳೆದ ಹುಡುಗಿ, ಇದುವರೆಗಿನ ಒಂಟೀ ಜೀವನದಿಂದ ಜಂಟಿ ಜೀವನಕ್ಕೆ ಕಾಲಿರಿಸುತ್ತಿದ್ದಾಳೆ. ಹಾಗೆ ಅವಳು ಪ್ರೀತಿಯ ಹುಡುಗನ ಮುಂದೆ ತಲೆಬಾಗಿ ಕೊರಳೊಡ್ಡಿ ನಿಂತಾಗ, ಮಾಂಗಲ್ಯ ಅವಳ ಕೊರಳು ಸೇರಿದಾಗ ಅಲ್ಲಿ ಅಕ್ಷತೆ ಹಾಕಲು ನೀನಿರಬೇಕು. ಅದು ಅವಳ ಸುಂದರ ಭವಿಷ್ಯಕ್ಕೆ ನೀ ಬರೆವ ಮುನ್ನುಡಿ. ಆ ಕ್ಷಣ ಅವಳ ಪಾಲಿಗೆ ಧನ್ಯ ನಿಮಿಷ. ಅವಳ ಸಂತಸಕ್ಕೆ ನಿನ್ನದೊಂದು ಅಭಿಮಾನದ ಅಪ್ಪುಗೆಯಿರಲಿ. ಅದರಲ್ಲಿ ಅವಳು ಕಳೆದು ಹೋಗದಿರಲಿ. ಮತ್ತೇನಿದ್ದರೂ ಅವಳ ಪ್ರೀತಿಯ ಹುಡುಗನಿದ್ದಾನಲ್ಲ. ನಿನ್ನ ಶುಭಹಾರೈಕೆಯ ಅಕ್ಷತೆಯಲ್ಲಿ ನನ್ನದೂ ಒಂದು ಹಾರೈಕೆ ಇರುತ್ತದೆ.<br />ಆ ಹಾರೈಕೆ ಸಾಲುಗಳಿವು- </div><div align="center"><strong><span style="font-size:130%;color:#990000;">ಗೆಳತಿಯ ಸಖಿಯೇ ನಿನಗಿದೋ ಸುಖೀ ದಾಂಪತ್ಯದ ಶುಭಾಶಯ.</span></strong></div><div align="center"><strong><span style="font-size:130%;color:#990000;">ಗೆಳತಿಯ ಆತ್ಮಸಖಿಗೆ ಶುಭ್ವಿವಾಹ್!!!</span></strong></div><br /><div align="right"><strong><span style="color:#000099;"><span style="font-size:130%;">ಇಂತಿ <span class="">ನಿನ್ನ </span><span class="">ಪ್ರೀತಿಯ </span>ಗೆಳತಿಯ ಗೆಳೆಯ.</span></span></strong></div>Chevarhttp://www.blogger.com/profile/12119362877342017192noreply@blogger.com3tag:blogger.com,1999:blog-19828151.post-42670795343762893062009-05-02T02:53:00.001+05:302009-05-02T03:00:23.324+05:30ಮಳೆ ಬಂದು ಹೋದ ಮೇಲೆ ಭಾವಗಳು ಕಾಡಿದೇ...<div align="justify">ಒಂದು ಮಳೆ ಈ ಪರಿ ಕಾಡುತ್ತಾ. ಮಳೆ ಬಂದರೆ ಭಾವನೆಗಳು, ಹಳೆಯ ನೆನಪುಗಳು ಮರುಕಳಿಸುತ್ತಾ? ಕಳೆದ ಸುಂದರ ದಿನಗಳು ನವಿರು ನವಿರಾಗಿ ಬಿಚ್ಚಿಕೊಳ್ಳುತ್ತಾ? ಅದು ಮಳೆಯ ಮಹಿಮೆಯಾ? ಇಲ್ಲ ಮಳೆಯನ್ನು ಒಡಲಾಳಕ್ಕೆ ಸ್ವೀಕರಿಸಿ ಅದುಮಿಕೊಳ್ಳುವ ಧರೆಯ ಮಹಿಮೆಯಾ? ಅಲ್ಲಾ, ಅದಕ್ಕಿಂತಲೂ ಮಿಗಿಲಾದ ಸಂಬಂಧ ಎಲ್ಲಿಂದಲೋ ಬಂದು ನಮ್ಮ ನೆನಪುಗಳನ್ನು ಈ ಪರಿಯಾಗಿ ಕಾಡುತ್ತಾ ಗೊತ್ತಿಲ್ಲ.</div><div align="justify"><br /> ನಿಜಕ್ಕೂ ಈ ಪ್ರಶ್ನೆಗೆ ಉತ್ತರ ನಂಗೆ ಗೊತ್ತಿಲ್ಲ. ಆದರೆ ಹೊರಗೆ ಮಳೆ ಆವರಿಸುತ್ತಿದ್ದರೆ ಇಲ್ಲಿ ಮನದ ಒಳಗಡೆ ನೂರು ಭಾವನೆಗಳ ತಾಳ ಲಯದ ಜತೆ ನರ್ತನವಾಡುತ್ತದೆ. ಎಂದೋ ಕಳೆದ ಮಳೆಗಾಲ ನೆನಪಾಗುತ್ತವೆ. ಅಷ್ಟಕ್ಕೂ ಮಳೆಗೂ ನೆನಪಿಗೂ ಅಂತಹ ಅವಿನಾಭಾವ ಸಂಬಂಧವಿದೆಯಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ಕಳೆದ ಮೂರು ಮಳೆಯ ದಿನಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.</div><div align="justify"><br /><span style="font-size:180%;color:#000099;"><strong>1</strong></span> ಈ ವರ್ಷದ ಮೊದಲ ಮಳೆ ನನ್ನ ಕಾಡಿದ್ದು ಮಾರ್ಚ್ ತಿಂಗಳಲ್ಲಿ. ಅದು ಊರಲ್ಲಿರುವ ಕಂಬಾರು ದೇವಸ್ಥಾನದ ಜಾತ್ರೆಯಲ್ಲಿ. ಸುಮಾರು ೭ರಿಂದ ೮ ವರ್ಷಗಳ ನಂತರ ಊರ ಜಾತ್ರೆ ಸಂಭ್ರಮ ನನ್ನ ಪಾಲಿಗೆ ಒದಗಿ ಬಂದಿತ್ತು. ಅಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ನೃತ್ಯ ಆರಂಭವಾಗಿ ಮೂರನೇ ನೃತ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿದಿತ್ತು ಮಳೆ. ಅಂದು ಮಳೆ ಬರುತ್ತದೆ ಎನ್ನುವ ಯಾವುದೇ ಸೂಚನೆಯಿರಲಿಲ್ಲ. ಆದರೆ ಅಂದು ಸುರಿದ ಮಳೆಯಲ್ಲೂ ಭಾವನೆಗಳ ತಾಕಲಾಟವಿತ್ತು. ಆದರೂ ಮಳೆ ಮುಗಿದು ಹೋದ ಮೇಲೆ ಯಾಕೋ ಮನಸ್ಸು ಸರಿಯಾದ ಸ್ಥಿಮಿತದಲ್ಲಿರಲಿಲ್ಲ. ಅದು ಮಳೆಯನ್ನು ಯಾರ ಜತೆಗೋ ಹಂಚಿಕೊಳ್ಳಬೇಕು ಎಂಬ ಆಶಯವಾ?</div><div align="justify"><br /> ನಮ್ಮೂರು ಕಾಸರಗೋಡಿನ ಮಟ್ಟಿಗೆ ಮಾರ್ಚ್ ತಿಂಗಳಲ್ಲಂತೂ ಮಳೆ ಎಂಬುದು ಕನಸಿನ ಮಾತು. ಅಲ್ಲಿ ಮಳೆ ಕಾಲಿಡಲು ಏಪ್ರಿಲ್ ತಿಂಗಳ ಕೊನೆಯಾದರೂ ಆಗಬೇಕು. ಇಲ್ಲವೆಂದರೆ ಮಳೆ ಬರುವುದು ಸಾಧ್ಯವೇ ಇಲ್ಲ. ಅಂದು ಬಿದ್ದ ಆ ಮಳೆಗೆ ಸಾಕಷ್ಟು ನೆನೆದೆ. ಅದು ಈ ಬಾರಿಯ ಮಳೆಯ ಪ್ರಥಮ ನೆನಪು. </div><div align="justify"><br /><span style="font-size:180%;color:#000099;"><strong>2</strong></span> ಆಮೇಲೆ ಈ ಮಳೆ ಮೊನ್ನೆ ಮಾರ್ಚ್ನಲ್ಲಿ ಯುಗಾದಿ ದಿನ ಮಡಿಕೇರಿ ಪಿಕ್ನಿಕ್ನಲ್ಲಿದ್ದಾಗ ಬಂದ ಮಳೆ. ಮಡಿಕೇರಿಯ ಮಳೆ ನನ್ನ ಪಾಲಿಗೆ ಹೊಸದಲ್ಲ. ಆದರೆ ಮಡಿಕೇರಿ ಮಳೆಗೂ ಅಲ್ಲಿನ ಚಳಿಗೂ ಭಾವನಾಪೂರ್ಣ ನಂಟು. ಅಲ್ಲಿ ಬರುವ ಮಳೆಯ ಹನಿ ಹನಿಯೂ ಅಷ್ಟರ ಮಟ್ಟಿಗೆ ಕಾಡುತ್ತದೆ. ಬಹುಶಃ ಇದು ಕೇವಲ ನನ್ನ ಪಾಲಿಗೆ ಸೀಮಿತವಾಗಿರಲ್ಲ ಎನ್ನುವುದು ನನ್ನ ನಂಬಿಕೆ. ಜೀವನದಲ್ಲಿ ತೀರಾ ಡಿಪ್ರೆಸ್ ಆದಾಗ ನನ್ನ ಪಾಲಿಗೆ ಗೋಚರಿಸುವುದು ಅದೇ ಮಡಿಕೇರಿಯ ಬಿಂಬ. ಇತ್ತೀಚಿನ ದಿನಗಳಲ್ಲಿ ಬುದ್ಧನ ತತ್ವಗಳು ಇಷ್ಟವಾಗುತ್ತಿವೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಳೆ ಬಂದರೆ ಮಾತ್ರ ಭಾವನೆಗಳು ಟಿಸಿಲೊಡೆಯುತ್ತವಾ ಎಂದು ಕೇಳಿದರೆ ನಾ ನೀಡುವ ಉತ್ತರ ಹೌದು ಎನ್ನುವುದು ಮಾತ್ರ. ಎಲ್ಲೋ ಕಳೆದು ಹೋದ ಮಧರ ಬಾಂಧವ್ಯವನ್ನು ಮಳೆ ನಮಗೆ ಮತ್ತೆ ಮರುಕಳಿಸಲು ನೆರವಾಗುತ್ತವೆ. ಅದಕ್ಕೆ ತೀರಾ ಭಾವುಕನಾಗಿ ಏಕಾಂಗಿಯಾಗಿರಬೇಕು ಎನಿಸಿದಾಗ ಇಂತಹ ಸ್ಥಳಗಳು ನನಗೆ ಅತೀವವಾಗಿ ಇಷ್ಟವಾಗುತ್ತದೆ. ಇಲ್ಲಿಗೆ ಮಡಿಕೇರಿ ಕತೆಯನ್ನು ಮುಗಿಸುತ್ತೇನೆ. ಮಡಿಕೇರಿಯ ಭಾವನೆಗಳಿಗೆ ಸ್ಪಂದಿಸುವ ರೀತಿಯನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ. </div><div align="justify"><br /><strong><span style="font-size:180%;color:#000099;">3</span></strong> ಆ ನಂತರ ಕಾಡಿದ್ದು ಮೊನ್ನೆ ಬೆಂಗಳೂರ ಮಳೆ. ಆ ಮಳೆಯ ರಭಸ ಭಾರೀ ಚೆನ್ನಾಗಿತ್ತು. ಆದರೆ ಊರಿನ ಅಥವಾ ಮಡಿಕೇರಿಯ ಮಳೆಯ ರೀತಿಯಲ್ಲಿ ಈ ಬಾರಿ ಭಾವನೆಗಳು ಉಕ್ಕಿ ಬರಲಿಲ್ಲ ಎನ್ನುವುದು ಮಾತ್ರ ನಿಜ. ಆದರೂ ಕೆಲವು ನೆನಪುಗಳು ಕಾಡಿತ್ತು. ಅದು ಯಾಕೆ ಅಂದು ಆ ರೀತಿ ಕಾಡಿತ್ತು ಗೊತ್ತಿಲ್ಲ. ಅದು ಭಾವನೆ ಹಾಗೂ ಭಾವಗಳ ಜುಗಲ್ಬಂದಿ. ಅದರಲ್ಲಿ ಯಾವುದು ಮೊದಲು ಯಾವುದು ಕೊನೆ ಎನ್ನುವುದು ಇಲ್ಲ. </div><div align="justify"><br /> ಹೀಗೆ ಪ್ರತಿ ಮಳೆಯೂ ಬಹುವಾಗಿ ಕಾಡುತ್ತದೆ. ಕೆಲವೊಮ್ಮೆ ಹೆಚ್ಚು, ಇನ್ನು ಕೆಲವೊಮ್ಮೆ ಕಡಿಮೆ. ಕೆಲವು ದಿನದ ಮೋಡದ ವಾತಾವರಣ ನೋಡಿ ಮೂಡ್ ಅಪ್ಸೆಟ್ ಆಗಿ ಬಿಡುತ್ತದೆ. ಆದರೆ ಮನಸ್ಸೆಂಬ ಮರ್ಕಟ ಇದನ್ನೆಲ್ಲಾ ಅರ್ಥೈಸಿಕೊಳ್ಳದೆ ಎಲ್ಲಾ ನೆನಪುಗಳನ್ನೂ ಕೆದಕಿ ಜೀವನವನ್ನು ಮುಂದೆ ಸಾಗಹಾಕುತ್ತದೆ. ಇನ್ನು ಮುಂದಿನ ಮಳೆಗಾಗಿ ಕಾಯಬೇಕು. ಆ ಮಳೆ ಬಿದ್ದು ಧರೆಯ ಸೇರಿ ಕ್ಷಣ ಮಾತ್ರದಲ್ಲಿ ಬರುವ ಮಣ್ಣಿನ ಘಮದಂತೆ ನೆನಪುಗಳು ಪ್ರತಿಬಿಂಬಗಳಾಗಿ ಹೊರಹೊಮ್ಮಬೇಕು. ಹಾಗಾದರೆ ಈ ಮಳೆ ಧನ್ಯ, ಜತೆಗೆ ನಾನೂ ಅದರೊಂದಿಗೆ ನೆನಪು ಹಾಗೂ ಭಾವಗಳು...!!!</div>Chevarhttp://www.blogger.com/profile/12119362877342017192noreply@blogger.com3tag:blogger.com,1999:blog-19828151.post-1248006335483133572009-02-15T15:54:00.002+05:302009-02-15T16:33:39.188+05:30ಪಾಪಿ ಚಿರಾಯು, ಅಲ್ಲ ನನ್ನ ನಿನ್ನ ಪ್ರೀತಿ ಚಿರಾಯು....!<p align="justify">ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವ್ಯಾಲೆಂಟೈನ್ ಚರ್ಚೆ, ಅದು ಪಡೆಯುತ್ತಿರುವ ತಿರುವು, ಅದನ್ನು ಕೆಲವು ವಿಕೃತ ಮನಸುಗಳು ಕಲ್ಪಿಸಿಕೊಂಡ ರೀತಿ, ಅದಕ್ಕೆ ಕೆಲವು ಸೋಕಾಲ್ಡ್ ನ್ಯಾಷನಲ್ ಮಾಧ್ಯಮಗಳು ಕೊಟ್ಟ ಪ್ರಚಾರ, ಇವುಗಳ ನಡುವೆ ಹುಟ್ಟಿದ ಪಿಂಕ್ ಚಡ್ಡಿ, ಅದಕ್ಕೆ ವಿರುದ್ಧವಾಗಿ ಹುಟ್ಟಿದ ಪಿಂಕ್ ಕಾಂಡೋಂ ಎಲ್ಲವೂ ಪ್ರೀತಿಯ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ. ಕೆಲವು ಪತ್ರಿಕೆಗಳಂತೂ ತಾವೇ ವ್ಯಾಲೆಂಟೈನ್ ರಕ್ಷಕರೇನೋ ಎಂಬಂತೆ ವರ್ತಿಸುತ್ತಿವೆ.<br /> ಆದರೆ ಇವು ಇಲ್ಲದೆ ಪ್ರೀತಿಯೇ ಇಲ್ಲವೇ? ಇದೆ <strong>‘ನಾ ಕನಸು ಕಂಡ ಅವಳಂತೆ’</strong>. ಇಂದಿಗೂ ಪ್ರೀತಿ ನಿರಂತರವಾಗಿ ಹರಿಯುತ್ತದೆ. ಅದು ಅಕ್ಷಯ ಪಾತ್ರೆಯಿದ್ದಂತೆ. ಅಂದು ದ್ರೌಪದಿ ವಸ್ತ್ರಾಪಹರಣವಾಗುತ್ತಿದ್ದಾಗ ಸಂದರ್ಭ ಎಳೆದಷ್ಟೂ ಬೆಳೆದ ಸೀರೆಯಂತೆ. ಪ್ರೀತಿ ಯಾವತ್ತೂ ಹಾಗೇ ಇರಬೇಕು. ಅದನ್ನು ತಡೆಯಲೂ ಹೋಗಬಾರದು. ತಡೆದರೆ ತೊಡಗುವ ತೊಡಕು ಮತ್ತೆ ಮುಂದುವರಿಯಲು ಬಿಡುವುದಿಲ್ಲ.<br /> ಆದರೆ ಪ್ರೀತಿ ಇಂದು ಎತ್ತ ಸಾಗುತ್ತಿದೆ. ಅದು ಕೇವಲ ದೈಹಿಕ ಆಕರ್ಷಣೆಗೆ ಮಾತ್ರ ಎನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ. ಯಾವಾಗ ಆ ಒಂದು ಭಾವ ಪ್ರೀತಿಯಲ್ಲಿ ಹುಟ್ಟಿ ಕಾಮ ಎಂಬಲ್ಲಿಗೆ ತಿರುಗಿ ಬಿಡುತ್ತದೋ ಅಲ್ಲಿಗೆ ಪ್ರೀತಿಯ ಅವಸಾನದ ಮೊದಲ ಮೆಟ್ಟಿಲು ತೆರೆದಂತೆ.<br />ಹೀಗೆ ಪ್ರೀತಿಯ ಬಗ್ಗೆ ಹೇಳುತ್ತಾ ನಾವು ಕಾಲೇಜು ದಿನಗಳಲ್ಲಿ ನಮ್ಮ ಕೈಗೆ ಮೊಬೈಲ್ ಲಭಿಸಿದಾಗ ಪಡೆದ ಸಂಭ್ರಮದ ನೆನಪಾಗುತ್ತದೆ. ಅಂದು ಇನ್ಬಾಕ್ಸ್ ತುಂಬುವ ಎಲ್ಲ ಎಸ್ಎಂಎಸ್ಗಳೂ ಪ್ರೀತಿಗೆ ಸಂಬಂಧಪಟ್ಟವುಗಳೇ. ಕಳುಹಿಸುವವರೋ ನಮ್ಮ ಪ್ರೀತಿ ಪಾತ್ರರು. ಅದರಲ್ಲಿ ಕೆಲವು ನವಿರಾದ ಕಂಪನವಿದೆ. ನೀನಿರದೆ ನಾನಿಲ್ಲ ಎಂಬ ಭಾವವಿದೆ. ಇಲ್ಲಿ ಕೆಲವು ಎಲ್ಲಾ ಮಿತಿಗಳನ್ನು ದಾಟಿ ಹೋದ ಎಸ್ಎಂಎಸ್ಗಳು. ಇನ್ನು ಕೆಲವು ಹುಚ್ಚುತನದ ಪರಮಾವಧಿ ಎಂಬಂತವುಗಳು. ಅವುಗಳಲ್ಲಿ ಆರಾಧನೆ, ಭಯ, ಪ್ರೀತಿ ಎಲ್ಲವೂ ಇರುತ್ತದೆ. ಆದರೆ ಅವ್ಯಾವುದೂ ಎಂದಿಗೂ ಭಯಾನಕ ಎನಿಸುವಂತಹ ವಾತಾವರಣ ಸೃಷ್ಟಿಸಲಿಲ್ಲ. ಬದಲಿಗೆ ಅವುಗಳೆಲ್ಲಾ ಒಂದು ಸುಂದರ ಸಂಬಂಧವನ್ನು ಸೃಷ್ಟಿಸಲು ಸಹಾಯ ಮಾಡಿದವು. ಹಾಗೆ ಮನಸ್ಸಿಗೆ ಇಷ್ಟವಾದವುಗಳು ಇನ್ಬಾಕ್ಸ್ನಿಂದ ಡಿಲೀಟ್ ಆಗದೆ ಹಾಗೇ ಉಳಿದುಕೊಂಡವು. ನನ್ನ ಹೃದಯವ ಕಾಡುವ ನಿನ್ನ ಮನಸಿನ ಹಾಗೆ<br /> ಅಷ್ಟಕ್ಕೂ ಪ್ರೀತಿ ಅಂದರೆ ಏನು? ಅದು ಹೃದಯಗಳ ಭಾಷೆ. ಕೆಲವರು ಈ ವಾದ ಮಂಡಿಸುವಾಗ ಹೃದಯವಿದೆಯಾ ನಿನಗೆ ಎಂದು ಕೇಳುವವರೂ ಇರುತ್ತಾರೆ. ಅದು ಮನಸ್ಸಿನಲ್ಲಿ ಇದ್ದುದನ್ನು ಹೇಳಿ ನಿರಾಳವಾದ ಮಗುವಿನ ಭಾಷೆ. ಅದಕ್ಕೆ ಎಲ್ಲವುಗಳ ಕುತೂಹಲವಿರುತ್ತೆ. ಪ್ರೀತಿಯಲ್ಲೂ ಅವನಿಗೆ/ ಅವಳಿಗೆ ಕುತೂಹಲ ಇರುತ್ತವೆ. ಅದು ಬಾ ಎಂದಾಗ ಬರುವುದೂ ಇಲ್ಲ, ಹೋಗು ಎಂದಾಗ ಹೋಗುವುದೂ ಇಲ್ಲ. ಅದು ಹರಿವ ಜಲಲ ಜಲಲ ಧಾರೆ. ಅವನು ಹತ್ತಿರ ಇರುವಾಗ ಇದ್ದಷ್ಟು ಭಾವ ದೂರ ಇರುವಾಗಲೂ ಇರಬೇಕು. ಅದು ಬಿಟ್ಟು ನೀ ಪ್ರತಿಕ್ಷಣವೂ ನನ್ನ ಜತೆ ಇರಬೇಕು ಎಂಬ ಹಂಗ್ಯಾಕೆ?<br />ಪ್ರೀತಿಗೆ ಯಾರು ಎಷ್ಟು ದೂರವಿದ್ದರೇನು? ಎಷ್ಟು ಮೌನವಾದರೇನು? ಹಳೆಯ ಭರವಸೆಗಳು ಹಾಗೂ ಅವುಗಳನ್ನು ಉಳಿಸಿಕೊಂಡು ಹೋಗುವ ರೀತಿ ಗೊತ್ತಿದ್ದರೆ ಮುಗಿಯಿತು. ಮತ್ತೆ ಪ್ರೀತಿಸುವವರನ್ನು ಯಾರು ಏನೂ ಮಾಡಲೂ ಸಾಧ್ಯವಿಲ್ಲ. ಅದಕ್ಕೆ ವ್ಯಾಲೆಂಟೈನ್ ಎಂಬ ದಿನವೊಂದರ ಅಗತ್ಯವೂ ಇಲ್ಲ ಎಂದು ಹೇಳುತ್ತಾ ಈ ಪತ್ರ ನಿನಗೆ.<br /><br /><span style="color:#000000;"><br /><strong><em>ಪ್ರೀತಿಯ ಹುಡುಗಿಗೆ,</em></strong></span><br />ಇನ್ನೇನು ಕಾಲೇಜು ಮುಗಿಯಲು ಸರಿಸುಮಾರು ೧೦೦ ದಿನ ಬಾಕಿ. ಕಾಲೇಜಿನಲ್ಲಿ ಓಡಾಡುತ್ತಿದ್ದ ಜಿಂಕೆ ಮರಿಯಂತಹ ನಿನ್ನನ್ನು ಯಾಕೆ ಪ್ರೀತಿಸಲು ಆರಂಭಿಸಿದೆ ಎನ್ನುವುದು ಇನ್ನೂ ನಿಗೂಢ ಹಾಗೂ ಅಷ್ಟೇ ವಾಸ್ತವ. ಆದರೆ ಗೆಳತೀ ಒಂದಂತೂ ಸತ್ಯ ನಿನ್ನ ಪ್ರೀತಿಯಿಂದ ನಾ ಬದಲಾಗಿದ್ದೇನೆ.<br />ಮೊದಲು ಕೇವಲ ಗೆಳತಿಯಾಗಿದ್ದ ನೀನು ಈಗ ನನ್ನ ಪಾಲಿಗೆ, <strong><span style="color:#ff0000;">ದೋಸ್ತ್ ದೋಸ್ತ್ ನಾ ರಹಾ!</span></strong><br />ಹೌದಮ್ಮಾ, ನಾನು ಹೇಳ್ತಿರೋದು ನಿಜ. ಮೊದಲಾದರೆ ನೀನು ಕೇವಲ ದೋಸ್ತ್ ಮಾತ್ರ ಆಗಿದ್ದೆ. ಆದರೆ ಅದ್ಯಾವುದೋ ತಿರುವಿನಲಿ ಇಬ್ಬರೂ ನಿಂತು ಒಬ್ಬರನೊಬ್ಬರು ಅರಿಯಲು ಆರಂಭಿಸಿದಾಗ ದೋಸ್ತಿಯೇ ಪ್ರೀತಿಯೆಂಬ ಮಾಯೆಗೆ ಬದಲಾಯಿತು. ಅಲ್ಲಿಗೆ ನೀನು ದೋಸ್ತ್ ದೋಸ್ತ್ ನಾ ರಹಾ!<br />ಅಷ್ಟಕ್ಕೂ ನಮ್ಮನ್ನು ಇಷ್ಟು ಆಪ್ತವಾಗಿಸಿದ ವಿಷಯಗಳ ಬಗ್ಗೆ ಯೋಚಿಸಿದರೆ ನಾವಿಬ್ಬರೂ ಒಂದಾಗುವುದು ಕೇವಲ ಸಾಹಿತ್ಯದಲ್ಲಿ ಮಾತ್ರ. ನಿನಗೆ ಶೇಕ್ಸ್ ಪಿಯರ್ ಇಷ್ಟವಾಗುತ್ತಾನೆ. ನನಗೆ ಪೌಲೋ ಕೊಹೆಲೋ ಇಷ್ಟವಾಗುತ್ತಾನೆ. ಉಳಿದಂತೆ ನಾವಿಬ್ಬರೂ ವಿರುದ್ಧ ಧ್ರುವಗಳು. ಎಲ್ಲಿಯೂ ಯಾವುದೇ ವಿಷಯದಲ್ಲೂ ನಾವು ಒಂದಾಗುವುದೇ ಇಲ್ಲ. ಆದರೆ ಪರಸ್ಪರ ಗೌರವ, ಹದ ಮೀರದ ಪ್ರೀತಿ, ಇದೆಲ್ಲಕ್ಕೂ ಮಿಗಿಲಾಗಿ ಎರಡೂ ಮನೆಯವರ ಶುಭಾಶೀರ್ವಾದ. ನಮ್ಮ ಪ್ರೀತಿ ಹಸನಾಗಲು ಇದಕ್ಕಿಂತ ಹೆಚ್ಚಿನದು ಇನ್ಯಾವುದು ಬೇಕು ಹೇಳು.<br />ಯಾವುದೇ ವಿಷಯಗಳು ಬಂದರೂ ಅದನ್ನು ಮಾತಿಗೆ ಮಾತು ಬೆಳೆಸಿ ಹಟಕ್ಕೆ ಬಿದ್ದು ಚರ್ಚಿಸುತ್ತೇವೆ. ಅದೆಷ್ಟು ಫೋನ್ ಕಾಲ್, ಅದೆಷ್ಟು ಎಸ್ಎಂಎಸ್!<br />ಗೆಳತೀ ಮುಂದಿನ ಶನಿವಾರ ವ್ಯಾಲೆಂಟೈನ್ಸ್ ಡೇ. ಕಳೆದ ವ್ಯಾಲೆಂಟೈನ್ ಡೇಗೆ ನಾವು ನಿನ್ನೂರ ಬೀಚ್ನಲ್ಲಿದ್ದೆವು. ನಮಗೆ ಎಲ್ಲಾ ದಿನವೂ ವಿಶೇಷವೇ. ಆದರೆ ಪ್ರೀತಿಯನ್ನು ಕೇವಲ ಆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಿಸಿದ್ದಿದ್ದರೆ ನಮ್ಮ ಪ್ರೀತಿ ಹೀಗಿರುತ್ತಿತ್ತೇ ಗೆಳತೀ. ನಾವು ಪ್ರೀತಿಗೆ ಮೂಗುದಾರ ಹಾಕಲಿಲ್ಲ. ಅದು ಅದರ ಪಾಡಿಗೆ ಇರುತ್ತಿತ್ತು. ಅದಕ್ಕೇ ಈ ಬಾರಿ ವ್ಯಾಲೆಂಟೈನ್ ಡೇಗೆ ನಮ್ಮದು ದಟ್ಟ ಕಾನನದ ನಡುವಣ ಪ್ರೀತಿ. ಅದಕ್ಕೆ ನಮ್ಮಿಬ್ಬರ ಮನೆಯವರದೇ ಆತಿಥ್ಯ! ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳು.<br />ಅವರೂ ಹಾಗೇನೇ,<br /><strong><em><span style="color:#3333ff;">ಬಹುತ್ ಪ್ಯಾರ್ ಕರ್ತೇ ಹೇ ತುಮ್ಕೋ ಸನಮ್<br />ಕಸಮ್ ಚಾಹೀ ಲೇಲೋ...</span></em></strong><br />ಇಂದಿಗೂ ನಿನ್ನ ನೋಡುವಾಗಿನ ಸಡಗರ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ನಿನ್ನ ಜತೆ ಮಾತಿಗೆ ಕುಳಿತರೆ ಮಾತು ಹೊರಡುವುದಿಲ್ಲ. ನೀನು ಮಾತನಾಡುತ್ತಾ ಹೋಗುವುದಕ್ಕೆಲ್ಲಾ ನಾನು ಕಿವಿಯಾಗುತ್ತೇನೆ. ಆದರೂ ನಿನ್ನಲ್ಲಿ ಮುನಿಸಿಲ್ಲ. ಅದಕ್ಕೆ ಶನಿವಾರ ಬೆಳಗ್ಗೆ ಸೂರ್ಯೋದಯವಾಗುವಾವ ಹೊತ್ತಿಗೆ ದಟ್ಟ ಕಾನನದ ನಡುವೆ ಮರಗಳೆಡೆಯಿಂದ ಹೊರಸೂಸುವ ಹೊಂಗಿರಣಗಳ ಸಾಕ್ಷಿಯಾಗಿ ನಾವಿಬ್ಬರೂ ಎದುರು ಬದುರಾಗಿ ಕುಳಿತಿರುತ್ತೀವಿ. ಹಿನ್ನೆಲೆಯಲ್ಲಿ ಹಕ್ಕಿಗಳ ಕಲರವ ಇರುತ್ತೆ. ಎಲ್ಲೋ ದೂರದಲ್ಲಿ ನೀರು ಹರಿಯುವ ನಿನಾದವ ಕೇಳುತ್ತಾ ನೀ ನನ್ನ ತೋಳಿನಲ್ಲಿ ಬಂಧಿಯಾಗಿರುತ್ತೀ. ಆ ಘಳಿಗೆಗೆ ಕಾಯುತ್ತಿದ್ದಂತೆ ಆಕಾಶದಿಂದ ನಾಲ್ಕು ಹನಿ. ಅದು ಮಳೆಯೋ, ಮಂಜಿನ ಹನಿಯೋ ಅದರ ಪರಿವೆ ನಮಗೆ ಬೇಡ. ಹಾಗೆ ನಿನ್ನ ತೋಳಿಗಾನಿಸಿಕೊಂಡು ನಿಂತ ವೇಳೆಯೇ ನನ್ನ ಕೈಬೆರಳುಗಳು ನಿನ್ನ ಕೇಶರಾಶಿಯ ನಡುವೆ ಹರಿದಾಡುತ್ತಿರುತ್ತವೆ. ನಿನ್ನ ದೇಹದಲ್ಲಿ ಅದೇನೋ ಪುಳಕ. ಆದರೆ ಕಣ್ಣಲ್ಲಿ ದಿಟ್ಟ ಆತಂಕ. ಆದರೆ ನನಗೆ ನಿನ್ನ ಅರ್ಥೈಸಿಕೊಂಡು ನಿನ್ನ ತಬ್ಬಿ ಮುದ್ದು ಮಾಡುವಾಸೆ. ಅದು ನಮ್ಮ ಪಾಲಿನ ರಸ ಘಳಿಗೆ. ಇಷ್ಟು ಕಾಲ ಕಂಡ ಕನಸು ನನಸಾಗಿಸಲು ದೇವರೇ ದಯ ಮಾಡಿಸಿದ ದಿನವಿದು. ಅಂತಹ ಒಂದು ಮುಂಜಾವಿದು. ಈ ಶುಭಘಳಿಗೆಯ ನಿರೀಕ್ಷೆಯಲ್ಲಿ ನಾವು ಅದೆಷ್ಟು ವರ್ಷ ಕಾದೆವೋ ಅಲ್ಲವೇನೇ?</p><p align="right"><br /><span style="color:#ff0000;"><strong>- ‘ನಿನ್ನ ಮಾತ್ರ’ ಪ್ರೀತಿಸುವ ಹುಡುಗ!!!</strong></span> </p><span class=""></span><p align="justify">ಈ ಪ್ರೇಮಪತ್ರ ಕಡೆಯ ಅಕ್ಷರದ ತನಕವೂ ಮತ್ತೆ ಮತ್ತೆ ನೀ ಓದಿರುತ್ತೀಯಾ. ಮನದಲ್ಲಿ ಸಾವಿರ ಕನಸು ಕಟ್ಟಿಕೊಂಡವನ ಬಗ್ಗೆ ಪ್ರೀತಿ ತುಂಬಿದ ತಿರಸ್ಕಾರ ಇರುತ್ತದೆ. ಇಷ್ಟೆಲ್ಲಾ ಆದರೂ ನಿನ್ನ ಮನಸ್ಸು ಕೇಳುತ್ತೆ ಪ್ರೀತಿ ಅಂದ್ರೆ ಇಷ್ಟೂ ಪ್ರೀತ್ಸೋದಾ? ಹಾಗಾಗುತ್ತಿದ್ದಂತೆ ಹಿಂದೆ ನಾವು ಆಡಿತ ಮಾತುಗಳು ತುಂಬು ಪ್ರೀತಿಯಿಂದ ಮನದ ಮುಂದೆ ಬಿಚ್ಚಿಕೊಳ್ಳುತ್ತೆ. ಮತ್ತೆ ನೆನಪುಗಳ ನೇವರಿಸುತ್ತಾ ಕಣ್ಣ ತುಂಬಾ ಕಣ್ಣೀರಧಾರೆ. ಆದರೆ ಅದು ನಿನ್ನ ಕಣ್ಣಿಂದ ಹೊರಡುವುದಿಲ್ಲ ನಿನ್ನ ಹಟದಂತೆ. ಅದು ನನಗೆ ಅರ್ಥವಾಗುತ್ತದೆ. ಮರುಕ್ಷಣ ಕಣ್ಣೀರಿಲ್ಲದ ಉಸಿರುಗಟ್ಟಿಸುವಿಕೆ, ಜತೆಗೆ ಬಿಕ್ಕಳಿಕೆ. ಮುಂದಿನ ಪ್ರಶ್ನೆಗಳಿಗೆಲ್ಲಾ ನಿನ್ನ ಮೌನವೇ ಆಭರಣ. ಅದಕ್ಕೇನಿದ್ದರೂ ರಾತ್ರಿಯೇ ಸಮಯ. ರಾತ್ರಿ ಸೂರ್ಯ ಹುಟ್ಟುವ ವಿರುದ್ಧ ದಿಕ್ಕಿಗೆ ತಲೆದಿಂಬಿಗೊರಗಿ ತಲೆಯಾನಿಸಿದರೆ ಅಲ್ಲಿ ಕಣ್ಣೀರಧಾರೆ. ಇಷ್ಟೆಲ್ಲಾ ನಿನಗಾದರೆ ಅಲ್ಲಿಗೆ <span style="font-size:130%;color:#ff0000;"><strong>ಪಾಪಿ ಚಿರಾಯು, <span style="color:#000000;">sorry</span> ನನ್ನ ನಿನ್ನ ಪ್ರೀತಿ ಚಿರಾಯು!!!</strong></span></p><p align="justify"> </p>Chevarhttp://www.blogger.com/profile/12119362877342017192noreply@blogger.com10tag:blogger.com,1999:blog-19828151.post-54802246511809911852009-02-04T15:52:00.006+05:302009-02-04T18:00:08.609+05:30ವೇಷದಲ್ಲೇ ಬದುಕಿನ ಪಾತ್ರ ಮುಗಿಸಿದ ಶಂಭು ಹೆಗಡೆ(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ೪-೦೨-೨೦೦೯ರಂದು ಪ್ರಕಟವಾದ ಬರಹಗಳು. ಯಕ್ಷಗಾನದ ಮೇಲಿನ ಪ್ರೀತಿಯಿಂದ ಇದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.)<br /><a href="https://blogger.googleusercontent.com/img/b/R29vZ2xl/AVvXsEjRpxr9K2kxiItQQvsVKMMWLz_pVpjgCmqRy3TWMgFBOcQj2HTXQkaKQ4QRV_Wf-J77TEnwVB9pWee4klHf9z1ZKYVavaI0g13_ogJ5kyM2Bl0YJJG8sBv3cgtPrQ4l4bx0kk5c/s1600-h/kere.jpg"><img id="BLOGGER_PHOTO_ID_5298904910511494130" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjRpxr9K2kxiItQQvsVKMMWLz_pVpjgCmqRy3TWMgFBOcQj2HTXQkaKQ4QRV_Wf-J77TEnwVB9pWee4klHf9z1ZKYVavaI0g13_ogJ5kyM2Bl0YJJG8sBv3cgtPrQ4l4bx0kk5c/s320/kere.jpg" border="0" /></a><br /><br /><div><strong><strong>- ಕುಣಿಯುತ್ತಲೇ ಕುಸಿದ ರಂಗದಿಗ್ಗಜ<br />- ಮೊದಲು ಯಕ್ಷ ಹೆಜ್ಜೆಯಿಟ್ಟ ಇಡಗುಂಜಿಯಲ್ಲೇ ಸಾವು </strong></strong><br /><br /><strong>ಯ</strong>ಕ್ಷರಂಗದ ಅಭಿಜಾತ ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಶಂಭು ಹೆಗಡೆ ಕೆರೆಮನೆ (೭೧) ಮಂಗಳವಾರ ನಸುಕಿನಲ್ಲಿ ಇಡಗುಂಜಿಯಲ್ಲಿನ ರಂಗಸ್ಥಳದಲ್ಲೇ ಹೃದಯಾಘಾತದಿಂದ ವೀರಮರಣ ಹೊಂದಿದರು.<br />ತಮ್ಮ ಆರಾಧ್ಯ ದೈವ ವಿನಾಯಕನ ಸನ್ನಿಧಿಯ ಎದುರು ರಥಸಪ್ತಮಿಯ ದಿನ ಇಷ್ಟವಾದ ರಾಮನ ಪಾತ್ರ ನಿರ್ವಹಿಸಿ ಸಾವಿರಾರು ಜನರನ್ನು ರಂಜಿಸುತ್ತಲೇ ಬಣ್ಣ ಬಳಿದುಕೊಂಡು ಗೆಜ್ಜೆ ಕಟ್ಟಿಕೊಂಡು ಕಣ್ಮುಚ್ಚಿದರು. ಅಕ್ಷರಶಃ ಕೊನೆಯುಸಿರಿರುವರೆಗೆ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದರು. ಅವರಿಗೆ ಪತ್ನಿ ಗೌರಿ, ಪುತ್ರ ಶಿವಾನಂದ, ಪುತ್ರಿ ಶಾರದಾ, ಸೊಸೆ ರಾಜೇಶ್ವರಿ, ಅಪಾರ ಅಭಿಮಾನಿಗಳಿದ್ದಾರೆ.<br />ಮಂಗಳವಾರ ನಸುಕಿನ ವೇಳೆ ತಮಗೆ ಬಹು ಆಪ್ತವಾದ ‘ಸೀತಾ ವಿಯೋಗ’ ಪ್ರಸಂಗದಲ್ಲಿ ರಾಮನ ಪಾತ್ರದ ವೇಷ ತೊಟ್ಟು ಶಂಭು ಹೆಗಡೆ ಅತ್ಯುತ್ಸಾಹದಿಂದ ನರ್ತನ, ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರು. ಪ್ರಸಂಗದ ಅಂತಿಮ ಹಂತದಲ್ಲಿ ನೆಬ್ಬೂರು ನಾರಾಯಣ ಭಾಗವತರು ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ’ ಎಂದು ಹಾಡು ಹೇಳುತ್ತಿದ್ದಂತೆ ಶಂಭು ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೂ ಹಾಡು ಮುಗಿದ ಮೇಲೆ ‘ಏಳಿ ಹೋಗೋಣ ಏಳಿ ಹೋಗೋಣ’ಎಂದು ಹೇಳಿದ್ದಾರೆ. ನೆಬ್ಬೂರು ಭಾಗವತರತ್ತ ತಿರುಗಿ ‘ನನ್ನ ಹತ್ರ ಇನ್ನು ಆಗ್ತಿಲ್ಲೆ, ನೀವು ಮುಗಿಸಿ’ ಎಂದವರೇ ಚೌಕಿಯತ್ತ ಹೆಜ್ಜೆ ಹಾಕಿದವರು ಕಿರೀಟ ತೆಗೆದಿಟ್ಟು ಎದೆ ಹಿಡಿದು ಮಲಗಿದರು. ಸ್ವಲ್ಪ ವಾಂತಿಯನ್ನೂ ಮಾಡಿದರು. ಅಷ್ಟರಲ್ಲಿ ಮಗ ಶಿವಾನಂದ ಹೆಗಡೆ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಪರಂಧಾಮರಾಗಿದ್ದರು. ಬಣ್ಣ ಹಚ್ಚಿಕೊಂಡೆ ಬಣ್ಣದ ಬದುಕಿಗೆ ವಿದಾಯ ಹೇಳಿದರು.<br />ಇಲ್ಲಿನ ಆರಾಧ್ಯ ದೈವ ಶ್ರೀ ಇಡಗುಂಜಿ ಮಹಾಗಣಪತಿ ಹೆಸರಿನಲ್ಲಿ ಸ್ಥಾಪಿಸಿದ್ದ ಯಕ್ಷಗಾನ ಮೇಳದ ಹರಕೆಯಾಟವನ್ನು ಪ್ರತಿ ವರ್ಷ ನಡೆಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದು, ಫೆ.೨ರಂದು ಇಡಗುಂಜಿಯಲ್ಲಿ ಜಾತ್ರೆ ಪ್ರಯುಕ್ತ ಸಂಜೆ ರಥೋತ್ಸವ ಕಾರ್ಯಕ್ರಮಗಳು ಮುಗಿದ ನಂತರ ರಾತ್ರಿ ೧೧ಗಂಟೆಗೆ ಜಿ.ಆರ್. ಪಾಂಡೇಶ್ವರರ ಕೃತಿ ‘ಮಾರಾವತಾರ’ಪ್ರಸಂಗವನ್ನು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಬಳಿಕ ‘ಸೀತಾ ವಿಯೋಗ’ ಆರಂಭವಾಯಿತು.<br />ಕೇವಲ ೩-೪ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯಕ್ಷಗಾನದ ವೈಭವವನ್ನು ವಿಶ್ವಾದ್ಯಂತ ಅನಾವರಣಗೊಳಿಸಿದರು. ಯಕ್ಷಗಾನದ ಸಂಪ್ರದಾಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಅರ್ಧ ಚಂದ್ರಾಕೃತಿಯ ರಂಗಸಜ್ಜಿಕೆ. ಕರುಣಾರಸಕ್ಕೆ ಸೂಕ್ತ ಅಭಿನಯ, ಮೇಳದ ಸಂಘಟನೆ, ಅಪ್ರತಿಮ ಮಾತುಗಾರಿಕೆ, ಚಿಂತನೆಗಳಿಂದ ಅಪರೂಪದ ಅಪೂರ್ವ ಕಲಾವಿದರಾಗಿದ್ದ ಶಂಭು ಹೆಗಡೆ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿದ ಸ್ಥಳದಲ್ಲೇ ಬದುಕಿನ ಕೊನೆಯ ಹೆಜ್ಜೆ ಹಾಕಿದರು.<br />- ಕಲಾಲೋಕಕ್ಕೆ ಮಾದರಿ: ತಂದೆ ಶಿವರಾಮ ಹೆಗಡೆ ಕೆರೆಮನೆಯವರಿಂದ ಬಳುವಳಿಯಾಗಿ ಬಂದ ಯಕ್ಷಗಾನ ಕಲಾಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡರು. ಶ್ರೀಮಯ ಯಕ್ಷಗಾನ ಕಲಾ ತರಬೇತಿ ಕೇಂದ್ರದ ಸಾರಥ್ಯ ವಹಿಸಿ, ತಂದೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಗಮನ ಸೆಳೆಯುವ ರಂಗಮಂದಿರ ನಿರ್ಮಿಸಿ, ರಾಜ್ಯ ಯಕ್ಷಗಾನ ಜಾನಪದ ಅಕಾಡಮಿಯ ಅಧ್ಯಕ್ಷರಾಗಿ ತೆರೆಮರೆಯಲ್ಲಿರುವ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಅವರನ್ನು ಬೆಳಕಿಗೆ ತಂದು ಪ್ರೆತ್ಸಾಹಿಸಿದರು. ಶಿವರಾಮ ಹೆಗಡೆಯವರ ಹೆಸರಿನಲ್ಲಿ ನಾಡಿನ ಕಲಾವಿದರನ್ನು ಕರೆತಂದು ಸನ್ಮಾನಿಸಿ ಕಲಾಲೋಕಕ್ಕೆ ಮಾದರಿಯಾಗಿ ನಿಂತವರು.<br />ಆರಂಭದಲ್ಲಿ ನಾಟಕ ಪಾತ್ರಗಳನ್ನೂ ನಿರ್ವಹಿಸಿದ್ದ ಅವರು ‘ಪರ್ವ’ ಚಿತ್ರದಲ್ಲಿ ನಟಿಸಿದ ಪೋಷಕ ಪಾತ್ರಕ್ಕೆ ಪ್ರಶಸ್ತಿಯನ್ನೂ ಪಡೆದಿದ್ದರು. ಶಿವರಾಮ ಹೆಗಡೆಯವರ ಹಿರಿಯ ಮಗನಾಗಿ ೧೯೩೮ರಲ್ಲಿ ಜನಿಸಿದ ಶಂಭು ಹೆಗಡೆ ವಿವಿಧ ವೃತ್ತಿ ಮೇಳಗಳಲ್ಲಿ ತೊಡಗಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರಿಗೆ ಸಂದ ಸಂಘ- ಸಂಸ್ಥೆಗಳ ಅಸಂಖ್ಯ ಸನ್ಮಾನ ಗೌರವಗಳು ವಿರಳಶ್ರೇಣಿಯ ಪ್ರತಿಭೆಗೆ ಸಿಕ್ಕ ಪ್ರತೀಕವಾಗಿದೆ. ಅವರ ನಿಧನದಿಂದ ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯ ಪ್ರಖರ ಬೆಳಕೊಂದು ಆರಿದಂತಾಗಿದೆ.<br />ಅಷ್ಟೇ ಅಲ್ಲ, ಶಂಭು ಹೆಗಡೆ ನಿಧನದಿಂದ ಯಕ್ಷಲೋಕದ ಹರಿಶ್ಚಂದ್ರ, ನಳ, ಕರ್ಣ, ರಾಮನಿರ್ಯಾಣದ ರಾಮ, ಸತಿ ಸುಶೀಲೆಯ ದುರ್ಜಯ, ಕೃಷ್ಣ ಮೊದಲಾದ ಪಾತ್ರಗಳೂ ಜೀವ ಕಳೆದುಕೊಂಡಿವೆ.<br /><strong>ಯಕ್ಷಲೋಕದಿಂದ ನಕ್ಷತ್ರಲೋಕಕ್ಕೆ:</strong> ಕೆರೆಮನೆ ಶಂಭು ಹೆಗಡೆಯವರ ಪಾರ್ಥಿವ ಶರೀರ ಮಂಗಳವಾರ ಸಂಜೆ ೫ ಗಂಟೆಗೆ ಅವರ ಕರ್ಮಭೂಮಿ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದ ಆವರಣದಲ್ಲಿ ಸಿದ್ಧಪಡಿಸಲಾಗಿದ್ದ ಚಿತೆಯಲ್ಲಿ ಪಂಚಭೂತಗಳಲ್ಲಿ ಲೀನವಾಯಿತು.<br />ಶಂಭು ಹೆಗಡೆಯವರ ಪುತ್ರ ಶಿವಾನಂದ ಹೆಗಡೆ ತಮ್ಮ ತೀರ್ಥರೂಪರ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿಪೂರ್ವಕ ಅಗ್ನಿಸ್ಪರ್ಶ ಮಾಡಿದರು.<br />ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್, ಬಳ್ಕೂರು ಕೃಷ್ಣ ಯಾಜಿ, ಪಂ. ಪರಮೇಶ್ವರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೊಳ್ಯೂರು ರಾಮಚಂದ್ರ ರಾವ್, ಕಪ್ಪಕೆರೆ ಸುಬ್ರಾಯ ಭಾಗ್ವತ್, ಭಾಸ್ಕರ ಜೋಷಿ, ಬಿ.ಪಿ. ನಾಯಕ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಲಕ್ಷ್ಮೀನಾರಾಯಣ ಕಾಶಿ ಶಿವಮೊಗ್ಗಾ ಮತ್ತಿತರ ಗಣ್ಯರು, ಕಲಾವಿದರು, ಅಭಿಮಾನಿಗಳು ಶಂಭು ಹೆಗಡೆಯವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹಿರಿಯ ಕಲಾವಿದನ ನಿಧನಕ್ಕೆ ಕಂಬನಿ ಮಿಡಿದರು.<br /><br /><strong><strong><strong>ಬೇಗ ಮುಗಿಸೋ, ಎನ್ನತ್ರ ಆಗ್ತಿಲ್ಲೆ...</strong></strong></strong><br /><br /><strong>ಕುಣಿಯುವಾಗಲೇ ಬಂದಿತ್ತು ನೋಡಾ ಸಾವು</strong><br /><em><strong>-ವಸಂತಕುಮಾರ್ ಕತಗಾಲ</strong></em><br />ಅದು ‘ಲವ ಕುಶರ ಕಾಳಗ’<br />(ಸೀತಾ ವಿಯೋಗ)ದ ಕೊನೆಯ ಸನ್ನಿವೇಶ. ಭಾಗವತ ನೆಬ್ಬೂರು ನಾರಾಯಣ ಭಾಗವತರು ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ... ನಾಳಿನ್ನೂ ಸೌಖ್ಯವಾ ಪಡೆಯಬಹುದು’ ಎಂಬ ಹಾಡಿಗೆ ಕುಣಿದ ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ನೀರು ಕುಡಿದು ಬಂದ ಶಂಭು ಹೆಗಡೆ ನೆಬ್ಬೂರು ಅವರತ್ತ ತಿರುಗಿ ‘ಬೇಗ ಮುಗಿಸು ನನ್ನತ್ರ ಆಗ್ತಿಲ್ಲೆ’ ಎಂದು ಚೌಕಿಗೆ ಬಳಲುತ್ತ ಸಾಗಿ ಇನ್ನಿಲ್ಲವಾದರು.<br />ಹೌದು, ಯಕ್ಷರಂಗದ ಮೇರು ನಟ ಶಂಭು ಹೆಗಡೆ ಕೊನೆಯುಸಿರೆಳೆಯುವಾಗ ಇತ್ತ ಪ್ರಸಂಗವೂ ಮುಗಿದಿತ್ತು. ರಂಗಸ್ಥಳ ಹಾಗೂ ಚೌಕಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ ಶಂಭು ಹೆಗಡೆ ಅವರಿಗೆ ಸಾವಿನ ಮುನ್ಸೂಚನೆ ಇತ್ತೇ ಅಥವಾ ಕಾಕತಾಳೀಯವೇ ಎನ್ನುವ ಶಂಕೆ ಕಾಡದಿರದು.<br />ಸೋಮವಾರ ಸಂಜೆ ಚೌಕಿಗೆ ಬಂದ ಶಂಭು ಹೆಗಡೆ ತಮ್ಮ ಮೇಳದ ಭಾಗವತ, ಆಪ್ತ ನೆಬ್ಬೂರು ನಾರಾಯಣ ಭಾಗವತ ಅವರಲ್ಲಿ ಬಂದು ‘ನಾರಾಯಣ ನನಗೂ ವಯಸ್ಸು ಆತು. ನಿನಗೂ ವಯಸ್ಸು ಆತು. ಇನ್ನು ಎಷ್ಟು ದಿನ ಕುಣಿತ್ವ ಗೊತ್ತಿಲ್ಲೆ. ಅದಕ್ಕೆ ಒಂದು ದಾಖಲೆ ಇರ್ಲಿ ಹೇಳಿ ಇಡೀ ಆಟ ವೀಡಿಯೋ ರೆಕಾರ್ಡಿಂಗ್ ಮಾಡ್ಸುಲೆ ಹೇಳಿದ್ದೆ’ ಎಂದರು. ನೆಬ್ಬೂರರು ತಲೆ ಅಲ್ಲಾಡಿಸಿ, ಹೌದು ಒಂದು ದಾಖಲೆ ಇರಬೇಕು ಎಂದಿದ್ದರು.<br />ಲವ- ಕುಶರ ಕಾಳಗದಲ್ಲಿ ಮಗ ಶಿವಾನಂದ ಹೆಗಡೆ ಶತ್ರುಘ್ನನ ಪಾತ್ರ ವಹಿಸಿದ್ದರು. ಯಕ್ಷಗಾನ ಕೇಂದ್ರದ ಸದಾಶಿವ ಕುಶನ ಪಾತ್ರ, ಉದಯ ಹೆಗಡೆ ಮಾಳ್ಕೋಡು ಲವನ ಪಾತ್ರ ವಹಿಸಿದ್ದರು. ಪರಮೇಶ್ವರ ಹೆಗಡೆ ಮೃದಂಗ ಹಾಗೂ ಗಜಾನನ ಹೆಗಡೆ ಚೆಂಡೆ ವಾದಕರಾಗಿದ್ದರು. ಶಿವಾನಂದ ಹೆಗಡೆ ಪಾತ್ರ ಮುಗಿಸಿ ಆಟ (ಯಕ್ಷಗಾನ) ನೋಡುತ್ತಿದ್ದರು.<br />ರಾಮನ ಪಾತ್ರದಲ್ಲಿದ್ದ ಶಂಭು ಹೆಗಡೆ ಎಂದಿಗಿಂತ ಲವಲವಿಕೆಯಿಂದ ನರ್ತಿಸುತ್ತಿದ್ದರು. ಪ್ರೇಕ್ಷಕರಿಂದ ಚಪ್ಪಾಳೆಯೂ ಆಗಾಗ ಕೇಳಿಬರುತ್ತಿತ್ತು. ಶಂಭು ಹೆಗಡೆ ಅವರಿಗೆ ಆಯಾಸವಾದೀತು ಎಂದು ನೆಬ್ಬೂರು ಭಾಗವತರು ಹಾಡನ್ನು ಮುಗಿಸಲು ಅನುವಾದಾಗಲೆಲ್ಲ ಮತ್ತೆ ಮತ್ತೆ ಹಾಡನ್ನು ಎತ್ತಿ ಹೇಳಿ ವಿವಿಧ ಭಂಗಿಯಲ್ಲಿ ಕುಣಿದರು. ತಮ್ಮ ಅಸ್ಖಲಿತ ಮಾತಿನಿಂದ ಗಮನ ಸೆಳೆಯುತ್ತಿದ್ದರು.<br />ಕುಶನೊಂದಿಗೆ ಯುದ್ಧಕ್ಕೆ ಅನುವಾದ ಸನ್ನಿವೇಶ. ಶಂಭು ಹೆಗಡೆ ಸಾವಿಗೆ ಕೇವಲ ಐದು ನಿಮಿಷಗಳ ಮುನ್ನ ನಡೆದ ಮಾತುಕತೆ, ಯುದ್ಧಕ್ಕೆ ಬಂದ ರಾಮನಿಗೆ ಕುಶನ ಪಾತ್ರದಲ್ಲಿದ್ದ ಸದಾಶಿವ ‘ನೀನು ವೀರನಾಗಿ ಇಲ್ಲಿಗೆ ಬಂದಿದ್ದೀಯ. ಆದರೆ ಹೋಗುವಾಗ ಹೇಡಿಯಂತೆ ಹೋಗುವೆ’ ಎಂದರು. ತಕ್ಷಣ ಶಂಭು ಹೆಗಡೆ ‘ನಾನು ಬರವಾಗಲೂ ವೀರನೇ. ಹೋಗುವಾಗಲೂ ವೀರನೇ. ರಣಹೇಡಿಯಂತೆ ಎಂದೂ ಹೋಗಲಾರೆ. ನಾನು ಎಲ್ಲಿದ್ದರೂ ವೀರನಾಗಿಯೇ ಇರುತ್ತೇನೆ’ ಎಂದರು.<br />ಅಷ್ಟರಲ್ಲಿ ಭಾಗವತರು ‘ಏಳಿ ಪೋಗುವ ಮುನಿಪನಿದ್ದೆಡೆಗೆ..’ ಎಂದು ಹಾಡತೊಡಗಿದರು. ಹಾಡು ಮುಗಿಸುವ ಮುನ್ನ ಶಂಭು ಹೆಗಡೆ ಚೌಕಿಗೆ ಹೋಗಿ ನೀರು ಕುಡಿದು ಬಂದರು. ಆಗಲೇ ಹೆಗಡೆ ಅವರ ದೇಹ ಕಂಪಿಸತೊಡಗಿತ್ತು. ಆದರೂ ಸಾವರಿಸಿಕೊಂಡು ‘ಏಳಿ ಹೋಗೋಣ ಏಳಿ ಹೋಗೋಣ’ ಎಂದು ಲವ ಕುಶರಿಗೆ ಹೇಳಿದರು. ಬೇಗ ಮುಗಿಸಿ ನನ್ನಿಂದ ಆಗದು ಎಂದು ಭಾಗವತರಿಗೆ ತಿಳಿಸಿ ಚೌಕಿಗೆ ಹೋದರು.<br />ಕೊನೆಯ ಸನ್ನಿವೇಶವಾಗಿದ್ದರಿಂದ ಮತ್ತೆ ಎರಡೆ ನಿಮಿಷದಲ್ಲಿ ಯಕ್ಷಗಾನ ಮುಗಿಯಿತು. ಅಷ್ಟರಲ್ಲಿ ಚೌಕಿಯಲ್ಲಿ ಶಂಭು ಹೆಗಡೆ ಎದೆನೋವಿನಿಂದ ಬಳಲುತ್ತಿದ್ದರು. ಸುದ್ದಿ ತಿಳಿದು ಎಲ್ಲರೂ ಚೌಕಿಯತ್ತ ಮುಗಿಬಿದ್ದರು. ಆದರೆ ತರಾತುರಿಯಿಂದ ಹಚ್ಚಿದ ಬಣ್ಣದಲ್ಲೇ ಶಂಭು ಹೆಗಡೆ ಅವರನ್ನು ಶಿವಾನಂದ ಹೆಗಡೆ ಕಾರಿನಲ್ಲಿ ಹೊನ್ನಾವರ ಆಸ್ಪತ್ರೆಯತ್ತ ಕರೆದೊಯ್ದರು. ಅಲ್ಲಿಗೆ ಶಂಭು ಹೆಗಡೆ ಅವರ ‘ಪರ್ವ’ ಮುಕ್ತಾಯವಾಗಿತ್ತು.<br /><br /><strong><strong><strong><strong>ಅವರೊಂದಿಗೆ ಗೆಜ್ಜೆ ಕಟ್ಟಿ ಕುಣಿವ ಆಸೆ ಈಡೇರಲೇ ಇಲ್ಲ...</strong></strong></strong></strong><br /><strong><em>- ನನ್ನ ಹಾಗೂ ಶಂಭು ಹೆಗಡೆ ನಡುವೆ ಯಾವುದೇ ದ್ವೇಷವಾಗಲಿ, ಸಿಟ್ಟು ಸಿಡುಕಾಗಲಿ, ಅಸೂಯೆಯಾಗಲಿ ಇರಲಿಲ್ಲ: ಚಿಟ್ಟಾಣಿ ರಾಮಚಂದ್ರ ಹೆಗಡೆ</em></strong><br /><em>ಬಡಗುತಿಟ್ಟು ಯಕ್ಷರಂಗದಲ್ಲಿ ಚಿಟ್ಟಾಣಿ ಮತ್ತು ಶಂಭುಹೆಗಡೆ ಎರಡು ಮೇರು ತಾರೆಗಳು. ಇವರಿಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ವೈಷಮ್ಯ ಇಲ್ಲದಿದ್ದರೂ ಪ್ರೇಕ್ಷಕ ವರ್ಗದಲ್ಲಿ ಮಾತ್ರ ಅದು ಹೇಗೋ ಎರಡು ವರ್ಗ ಸೃಷ್ಟಿಯಾಗಿಬಿಟ್ಟಿತ್ತು.<br />ತಮ್ಮ ಹಾಗು ಶಂಭು ಹೆಗಡೆ ನಡುವಿನ ಒಡನಾಟವನ್ನು ಚಿಟ್ಟಾಣಿ ಇಲ್ಲಿ ಬಿಚ್ಚಿಟ್ಟಿದ್ದಾರೆ. </em></div><br /><div><br /><br /><a href="https://blogger.googleusercontent.com/img/b/R29vZ2xl/AVvXsEjGiSYSeSGV8DXV1gUQmjitlh3hF8PZlA9d8joHoBEx2Sda4lqRkhHe_b3O-qdJvidtduq3LsqE2WdubGaQ0C7osDvA_q6CVao-ineB4eoclLUlycQu0TMZZf4e_muNi96in4tx/s1600-h/kere1.jpg"><img id="BLOGGER_PHOTO_ID_5298910808507420738" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjGiSYSeSGV8DXV1gUQmjitlh3hF8PZlA9d8joHoBEx2Sda4lqRkhHe_b3O-qdJvidtduq3LsqE2WdubGaQ0C7osDvA_q6CVao-ineB4eoclLUlycQu0TMZZf4e_muNi96in4tx/s320/kere1.jpg" border="0" /></a><br /><div><br />- <strong>ಚಿಟ್ಟಾಣಿ ರಾಮಚಂದ್ರ ಹೆಗಡೆ</strong><br />ಕೋಟಿಗೊಬ್ಬ ಕಲಾವಿದ ಶಂಭು ಹೆಗಡೆ. ಅಂತಹ ಕಲಾವಿದ ಶಂಭು ಅವರೊಂದಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಬೇಕೆಂಬ ಆಸೆ ಕೊನೆಗೂ ಈಡೇರಲಿಲ್ಲ. ಅದಕ್ಕೆ ವಿಧಿ ಅವಕಾಶವನ್ನೇ ಕೊಡಲಿಲ್ಲ.<br />ಕರುಣ ರಸದ ಅಭಿವ್ಯಕ್ತಿಯಲ್ಲಿ ಮೇರು ಸದೃಶರಾಗಿದ್ದ ಶಂಭು ಹೆಗಡೆ ಅವರ ಗೆಜ್ಜೆಯ ನಾದ, ಹೆಜ್ಜೆಯ ಸದ್ದು ಕಲಾಭಿಮಾನಿಯ ಹೃದಯದಲ್ಲಿ ಅಚ್ಚೊತ್ತಿದೆ. ಅವರು ರಾಮನಾಗಿಯೇ ಹೊರಟರು. ಅದೂ ರಥಸಪ್ತಮಿ, ಆರಾಧ್ಯದೇವ ಇಡಗುಂಜಿ ವಿನಾಯಕನ ಸನ್ನಿಧಿ, ಮೇಲಾಗಿ ಬಣ್ಣ ಬಳಿದುಕೊಂಡೇ ಬದುಕಿಗೆ ವಿದಾಯ ಹೇಳಿದರು. ಇಂತಹ ಮರಣ ಮಹಾತ್ಮರಿಗಲ್ಲದೆ ಮತ್ತಿನ್ನಾರಿಗೆ ಬರಲು ಸಾಧ್ಯ? ನಸುಕಿನ ಜಾವ ನಿದ್ದೆಯಲ್ಲಿದ್ದ ನನಗೆ ಅವರ ನಿಧನದ ಸುದ್ದಿ ಬಡಿದೆಬ್ಬಿಸಿತು. ಆ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು.<br />ಕ್ರಮೇಣ ನನ್ನ ಅವರ ಒಡನಾಟ, ಅವರ ಪಾತ್ರ ಚಿತ್ರಣ ಇವೆಲ್ಲವುಗಳ ಬಗ್ಗೆ ಮನಸ್ಸು ಮೆಲಕು ಹಾಕಿತು. ಹೌದು, ಯಕ್ಷರಂಗದಲ್ಲಿ ನನ್ನ ಬೆಳವಣಿಗೆಗೆ ಶಂಭು ಹೆಗಡೆ ಸಹ ಕಾರಣರು. ಹಾಗೆ ಅವರ ಬೆಳವಣಿಗೆಗೂ ನಾನೂ ಒಂದು ಕಾರಣ ಎಂದು ನಾನು ನಂಬಿದ್ದೇನೆ. ಒಬ್ಬ ಪ್ರಬಲ ಪ್ರತಿಸ್ಪರ್ಧಿ ಇದ್ದಾಗ ಮಾತ್ರ ಇನ್ನೊಬ್ಬ ಮೇಲೆ ಬರಲು ಸಾಧ್ಯ. ನಿಜಕ್ಕೂ ಹೇಳಬೇಕೆಂದರೆ ವೈಯಕ್ತಿಕ ನೆಲೆಯಲ್ಲಿ ನನ್ನ ಹಾಗೂ ಶಂಭು ಹೆಗಡೆ ನಡುವೆ ಯಾವುದೇ ದ್ವೇಷವಾಗಲಿ, ಸಿಟ್ಟು ಸಿಡುಕಾಗಲಿ, ಅಸೂಯೆಯಾಗಲಿ ಇರಲಿಲ್ಲ. ಆದರೆ ಪ್ರೇಕ್ಷಕರಲ್ಲಿ ಮಾತ್ರ ಅದು ಹೇಗೋ ಎರಡು ವರ್ಗ ಸೃಷ್ಟಿಯಾಗಿದ್ದು ಮಾತ್ರ ಸುಳ್ಳಲ್ಲ. ಬಹುಶಃ ನಾನು ಹಾಗೂ ಶಂಭು ಒಟ್ಟಿಗೆ ಗೆಜ್ಜೆ ಕಟ್ಟದಿರಲು ಇದೂ ಕಾರಣವಿರಬೇಕು.<br /><strong>- ನಮ್ಮಲ್ಲಿ ದ್ವೇಷವಿರಲಿಲ್ಲ:</strong> ನನಗಂತೂ ಅವರೊಂದಿಗೆ ಹೆಜ್ಜೆ ಹಾಕಬೇಕೆಂದು ಅತೀವ ಆಸೆ ಇತ್ತು. ಇದಕ್ಕಾಗಿ ಹಲವರ ಪ್ರಯತ್ನ ಕೂಡ ನಡೆಯಿತು. ನಾನೂ ಒಮ್ಮೆ ಅವರಲ್ಲಿ ಹೇಳಿದ್ದೆ. ನನಗೆ ಬೇರೇನೂ ಆಸೆ ಇಲ್ಲ. ಒಮ್ಮೆ ನಿಮ್ಮೊಂದಿಗೆ ಕುಣಿಯಬೇಕು ಎಂದಿದ್ದೆ. ಆದರೆ ಕಾಲ ಕೂಡಿ ಬರಲಿಲ್ಲ. ಆ ಆಸೆ ಮರೀಚಿಕೆಯಾಗಿಯೇ ಉಳಿಯಿತು. ಆದರೆ ಅವರೆಂದೂ ನನ್ನನ್ನು ದೂರಿಲ್ಲ. ನಾನೂ ಅವರ ಬಗ್ಗೆ ದೂರಲಿಲ್ಲ. ನಾನು ಮತ್ತು ಅವರು ಸಾರ್ವಜನಿಕವಾಗಿ ಒಟ್ಟಿಗೆ ಸೇರಿದ್ದು ತುಂಬ ವಿರಳ. ಕೆಲ ವರ್ಷಗಳ ಹಿಂದೆ ಶಿವಮೊಗ್ಗದ ಸಮಾರಂಭದಲ್ಲಿ ಸೇರಿದ್ದೆವು. ಆತ್ಮೀಯತೆಯಿಂದ ಮಾತನಾಡಿದೆವು. ತರುವಾಯ ಅಂದರೆ ಕಳೆದ ಎರಡು ವರ್ಷಗಳ ಹಿಂದೆ ಶಿರಸಿ ಸಮೀಪದ ಬಕ್ಕಳದಲ್ಲಿ ನಮ್ಮಿಬ್ಬರಿಗೂ ಸನ್ಮಾನ ಏರ್ಪಡಿಸಲಾಗಿತ್ತು. ಸಂಘಟಕರು ಶಂಭು ಹೆಗಡೆ ಅವರನ್ನು ಮೊದಲು ಕರೆದರು. ಆಗ ಶಂಭು ಹೆಗಡೆ, ‘ಚಿಟ್ಟಾಣಿ ನನಗಿಂತ ಹಿರಿಯರು. ದೊಡ್ಡ ನಟರು ಅವರಿಗೆ ಮೊದಲು ಸನ್ಮಾನ ಮಾಡಬೇಕಿತ್ತು’ ಎಂದಿದ್ದರು ವಿಶಾಲ ಹೃದಯಿ ಶಂಭು ಹೆಗಡೆ. ನನಗೂ ಇದು ಖುಷಿ ತಂದಿತ್ತು.<br />ಇದಕ್ಕೂ ಮುನ್ನ ಕಾರವಾರದ ಸಮಾರಂಭದಲ್ಲಿ ಒಟ್ಟಿಗೆ ಸೇರಿದ್ದೆವು. ಆಗ ಯಕ್ಷಗಾನದ ಆಗುಹೋಗುಗಳ ಬಗ್ಗೆ ಇಬ್ಬರೂ ಸುದೀರ್ಘವಾಗಿ ಸಮಾಲೋಚನೆ ನಡೆಸಿದೆವು. ಕಲೆ ನಡೆಯುತ್ತಿರುವ ದಾರಿಯ ಬಗ್ಗೆ ಆತಂಕವೂ ಉಂಟಾಯಿತು.<br />ತೀರಾ ಈಚೆಗೆ ಅಂದರೆ, ಕಳೆದ ಜ.೩೦ರಂದು ಕುಮಟಾದಲ್ಲಿ ಒಟ್ಟಿಗೆ ಸೇರಿದ್ದೆವು. ನಾನು ಇದ್ದ ರೂಮಿನಲ್ಲಿ ಇತರ ಗಣ್ಯರೂ ಇದ್ದರು. ನನಗೆ ಬೀಡಿ ಸೇದದೆ ತುಂಬ ಸಮಯವಾಗಿತ್ತು. ಶಂಭು ಹೆಗಡೆ ನನ್ನಲ್ಲಿ ಬಂದು ತಮ್ಮ ರೂಮಿಗೆ ಬಾ ಎಂದು ಕರೆದೊಯ್ದರು. ‘ನಿಮ್ಗೆ ಏನೋ ತೊಂದ್ರೆ ಆತು ಅನ್ಸ್ತು. ನಂಗೇನೂ ತೊಂದ್ರೆ ಇಲ್ಲೆ, ಇಲ್ಲಿ ಬೀಡಿ ಸೇದಿ’ ಎಂದರು. ಅವರೊಂದಿಗೆ ಹರಟುತ್ತ ಬೀಡಿ ಸೇದಿದೆ. ಅದೆಲ್ಲ ಈಗ ನೆನಪು ಮಾತ್ರ.<br /><strong>- ಹೊಸತನದ ಹರಿಕಾರ:</strong> ಯಕ್ಷರಂಗದಲ್ಲಿ ಅವರ ಬಗ್ಗೆ ಹೇಳುವುದಾದರೆ, ನಾನು ಅವರ ಕೆಲ ಪಾತ್ರಗಳನ್ನು ನೋಡಿದ್ದೇನೆ. ಅವರ ಕರ್ಣ, ಕೃಷ್ಣ, ಮಾಗಧ, ಕಾರ್ತವೀರ್ಯ, ರಾಮ, ಹರಿಶ್ಚಂದ್ರನ ಪಾತ್ರಗಳು ಈಗಲೂ ನನ್ನ ಕಣ್ಮುಂದೆ ಇವೆ. ಶಿರಸಿ ಜಾತ್ರೆ ಸಂದರ್ಭದಲ್ಲಿ ರಾಮ ನಿರ್ಯಾಣದ ರಾಮನ ಪಾತ್ರವಂತೂ ಅದ್ಭುತ. ಅಲ್ಲಿ ದೂರ್ವಾಸರನ್ನು ಒಂದೆಡೆ ಸಂಭ್ರಮದಿಂದ ಸ್ವಾಗತಿಸಬೇಕು, ಅದೇ ಸಂದರ್ಭದಲ್ಲಿ ತಮ್ಮ ಲಕ್ಷ್ಮಣನಿಗೆ (ನೋವಿನಿಂದ) ಮರಣದಂಡನೆ ವಿಧಿಸಬೇಕು. ಈ ಸನ್ನಿವೇಶದ ನಡುವಣ ಪಾತ್ರ ಚಿತ್ರಣ ಶಂಭು ಹೆಗಡೆ ಅವರಿಂದ ಮಾತ್ರ ಸಾಧ್ಯ. ಸ್ಮಶಾನ ಕಾಯುವ ಹರಿಶ್ಚಂದ್ರನ ಪಾತ್ರವನ್ನು ಹೃದಯಕ್ಕೆ ತಟ್ಟುವಂತೆ ಅನಾವರಣ ಮಾಡುವ ಕಲೆ ಅವರಲ್ಲಿ ಮಾತ್ರ ಇತ್ತು.<br />ಒಮ್ಮೆ ಶಂಭು ಹೆಗಡೆ ನನ್ನಲ್ಲಿ ಹೇಳಿದ್ದು ನೆನಪಿದೆ- ‘ಕರುಣ ರಸಕ್ಕೆ ಕುಣಿದು ನಾನು ಹೊಸ ಪ್ರಯೋಗ ಮಾಡಿದ್ದೇನೆ’ ಎಂದಿದ್ದರು. ಹೌದು, ಅವರು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಗೆದ್ದರು. ಕೋರಿಯೋಗ್ರಫಿ ಅಳವಡಿಸಿಕೊಂಡರು. ಅಗಾಧ ಪಾಂಡಿತ್ಯ, ಚಾಣಾಕ್ಷರಾಗಿದ್ದ ಅವರನ್ನು ಕಳೆದುಕೊಂಡಿದ್ದರಿಂದ ಆಘಾತ ಉಂಟಾಗಿದೆ. ತುಂಬಾ ಪಶ್ಚಾತ್ತಾಪ ಆಗಿದೆ. ಅವರು ನೂರು ವರ್ಷ ಬದುಕಬೇಕಿತ್ತು.<br />- ಬರಹ ರೂಪ: ವಸಂತಕುಮಾರ್ ಕತಗಾಲ<br /><br /><strong>ಕೃಪೆ- ಕನ್ನಡಪ್ರಭ<br />ಚಿತ್ರಕೃಪೆ-</strong> http://keremane.blogspot.com/ </div></div>Chevarhttp://www.blogger.com/profile/12119362877342017192noreply@blogger.com3tag:blogger.com,1999:blog-19828151.post-30835132436887538782008-12-08T17:49:00.003+05:302008-12-08T18:21:58.818+05:30ನವಿರು ಸಾಲುಗಳು ಕೇವಲ ನನಗಾಗಿ...<div align="justify">ಗತ ನೆನಪು ಶತ ನೆನಪು<br />ಇಂದಿಗೂ ಎಲ್ಲಾ ಒನಪು<br /><br />ಸಂಭ್ರಮದ ಸಂತಸದಿ<br />ಮನವಿಂದು ನಗುತಿರಲು<br />ಸುಖ ದುಃಖವೆಲ್ಲಾ ಮರೆಯಾದವೋ<br />ಇಲ್ಲ ಮರುಕಳಿಸ್ಯಾವೋ?<br /><br />ಸಂಭ್ರಮವು ಸೂತಕವು<br />ಮನವ ಚುಚ್ಚುತಿರಲು<br />ಬದುಕೆಂಬ ಮೂರಕ್ಷರ<br />ಆರುತಿಹುದು<br /><br />ಗತ ನೆನಪು ಶತ ನೆನಪು<br />ಇಂದಿಗೂ ಎಲ್ಲಾ ಒನಪು<br /><br /><span style="font-family:times new roman;">20/03/2006<br /></span><br />ಇದು ಎಂಸಿಜೆ ಎಂಬ ಪತ್ರಿಕೋದ್ಯಮ ಕೋರ್ಸ್ ಮಾಡುತ್ತಿದ್ದ ಸಂದರ್ಭ ಬೆಳಗ್ಗಿನ ಆರಂಭದ ಮಹಾ ಬೋರಿಂಗ್ ಕ್ಲಾಸ್ನಲ್ಲಿ ಬರೆದದ್ದು. ಇದಕ್ಕೆ ಕವಿತೆ, ಕವನ ಎಂದು ಹೆಸರಿಟ್ಟು ಕೊಂಡು ಯಾವುದೇ ರೀತಿಯಲ್ಲೂ ಕವಿಯಾಗಲು ನಾನು ಹೊರಡುವುದಿಲ್ಲ. ಇದು ಮನಸಿನ ಪರಿಶುದ್ಧ ಭಾವನೆಗಳು. ಅರ್ಥಾತ್ ಮೈ ಫೀಲಿಂಗ್ಸ್.</div><div align="justify">ಯಾಕೆ ಮನಸ್ಸಿನ ಭಾವನೆಗಳು ಈ ರೀತಿ ಅಂದು ಅಕ್ಷರ ರೂಪ ಪಡೆದವು ಎನ್ನುವುದು ಇಂದಿಗೂ ಗೊತ್ತಿಲ್ಲ. ಆದರೆ ಇಂತಹ ಇನ್ನೂ ಹಲವು ಸಾಲುಗಳು ನನ್ನ ಹಲವಾರು ನೋಟ್ಸ್ಗಳಲ್ಲಿ ಸಿಗುತ್ತವೆ. ಆದರೆ ಆಗ ಬರೆದಿದ್ದ ಒಂದು ನೋಟ್ ಬುಕ್ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಅದು ಸಿಕ್ಕಿದರೆ ಮರುಭೂಮಿಯ ಓಯಸಿಸ್ ನಾನಾಗುತ್ತೇನೆ. ಅದಕ್ಕೇ ಈಗ ಹುಡುಕಾಟದ ಹಾದಿ. ಮುಂದಿನ ಸಾರಿ ಮಂಗಳೂರಿಗೆ ಹೋದಾಗ ನಾನು ಮಂಗಳೂರಿನ ಯುನಿವರ್ಸಿಟಿಯಲ್ಲಿರುವಾಗ ಪೇಯಿಂಗ್ ಗೆಸ್ಟ್ ಆಗಿದ್ದಾಗ ಇದ್ದ ಮನೆಗೆ ಹೋಗಬೇಕು. ಅಲ್ಲಿ ನನ್ನ ಹಲವು ನೋಟ್ಸ್ಗಳಿವೆ. ಆ ಮನೆಯಲ್ಲಿ ಅಭಿಯಿದ್ದಾಳೆ, ಅನಿ ಇದ್ದಾನೆ. ಪ್ರೀತಿಯಿಂದ ನೋಡಿಕೊಂಡ ರೇವತಿ ಅಕ್ಕ, ಉದಯ್ ಇದ್ದಾರೆ. ಜತೆಗೆ ನನ್ನದೇ ಓರಗೆಯವಳಾದ ವಾಣಿ ಇದ್ದಾಳೆ. ಜತೆಗೆ ಕೆಲವು ಸುಂದರ ನೆನಪುಗಳಿವೆ. ಕೆಲವು ಭಯಾನಕ ರಾತ್ರಿಯ ಕಾಲ್ನಡಿಗೆಗಳಿವೆ. ಅವುಗಳು ಕೇವಲ ರಹಸ್ಯಗಳು.</div><div align="justify"> </div><div align="justify">ಅಷ್ಟಕ್ಕೂ ಈ ಅಕ್ಷರ ಸಾಲುಗಳನ್ನು ನಿಮ್ಮ ಮುಂದೆ ಇಟ್ಟು ನಾನು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತದೆ. ಸಾಧನೆ ಎನ್ನುವುದು ಏನೂ ಮಾಡಲಾಗದಿದ್ದರೂ ನಾನು ಇಂತಹ ಹಲವು ಮಜಲುಗಳನ್ನು ದಾಟಿ ಬಂದೆ ಎನ್ನುವ ಖುಷಿಯಿದೆ. ಅಷ್ಟಕ್ಕೂ ನನ್ನಲ್ಲಿರುವ ಈ ಅಕ್ಷರ ಬೆಳೆಯ ಬಗ್ಗೆ ಗೊತ್ತಿರುವುದು ಕೆಲ ವ್ಯಕ್ತಿಗಳಿಗೆ ಮಾತ್ರ. </div><div align="justify"><br />ಕವಿತೆಗಳು ನನ್ನನ್ನು ಯಾವತ್ತೂ ಬರೆಯಲೇ ಬೇಕು ಎಂದು ಒತ್ತಡ ಹೇರಿಲ್ಲ. ನಿನಗೆ ಬರೆಯುವ ಶಕ್ತಿಯಿದೆ ಅದಕ್ಕೋಸ್ಕರವಾದರೂ ನೀನು ಬರೆಯಲೇಬೇಕು ಎಂದು ಯಾವತ್ತೂ ಅನಿಸಿಲ್ಲ. ಹಾಗಂತ ಭಾವನೆಗಳು ಯಾವತ್ತೂ ನನ್ನನ್ನು ಕಟ್ಟಿ ಹಾಕಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಇರುವಂತೆ ಸುಖ ದುಃಖ, ನೋವು, ನಲಿವು ಎಲ್ಲವೂ ಜೀವನದಲ್ಲಿ ಲಭಿಸಿದವು. ಆದರೂ ಇದೆಲ್ಲಾ ಬರೆದೆ. ಯಾಕೆ ಎಂದು ಮಾತ್ರ ಕೇಳಬೇಡಿ. ಎಂಸಿಜೆ ಕ್ಲಾಸಿನ ಕೆಲವರ ಬೋರಿಂಗ್ ಕ್ಲಾಸ್ ಲೈಕ್ ‘ಥಿಂಗ್ಸ್’ನಲ್ಲಿ ಕೂತರೆ ಯಾವತ್ತಿಗೂ ಕ್ಲಾಸ್ ಕೇಳಿಯೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದೊಂದು ಕ್ಲಾಸ್ ಎಂದು ಅನಿಸಲೇ ಇಲ್ಲ. ಆ ಕ್ಲಾಸಿನಲ್ಲೇ ಕೆಲವು ಅಸೈನ್ಮೆಂಟ್ಗಳು ಮುಗಿದು ಹೋಗುತ್ತಿದ್ದವು.</div><div align="justify"><br />ಹೀಗೆ ಇನ್ನೂ ಹಲವು ನೆನಪುಗಳು ಇವೆ. ಅದಕ್ಕೆ ಪ್ರತಿಯೊಂದಕ್ಕೂ ಒಂದರ ಹಿಂದೆ ಒಂದೊಂದು ಕಾರಣವಿದೆ. ಅದನ್ನು ಮುಂದೆ ಬರೆಯೋಣ. ಸದ್ಯಕ್ಕೆ ಇಷ್ಟು ಸಾಕು. ಏನಂತೀರಾ?</div>Chevarhttp://www.blogger.com/profile/12119362877342017192noreply@blogger.com6tag:blogger.com,1999:blog-19828151.post-35203348052885517542008-11-28T02:25:00.002+05:302008-11-28T03:16:45.914+05:30ಗೆಳತಿ @ 25<strong><span style="color:#000099;">ದೀಪವು ನಿನ್ನದೆ, ಗಾಳಿಯು ನಿನ್ನದೇ ಆರದಿರಲಿ ಬೆಳಕು</span></strong><br /><strong><span style="color:#000099;"><div align="justify"><br /></span></strong></div>ಸದ್ಯ ದೇಶದಲ್ಲಿ ಉಗ್ರರ ಕರಾಳ ಹಸ್ತದ ಭೀಕರತೆಯಿಂದ ಮನಸ್ಸು ಇನ್ನೂ ಹೊರಬಂದಿಲ್ಲ. ಯಾಕೋ ಗೊತ್ತಿಲ್ಲ ಕಳೆದ ಎರಡು ದಿನಗಳ ಕಾಲ ನಿರಂತರವಾಗಿ ಟಿ.ವಿ. ದೃಶ್ಯಗಳನ್ನು ನೋಡಿ ಮನಸು ಏಕೋ ತಳಮಳಗೊಂಡಿದೆ. ಹೃದಯಭಾರವಾಗಿದೆ. ಏನೇ ಇರಲಿ ಈ ಎಲ್ಲಾ ಗೊಂದಲಗಳ ಬಗ್ಗೆ ಕೆಲವೇ ದಿನಗಳಲ್ಲಿ ಬರೆಯುತ್ತೇನೆ. <div align="justify"><br />ಸದ್ಯ ನನ್ನ ಗೆಳತಿ @ 25. ಜೀವನದಲ್ಲಿ ಕೆಲ ಸಾಧನೆ ಮಾಡಬೇಕು ಎಂದು ಹೊರಟವನಿಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗೆಳತಿ ಅವಳು. ಅವಳ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ. ಗೆಳೆಯಾ ಜೀವನದಲ್ಲಿ ಕೋಪ ಬೇಡ, ಸಹನೆ ನಿನ್ನ ಮಂತ್ರವಾಗಲಿ ಎಂದು ಶತ ಒರಟನನ್ನು ತಿದ್ದಿ ಜೀವನದಲ್ಲಿ ಸಾಧನೆ ಮಾಡು ಎಂದು ಸದಾ ಬೆನ್ನಿಗೆ ಬಿದ್ದವಳು ನೀನು. </div><div align="justify"></div><div align="justify">ದ್ವೇಷವೆಂಬ ಕ್ಷಣದ ಕೋಪ ಯಾವ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟವಳು ನೀನು. ನೀನು ಈ ರೀತಿ ವರ್ತಿಸಿದರೆ ಸರಿ ಇರಲ್ಲ, ನೀನೂ ಹೀಗೇ ಇರಬೇಕು ಎಂದು ಬಾಳ ಹಾದಿಯ ದಾರಿಯನ್ನು ತೋರಿಸಿದವಳು ನೀನು. ಕೋಪಿಸಿಕೊಂಡರೂ ಆ ಕ್ಷಣಕ್ಕೆ ಮಾತ್ರ ಕೋಪವಿರಲಿ ಎಂದು ತಪ್ಪು ಹಾದಿಯಲ್ಲಿ ನಡೆದಾಗ, ನಾನು ಮಾಡುತ್ತಿರುವುದನ್ನು ಧಿಕ್ಕರಿಸಿ ಗೆಳೆಯಾ ಬಾ ಕುಳಿತುಕೋ ಇದೆಲ್ಲಾ ಬೇಡ ಎಂದು ತಿಳಿಹೇಳಿದವಳು ನೀನು.</div><div align="justify">ಗೆಳೆಯಾ, ಮುಂದೊಂದು ದಿನ ಯಾವುದೋ ಕಾಲಘಟ್ಟದಲ್ಲಿ ಈ ಎಲ್ಲಾ ಮಾತುಗಳು ನಿನ್ನ ಪಾಲಿಗೆ ತುಂಬಾ ಸಹಕಾರಿಯಾಗುತ್ತದೆ ಎಂದು ಹೇಳಿ ಅಂದು ಪೀಡಿಸುತ್ತಿದ್ದವಳು ನೀನು. ಅಂದು ಹೇಳಿದ ಪಾಠ, ಕೇಳಿಸಿಕೊಂಡ ಹಿತವಚನ, ಜತೆಗೊಂದು ಅದೃಷ್ಟರೇಖೆ. ಇದೆಲ್ಲಕ್ಕಿಂತ ಹೆಚ್ಚಾಗಿ ನನಗೊಂದು ಅದ್ಭುತ ಗೆಳತಿಯಾಗಿ ಲಭಿಸಿದ ನೀನು. </div><div align="justify">ಇಂದು ನಿನಗೆ <span class="">೨೫ </span>ರ ಸಂಭ್ರಮ. ನಿನ್ನ ಗೆಳತಿಯಾಗಿ ಪಡೆದ ನನಗೆ ಸುಂದರ ಘಳಿಗೆ. ಕಳೆದ ಹಲವು ವರ್ಷಗಳಿಂದ ಈ ಸಂಭ್ರಮ ಜತೆಗಿದೆ. ಇದು ಎಂದೆಂದಿಗೂ ಇರಲಿ, ಮುಂದಿನ ಸಂಭ್ರಮಕ್ಕೆ ನಾಂದಿಯಾಗಲಿ.<br />ನಿನ್ನ ಗೆಳತಿಯಾಗಿ ನೀಡಿದ ನಿನ್ನ ಅಪ್ಪ ಅಮ್ಮನಿಗೊಂದು ಥ್ಯಾಂಕ್ಸ್ ಹೇಳುತ್ತಾ, ಸದಾಕಾಲ ಸಂತಸ ನಿನ್ನ ಜತೆಗೆ ಇರಲಿ ಎಂದು ಹಾರೈಸುತ್ತಾ,</div><div align="center"><span class=""></span><span style="color:#000066;"><strong><span style="font-size:130%;">ನಿನಗೆ ಜನುಮದಿನದ ಶುಭಾಶಯ</span></strong></span></div>Chevarhttp://www.blogger.com/profile/12119362877342017192noreply@blogger.com5tag:blogger.com,1999:blog-19828151.post-25869833191599182962008-11-15T03:01:00.001+05:302008-11-15T16:18:48.246+05:30ಕಾಡುವ ಜೀವಗಳುಬಾಲ್ಯದಲ್ಲಿ ಮಾಡಿದ ಮಕ್ಕಳಾಟಿಕೆ, ಬಾಲ್ಯದ ಗೆಳತಿ, ಹೈಸ್ಕೂಲ್ ಜೀವನ, ಕಾಲೇಜಿನ ಅದ್ಭುತ ಗೆಳತಿಯರು, ವಿಶ್ವವಿದ್ಯಾನಿಲಯದ ಜೀವನ. ಅವರು ಕಾಡುವ ಜೀವಗಳು<br /><br />ಬಾಲ್ಯದ ತುಂಟಾಟ ಎನ್ನುವುದು ನನ್ನ ಪಾಲಿಗೆ ಅಲ್ಮೋಸ್ಟ್ ಸಿಕ್ಕೇ ಇಲ್ಲ. ಕಾರಣ ಬಾಲ್ಯದಿಂದಲೂ ಕಾಡಿದ ಅನಾರೋಗ್ಯ. ಆಮೇಲೆ ಅಕ್ಕ ತಂಗಿಯರ ಪ್ರೀತಿ ಅದೂ ಇಲ್ಲ. ಕಾರಣ ಸ್ವಂತಕ್ಕೆಂದು ಇರುವುದು ಇಬ್ಬರು ಸಹೋದರರು ಮಾತ್ರ. ಚಿಕ್ಕಪ್ಪನ ಮಕ್ಕಳು ಇದ್ದರೂ ಅವರು ನಮ್ಮ ಸ್ವಂತ ಅಕ್ಕ ತಂಗಿಯರು ಎನ್ನುವ ಆತ್ಮೀಯತೆ ಇರಲಿಲ್ಲ.<br /> ಇಂದು ಯಾವುದೋ ಮನೆಯಲ್ಲಿ ಕಾಣುವ ಅಕ್ಕ ತಂಗಿಯರ ಪ್ರೀತಿ ಕಾಣುವಾಗ ಐ ಮಿಸ್ ದೆಮ್ ಮೋಸ್ಟ್. ಆದರೆ ಕಾಲೇಜಿನಲ್ಲಿದ್ದ ಗೆಳತಿಯರು ಅಂತಹ ಒಂದು ಕೊರತೆಯನ್ನು ನೀಗಿಸಿದ್ದರು. ಇಂದಿಗೂ ನೀಗಿಸುತ್ತಿದ್ದಾರೆ. ಇಂದಿಗೂ ಅವರೆಲ್ಲರನ್ನೂ ಹೆಸರಿಸಿದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಿಗುತ್ತಾರೆ. ಆದರೆ ಅವರು ನೀಡಿದ ಅದ್ಭುತ ಪ್ರೀತಿಯನ್ನು ಯಾರಿಂದಲೂ ನೀಡಲು ಸಾಧ್ಯವಿಲ್ಲ ಮತ್ತು ಬೇರೆ ಯಾರಿಗೂ ಸಿಗುವುದೂ ಇಲ್ಲ. ಕಾರಣ ಅವರು ನನ್ನ ಜೀವ. ಬಿಡದೇ ಬೆಂಬಿಡುವ ಜೀವಗಳು. ವಿಕ್ರಮಾದಿತ್ಯನನ್ನು ಕಾಡುವ ಬೇತಾಳನಂತೆ ಅವರೆಲ್ಲರೂ ಕಾಡುತ್ತಾ ಇದ್ದಾರೆ. ಕೆಲವರು ತುಂಬಾ ದೂರದಲ್ಲಿದ್ದು, ಕೆಲವರು ತುಂಬಾ ಸಮೀಪದಲ್ಲಿದ್ದು, ಮತ್ತೆ ಕೆಲವರು ತುಂಬಾ ದೂರದಲ್ಲಿದ್ದಂತಿದ್ದರೂ ಹೃದಯಕ್ಕೆ ತುಂಬಾ ಹತ್ತಿರವಿದ್ದಾರೆ.<br /> ಕೆಲವರನ್ನು ಕಾಲೇಜು ರಜಾ ದಿನಗಳಲ್ಲಿ ಅದೆಷ್ಟು ಮಿಸ್ ಮಾಡ್ತಿದ್ದೆ ಅಂದರೆ ಅವರಿಗೂ ಆ ಕೊರಗು ಅನುಭವವಾಗಿ ಅವರೇ ಫೋನ್ ಮಾಡೋರು. ಫೋನೆತ್ತಿದರೆ ಅವರ ಅದೇ ಹೆಣ್ಣು ಮನಸ್ಸಿನ ಕೊರೆತ ಹೇಳೋರು.<br /> ಇಂದಿಗೂ ಕೆಲವರ ಮಾತುಗಳು ನೆನೆದರೆ ನಗು ಬರುತ್ತದೆ. ಒಬ್ಬಳಿಗೆ ರಾತ್ರಿ ನಿದ್ದೆ ಬಂದಿಲ್ಲಾಂದ್ರೆ ಮರುದಿನ ಬಂದು ಬಯ್ಯೋದು ನನ್ನನ್ನು! ಇನ್ನೊಬ್ಬಳಂತೂ ಸದಾ ಕಾಲ ಜತೆಗೇ ಇದ್ದು ಕಾಲೇಜು ಮುಗಿಸಿದರೂ ಬೆನ್ನ ಹಿಂದೆ ಜೋತು ಬಿದ್ದು ನೆನಪಲ್ಲಿಟ್ಟಿರುವಂತೆ ಅವಳದೇ ಆದ ಕೆಲವು ಸ್ಟೈಲ್ ಹೇಳಿಕೊಟ್ಟಿದ್ದಾಳೆ. ಇನ್ನೊಬ್ಬಳು ನನ್ನ ಪಾಲಿನ ಮೆಡಿಟೇಶನ್ ಗುರು. ಇಂದಿಗೂ ಮೆಡಿಟೇಶನ್ ಮನಸ್ಸಿಗೆ ಇಷ್ಟವಾಗುವುದು ಆ ಒಂದೇ ಕಾರಣಕ್ಕೆ. ಅವಳ ಪ್ರಕಾರ ಮೆಡಿಟೇಶನ್ ಆರಂಭಕ್ಕೆ ಯಾವುದೋ ಒಂದು ಆಬ್ಜೆಕ್ಟ್ ಬೇಕಂತೆ!<br /> ಅಷ್ಟಕ್ಕೂ ನನಗೆ ಅದ್ಭುತ ಗೆಳತಿಯಾಗಿ ಹೊರ ಹೊಮ್ಮಿದ್ದು ಕೇವಲ ಕೆಲವರು. ಪ್ಲಸ್ ಟು ಅರ್ಥಾತ್ ಪಿಯುಸಿ ಮಾಡುತ್ತಿರಬೇಕಾದರೆ ಇದ್ದ ಮುಸ್ಲಿಂ ಗೆಳತಿ. ಯಾವುದೇ ಸಂದರ್ಭದಲ್ಲೂ ಜಾತೀಯತೆಯನ್ನು ಮರೆತು ಅವಳು ಮುಸ್ಲಿಂ ಅಲ್ಲ, ನಾನು ಹಿಂದೂ ಅಲ್ಲ ಎನ್ನುವಂತೆ ಸದಾ ಕಾಲ ಬೆನ್ನಿಗೆ ಬಿದ್ದು ನಿಂತವಳು. ಕ್ಲಾಸಿಗೆ ಬರುವಾಗ ಆರಂಭದಲ್ಲಿ ತಲೆ ಮೇಲೆ ಅವರ ಸಾಂಪ್ರದಾಯಿಕ ಶೈಲಿಯಲ್ಲಿ ಸ್ಕಾರ್ಫ್ ಹಾಕಿಕೊಂಡು ಬರುತ್ತಿದ್ದರೂ ನಂತರದ ದಿನಗಳಲ್ಲಿ ಅವೆಲ್ಲವನ್ನೂ ಮೀರಿ ನಿಂತವಳು. ಕಾಲೇಜು ಮುಗಿದ ನಂತರ ಮದುವೆ ಸಂಸಾರ, ಮಕ್ಕಳು ಎಂಬ ತಾಪತ್ರಯದಲ್ಲಿ ಮುಳುಗಿ ಮರೆಯಾದಳು. ಆದರೆ ಅವಳು ನೀಡಿದ ಸಹೋದರತಾ ಭಾವ ಎಂದಿಗೂ ಮರೆಯಾಗಿಲ್ಲ. ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಎಲ್ಲರ ಬಗ್ಗೆ ಬರೆಯುತ್ತಾ ಹೋದರೆ ಬ್ಲಾಗ್ ಪೋಸ್ಟ್ ಉದ್ದವಾಗುತ್ತಾ ಹೋಗುತ್ತದೆ. ಅದಕ್ಕೆ ಈಗ ಸಣ್ಣನೆಯ ವಿರಾಮವಿರಲಿ. <br /> ಆ ಮೇಲೆ ಡಿಗ್ರಿ, ಪಿಜಿ ಎಲ್ಲ ಕಡೆ ಗೆಳತಿ ಗೆಳೆಯರು ಸಿಕ್ಕಿದರು. ಕೆಲವರು ಅದ್ಭುತಗಳ ಸರಮಾಲೆಯನ್ನು ಸೃಷ್ಟಿಸಿದರು. ಇನ್ನು ಕೆಲವರು ನನ್ನ ಅದ್ಭುತಗಳ ಪಾಲಿಗೆ ನೀನು ಬೇಕು ಎಂದು ಅವರ ಜೀವನದ ಅವಿಭಾಜ್ಯ ಅಂಗ ಎಂದು ಗೌರವಿಸಿದರು. ಸದ್ಯಕ್ಕೆ ಇಷ್ಟು ಸಾಕು. <br />ನಿನ್ನೆ ರಾತ್ರಿ ಯಾಕೋ ಕ್ಲೋಸ್ ಟು ಹಾರ್ಟ್ ಎಂಬ ಕಾರ್ಯಕ್ರಮದ ಕೊನೆಯ ಸಾಲಿನಲ್ಲಿ ಅದರಲ್ಲಿದ್ದ ವ್ಯಕ್ತಿ ಎಸ್ಎಂಎಸ್ ಬಗ್ಗೆ ಹೇಳಿದಾಗ ಇಷ್ಟೆಲ್ಲಾ ನೆನಪಾದವು.Chevarhttp://www.blogger.com/profile/12119362877342017192noreply@blogger.com2tag:blogger.com,1999:blog-19828151.post-38902224478790997842008-11-03T02:53:00.001+05:302008-11-03T02:57:33.409+05:30ನೆನಪುಗಳ ಲೋಕದಿಂದ<div align="justify">ಕಳೆದ ಕೆಲವು ದಿನಗಳಿಂದ ಮನಸ್ಸು ತೀವ್ರ ಗೊಂದಲಕ್ಕೆ ಬಿದ್ದಿದೆ. ಯೋಚನೆ, ಚಿಂತೆ, ಹಳೆಯ ಕೆಲವು ಕನಸುಗಳು ಜತೆಗೆ ಜೀವನವೆಂಬ ಅದ್ಭುತ ಪ್ರೀತಿಯ ನಡುವೆ ನಿಂತಿರಬೇಕಾದರೆ ಮನಸ್ಸೆಂಬ ಮರ್ಕಟ ಎಲ್ಲೆಲ್ಲೋ ಕೊಂಡೊಯ್ಯುತ್ತವೆ.<br /> ಅಷ್ಟಕ್ಕೂ ಜೀವನ ಅಂದ್ರೆ ಇಷ್ಟೇನಾ ಎಂಬ ಯೋಚನೆಯೂ ಬರುತ್ತೆ. ಕೇವಲ ಒಂದು ವಿನಾಕಾರಣದ ನೆವದಲ್ಲಿ ಇಷ್ಟೆಲ್ಲಾ ಘಟನೆಗಳು ಚರ್ಚೆಗಳು ನಡೆಯಬೇಕಾ ಎನ್ನುವ ಪ್ರಶ್ನೆಗಳು ಮನಸ್ಸನ್ನು ಕಾಡುತ್ತೆ.<br /> ಈ ನಡುವೆ ಕಳೆದ ತಿಂಗಳಲ್ಲಿ ಲಭಿಸಿದ್ದ ಎರಡು ರಜೆಗಳಲ್ಲಿ ಚಿಕ್ಕಮಗಳೂರು ಹಾಗೂ ಚಾಮರಾಜನಗರದ ಕೆಲವು ಅದ್ಭುತ ತಾಣಗಳಿಗೆ ಹೋಗಿ ಬಂದೆವು. ಇವೆರಡರಲ್ಲಿ ನನಗೆ ಇಷ್ಟವಾಗಿದ್ದು ಚಿಕ್ಕಮಗಳೂರು ಯಾತ್ರೆ. ಅಲ್ಲಿನ ಮುಳ್ಳಯ್ಯನ ಗಿರಿ ಎಂಬ ಗಿರಿಯ ಮೇಲೆ ನಿಂತರೆ ಅದೊಂದು ಅದ್ಭುತ ತಾಣ. ಸುತ್ತಲೂ ಕವಿದ ಮಂಜು. ನಾವು ಮಂಜಿನ ನಡುವೆ ನಿಂತಿದ್ದರೆ ಕೆಳಗಡೆ ಚಲಿಸುವ ಮೋಡಗಳು. ಆ ಮಟ್ಟಿಗೆ ಅಂತಹ ಒಂದು ಅದ್ಭುತ ಸುಖವನ್ನು ನೀಡಿತ್ತು ಯಾತ್ರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಈ ಅದ್ಭುತ ತಾಣದಲ್ಲಿ ನಿಂತು ನನ್ನದೇ ಆದ ಲೋಕಕ್ಕೆ ಜಾರಿದ್ದೆ. ಹಿಂದೊಮ್ಮೆ ಇದೇ ರೀತಿ ಯಾವುದೋ ಒಂದು ಪ್ರವಾಸ ಹೋಗಿದ್ದಾಗಲೂ ಇದೇ ಅನುಭವವಾಗಿತ್ತು.<br /> ಅಷ್ಟರ ಮಟ್ಟಿಗೆ ಪ್ರವಾಸದಲ್ಲಿ ನಾನು ಏಕಾಂತವನ್ನು ಸವಿಯುತ್ತೇನೆ. ಅದಕ್ಕೆ ಯಾವುದೇ ರೀತಿಯ ಕಾರಣವಿಲ್ಲ. ಬೆಂಗಳೂರೆಂಬ ಅಪ್ಪಟ ಕಾಂಕ್ರೀಟ್ ಕಾಡಿನಿಂದ ಹೊರಗೆ ಬಂದರೆ ಸಿಗುವ ಅದ್ಭುತ ಸುಖವಿದೆಯಲ್ಲಾ ಅದನ್ನು ಅನುಭವಿಸಿಯೇ ತೀರಬೇಕು. ಕಳೆದ ಹಲವಾರು ತಿಂಗಳಲ್ಲಿ ಇಂತಹ ಒಂದು ಏಕಾಂತ ಬೇಕಿತ್ತು. ಅದು ಸಿಕ್ಕಿತ್ತು. ಆಪರೇಷನ್ ಎಂಬ ಕಾರಣಕ್ಕೆ ಸುಮ್ಮನೆ ಮನೆಯಲ್ಲಿದ್ದಾಗಲೂ ಇಂತಹ ಒಂದು ಅದ್ಭುತ ಸುಖ ಸಿಕ್ಕಿತ್ತು.<br /> ಉದ್ಯೋಗ ಎಂಬ ದೃಷ್ಟಿಯಿಂದ ಬೆಂಗಳೂರು ಇಷ್ಟವಾಗುತ್ತದೆಯೇ ಹೊರತು ಖಾಸಗಿಯಾಗಿ ಯಾವುದೇ ಕಾರಣಗಳೂ ಇಲ್ಲ. ಈ ಬೆಂಗಳೂರೆಂಬ ಬೆಂಗಳೂರಿನಲ್ಲಿ ಏನಿದೆ ಎಂದು ಕೇಳಿದರೆ ಕೆಲವರಿಗೆ ಅದು ಅಪಥ್ಯವಾದೀತೆಂಬುದು ಖಚಿತ. ಆದರೂ ಸತ್ಯ ಯಾವತ್ತೂ ಸತ್ಯವೇ ಅಲ್ಲವೇ.<br /> ಸದ್ಯ ರಾಜ್ಯೋತ್ಸವ ಮುಗಿದಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇನ್ನೇನು ನಡೆಯಲಿದೆ. ಬಾರಕ್ ಒಬಾಮಾ ಎಂಬಾ ಕೆನ್ಯಾ ಮೂಲದ ಮುಸ್ಲಿಂ ಪರಿವರ್ತಿತ ಕ್ರಿಶ್ಚಿಯನ್ ಹುಡುಗ ತಾನು ಕಟ್ಟಿಕೊಂಡ ಕನಸಿನೊಂದಿಗೆ <strong><span style="color:#ff0000;">ವಿ ನೀಡ್ ಚೇಂಜ್</span></strong> ಎಂಬ ಘೋಷಣಾ ವಾಕ್ಯದೊಂದಿಗೆ ವಿಜಯದೆಡೆಗೆ ಮುನ್ನುಗ್ಗುತ್ತಿದ್ದಾನೆ.<br />ಜಾನ್ ಮೆಕೇನ್ಗಿಂತಲೂ ಬಾರಕ್ ಒಬಾಮಾ ಬಹಳ ಇಷ್ಟವಾಗುತ್ತಾನೆ. ಆತ ನಡೆದು ಬಂದ ಕಠಿಣ ಹಾದಿ, ಸವೆಸಿದ ದಾರಿ, ಚುನಾವಣಾ ಪ್ರಚಾರದ ವೇಳೆ ತನ್ನ ಮೂಲದ ಬಗ್ಗೆ ವಿರೋಧ ಪಕ್ಷದವರು ನಡೆಸಿದ ಪ್ರಚಾರಕ್ಕೆ ಸಮರ್ಥ ಉತ್ತರ ನೀಡುತ್ತಾ ಆತ ಇದುವರೆಗೆ ಸಹಿಸಿದ ಹಾದಿಯಿದೆಯಲ್ಲಾ ಅದಕ್ಕೆ ಆತ ಅಭಿನಂದನಾರ್ಹ. ಅವಮಾನವೆಂಬುದು ಆತನನ್ನು ಕಾಡಿ ಬೆಳೆಸಿದ ಪರಿ, ಸತತ ಬೆನ್ನಿಗಂಟಿಕೊಂಡ ವಿರೋಧ. ಇವುಗಳನ್ನೆಲ್ಲಾ ಎದುರಿಸಿ ಮುನ್ನಡೆದ ಆತನ ತುಂಬಾ ಇಷ್ಟವಾದ <strong>ಚೇಂಜ್</strong> ಎಂಬ ಶಬ್ದಕ್ಕೆ ಹ್ಯಾಟ್ಸಾಫ್.</div>Chevarhttp://www.blogger.com/profile/12119362877342017192noreply@blogger.com6tag:blogger.com,1999:blog-19828151.post-42841346764273206472008-10-06T16:02:00.003+05:302008-10-06T17:12:58.503+05:30ಡಿಪ್ರೆಷನ್ ನೆಪದಲ್ಲಿ ನೆನಪಿನ ಗುಂಗು<div align="justify"><strong>ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ<br />ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ.<br />ಹೇಳುವುದು ಏನು ಉಳಿದು ಹೋಗಿದೆ<br />ಹೇಳಲಿ ಹೇಗೇ ತಿಳಿಯದಾಗಿದೆ. </strong></div><br /><div align="justify"><br />ಅಷ್ಟಕ್ಕೂ ಇದು ಡಿಪ್ರೆಷನ್ನಾ? ಇಲ್ಲ ದುಃಖದ ಸಂಕ್ರಮಣ ಕಾಲವಾ? ಯಾಕೋ ಗೊತ್ತಿಲ್ಲ ಕಳೆದ ಕೆಲ ತಿಂಗಳುಗಳ ಕೆಲವು ದಿನಗಳಲ್ಲಿ ತೀರಾ ಅತಿ ಎನ್ನುವಷ್ಟು ಏಕಾಂತತೆ ಮೂಡುತ್ತಿದೆ. ತೀವ್ರ ದುಗುಡ ಕಾಡುತ್ತಿದೆ. ಕಾಲೇಜು ದಿನಗಳಲ್ಲಿ ಡಿಪ್ರೆಷನ್ ಆಗಾಗ ಕಾಡ್ತಾ ಇತ್ತು. ಆದರೆ ಅಂದಿನ ಡಿಪ್ರೆಷನ್ಗೆ ಕಾರಣಗಳಿದ್ದವು. ಅದು ನಾನು ಬೆಳೆದು ಬಂದ ರೀತಿ ಎಂದು ಕೊಂಡಿದ್ದೆ. ಈ ಡಿಪ್ರೆಷನ್ನಿಂದಾಗಿ ಬ್ಲಾಗ್ ಕೆಲಕಾಲ ನಿಂತ ನೀರಾಗಿತ್ತು. ಅಲ್ಲಿಂದ ಮುಂದೆ ಬ್ಲಾಗ್ ರೀ ಲಾಂಚ್ ಮಾಡಬೇಕೆಂದು ಕೊಂಡಿದ್ದೆ. ಆದರೆ ಕೆಲವು ಅನಿವಾರ್ಯತೆಗೆ ಸಿಲುಕಿ ಅದನ್ನೂ ಅರ್ಧಕ್ಕೆ ಕೈಬಿಟ್ಟಿದ್ದೆ. ಆದರೂ ನಿಮ್ಮ ಭರವಸೆ ಸುಳ್ಳು ಮಾಡುವುದಿಲ್ಲ. ಬ್ಲಾಗ್ ರೀ ಲಾಂಚ್ ಮಾಡೇ ಮಾಡ್ತೀನಿ. ಕೆಲವರಿಗೆ ಅಚ್ಚರಿಯನ್ನೂ ಕೊಡ್ತೀನಿ.</div><br /><div align="justify"><br />ಆದರೆ ಬ್ಲಾಗ್ ಪೋಸ್ಟ್ ಇಲ್ಲದ್ದನ್ನೇ ನೆಪ ಮಾಡಿಕೊಂಡು ಕೆಲವರು ಬೈದರು. ಇನ್ನು ಕೆಲವರು ಬೆನ್ನ ಹಿಂದೆ ಜೋತು ಬಿದ್ದರು. ಆದರೆ ಅಷ್ಟರಲ್ಲಾಗಲೇ ಆಪರೇಷನ್ ಎಂಬ ಅನಿವಾರ್ಯತೆಗೆ ಬಿದ್ದು ಮನೆಯಲ್ಲಿ ರೆಸ್ಟ್ ತಗೊಂಡೆನಲ್ಲಾ ಆಗ ಕಾಡಿತ್ತು ಇದೇ ಡಿಪ್ರೆಷನ್. ಆಗ ಕಾಡಿತ್ತು ನೆನಪುಗಳ ಮಧುರ ಸ್ಮೃತಿ. ಬಾಲ್ಯದ ತುಂಟಾಟಗಳಿಂದ ಆರಂಭಿಸಿ ಶಾಲೆಗೆ ಹೋಗುತ್ತಿದ್ದ ದಿನಗಳನ್ನು ನೆನಪಿಸಿ ಕೊನೆಗೆ ಹೈಸ್ಕೂಲ್ ದಡದಲ್ಲಿ ತಂದು ನಿಲ್ಲಿಸಿತ್ತು. </div><br /><div align="justify"><br />ಹೈಸ್ಕೂಲ್ ಗೆಳೆಯರಲ್ಲಿ ಕೆಲವರು ನೆನಪಾದರು. ಕೆಲವರ ನೆನಪು ಕಾಡಲೇ ಇಲ್ಲ. ನಂತರ ಪ್ಲಸ್ ಟು ಎಂಬ ಪಿಯುಸಿಯತ್ತ ತಿರುಗಿತ್ತು ಮನ. ಅಲ್ಲೂ ಅಷ್ಟೇ, ಪ್ರೀತಿಯಿಂದ ಕಲಿಸಿದ ಮೇಡಂ, ಗೆಳತಿಯರು, ಗೆಳೆಯರು ಮುಂತಾದವರ ಚಿತ್ರಣಗಳು ಮುಂದೆ ಬಂದು ಡಿಗ್ರಿಯ ಕಡೆಗೂ ಮುಗಿಸೀ ಯುನಿವರ್ಸಿಟಿ ಬಾಗಿಲಲ್ಲಿ ತಂದು ನಿಲ್ಲಿಸಿತ್ತು. </div><a href="https://blogger.googleusercontent.com/img/b/R29vZ2xl/AVvXsEjXmZiRg8p-MYCv0VjFf_cDFgHTDgdlnu_2igtAJpkDRP8Y0hAXF5DwYEoy60mYe1oilY8AmnlU-STdotbpcgqN5oBQ2xCR7HYbN3P7h17yQ6FfTHGFSmvt6zqu_twRPHyHie0z/s1600-h/depress.jpg"><img id="BLOGGER_PHOTO_ID_5254003957051461714" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjXmZiRg8p-MYCv0VjFf_cDFgHTDgdlnu_2igtAJpkDRP8Y0hAXF5DwYEoy60mYe1oilY8AmnlU-STdotbpcgqN5oBQ2xCR7HYbN3P7h17yQ6FfTHGFSmvt6zqu_twRPHyHie0z/s320/depress.jpg" border="0" /></a><br /><div align="justify"><br />ಅಲ್ಲಿ ನೋಡಿದರೆ ಸಾಧನೆಗಳ ಸರಮಾಲೆ. ತಕ್ಷಣ ನೆನಪಾಗಿದ್ದು ಆ ಸಮಯದಲ್ಲಿ ಮಾಡುತ್ತಿದ್ದ ಚೇಷ್ಟೆಗಳು ಮಾತ್ರ. ತಕ್ಷಣ ಜೋಪಾನವಾಗಿ ತೆಗೆದಿರಿಸಿದ್ದ ಕೆಲವು ನೋಟ್ ಪ್ಯಾಡ್ಗಳು ಮಾತ್ರ. ನಿದ್ದೆ ಬರಿಸುತ್ತಿದ್ದ ಕೆಲವು ಸೆಮಿನಾರ್ಗಳಲ್ಲಿ ನಿದ್ದೆಯನ್ನು ಹೋಗಲಾಡಿಸಲು ಗೀಚಿದ್ದ ಕೆಲವು ಸಾಲುಗಳು ಕಂಡವು. ನಿಜಕ್ಕೂ ಅದ್ಭುತವದು. ಪ್ರತಿಯೊಂದು ಸಾಲಿಗೂ ಅದರದೇ ಆದ ಅದ್ಭುತ ಕಾರಣಗಳು. ಕೆಲವು ಪುಟಗಳಲ್ಲಿ ಕಾಣಿಸುತ್ತಿದ್ದ ಅಕ್ಷರಗಳನ್ನು ಕಂಡಾಗ ಸುಮ್ಮನೆ ಆ ದಿನಗಳನ್ನು ನೆನಪಿಸಿಕೊಂಡೆ. </div><br /><div align="justify"><br />ಮತ್ತೆ ಸುಮಾರು ಹೊತ್ತು ಆ ಸೆಮಿನಾರ್ ನೋಟ್ಗಳ ಅನಗತ್ಯವಾಗಿ ಗೀಚಿದ್ದ ಕೆಲವು ಸಾಲುಗಳನ್ನು ನೆನಪಿಸಿಕೊಂಡು ನಕ್ಕು ಬಿಟ್ಟಿದ್ದೆ. ನಿಜಕ್ಕೂ ಆ ದಿನಗಳೇ ಬಲು ಸುಂದರ ಅನಿಸಿದ್ದವು. ಕೆಲವರು ನೋಟ್ಗಳನ್ನು ಬರೆಯಬೇಕಾದರೆ ಇದು ಕನ್ನಡವಾ? ನಂಗೆ ಹಾಗನಿಸುತ್ತಿಲ್ಲ ಎಂದ ವರಾತ ಎತ್ತುತ್ತಿದ್ದರು. ನೀನು ಬರೆದಿದ್ದನ್ನು ನೀನೇ ಅರ್ಥ ಮಾಡಿಕೊಳ್ಳಬೇಕು ಎಂಬ ಹಿತನುಡಿಯೂ ಇತ್ತು. ಹಾಗೆ ಅದನ್ನೆಲ್ಲಾ ನೆನಪಿಸಿಕೊಂಡು ಕನ್ನಡದಲ್ಲಿ ಬರೆಯೋಕೆ ಟ್ರೈ ಮಾಡುತ್ತೇನೆ. ನಿಜಕ್ಕೂ ಅಂದಿನ ಕನ್ನಡವೇ ಸುಂದರವಾಗಿ ಇತ್ತು ಎಂದು ಅನಿಸೋಕೆ ಶುರುವಾಗಿತ್ತು. ಕಳೆದ ಎರಡೂವರೆ ವರ್ಷಗಳಲ್ಲಿ ಅಪ್ಪಿ ತಪ್ಪಿಯೂ ಪೆನ್ ಕೈಯಲ್ಲಿ ಹಿಡಿದು ಬರೆದವನಲ್ಲ. ಏನಿದ್ದರೂ ಇಂದು ಕಂಪ್ಯೂಟರ್. ಮತ್ತೆಲ್ಲಿಯ ಸುಂದರ ಅಕ್ಷರದ ಮಾತು.</div><br /><div align="justify"><br />ಅಂತೂ ಒಂದು ತಿಂಗಳ ರೆಸ್ಟ್ ಹಲವು ತಿರುವುಗಳಿಗೆ ಕಾರಣವಾಗಿತ್ತು. ಯಾವತ್ತು ಬೆಂಗಳೂರಿನಿಂದ ಹೊರಟನೋ ಅಲ್ಲಿಂದಲೇ ಎಲ್ಲವೂ ಪೂರ್ವ ನಿಶ್ಚಯವೇನೋ ಎಂಬಂತೆ ಜೀವನ ಸಾಗಿತ್ತು. ಇದುವರೆಗೆ ಸಾಧಿಸಿದ ಸಾಧನೆಗಳು, ಕೆಲವು ತಿರುವುಗಳು, ಕೆಲವು ಲಾಭ ನಷ್ಟದ ಲೆಕ್ಕಾಚಾರ, ಕೆಲವು ರಾತ್ರಿಯ ಭಯಾನಕ ವಾಕಿಂಗ್ ಎಲ್ಲವನ್ನೂ ನೆನಪಿಸಿಕೊಟ್ಟಿತ್ತು. ಅಷ್ಟಕ್ಕೂ ಉದ್ದೇಶ ಪೂರ್ವಕವಾಗಿ ನಾನೇನೂ ಜ್ಞಾಪಿಸಿಕೊಳ್ಳಲಿಲ್ಲ. ಎಲ್ಲವೂ ನಿಂತ ನೀರಲ್ಲ ಹರಿದಾಡುವ ನೀರು. ಬೇಕೆನಿಸಿದಾಗ ತೆಗೆದುಕೋ, ಬೇಡವೆನಿಸಿದಾಗ ಬಿಟ್ಟುಹೋಗು ಎಂದು ಜೀವನ ಯಾವತ್ತೂ ಹೇಳಿಕೊಟ್ಟಿಲ್ಲ. </div><br /><div align="justify"><br />ಹಾಗೆ ಮೊನ್ನೆ ಬರೆದ ಬ್ಲಾಗ್ ಪೋಸ್ಟ್ ನೋಡಿ ಒಲುಮೆಯ ಗೆಳೆಯ <a href="http://krishmo.blogspot.com/">ಕೃಷ್ಣಮೋಹನ</a>, ಬ್ಲಾಗ್ ಸ್ನೇಹಿತರಾದ <a href="http://sharadhi.blogspot.com/">ಚಿತ್ರಾ ಕರ್ಕೇರಾ</a>, <a href="http://manasa-hegde.blogspot.com/">ಮಾನಸ ಹೆಗ್ಡೆ </a>ಕೆಲವು ಹಿತವಚನ ನೀಡಿದ್ದಾರೆ. ಯಾಕೋ ಅವರೆಲ್ಲ ಬ್ಲಾಗ್ ಬರಹ ಮೆಚ್ಚಿರುವಾಗ ಬರವಣಿಗೆ ನಿಲ್ಲಿಸಬಾರದು ಎಂದು ಅಂದುಕೊಂಡಿದ್ದೇನೆ. ಕೃಷ್ಣಮೋಹನ ಬ್ಲಾಗ್ನಲ್ಲಿ ಅಗಲಿದ ಗೆಳೆಯನ ಬಗ್ಗೆ ಓದಿದಾಗ ಯಾಕೋ ಬಾಲ್ಯದ ಹಲವು ನೆನಪುಗಳು ಬಂದವು. ಅದನ್ನು ರಾತ್ರಿಯೇ ಕುಳಿತು ಅದೇ ಅರ್ಥವಾಗದ ಭಾಷೆಯಲ್ಲಿ ಬರೆದು ಮುಗಿಸಿದೆ. ಈಗ ಅವರ ಹೇಳಿಕೆಗೆ ಸಂಪೂರ್ಣ ಒಪ್ಪಿಗೆ ಸೂಚಿಸುತ್ತಿದ್ದೇನೆ. </div><br /><div align="justify"><br />ನೆನಪುಗಳ ಮಾತು ಮಧುರ ಎನ್ನುವುದು ಯಾವುದೋ ಬ್ಲಾಗ್ನಲ್ಲಿ ಕಂಡ ಪಂಚ್ಲೈನ್. ನಿಜವಾಗಲೂ ಹೌದಲ್ಲ. ಇಷ್ಟೆಲ್ಲಾ ಬರೆದು ಮುಗಿಸುವ ಹೊತ್ತಿಗೆ ಮೊಬೈಲ್ನಲ್ಲಿ ಹಾಡು ಆರಂಭವಾಗಿತ್ತು.</div><br /><div align="justify"><br /><strong>ಅದೇ ದಾರಿ, ಅದೇ ತಿರುವು, ಈ ಪಯಣ ನೂತನ<br />ನನ್ನಾ ಮೋಡ, ನನ್ನಾ ಹಾಡು, ನನ್ನಾ ಕನಸೇ ಒಮ್ಮೆ ನೋಡು<br />ನನ್ನಾ ಚೆಲುವಿನ ನಂದನಾ, ಏನೋ ಮಧುರ ಈ ಬಂಧನಾ</strong><br /><br />ಎಷ್ಟು ಸುಂದರ ಸಾಲುಗಳು. ಬೇಡ ಇನ್ನು ಬರೆದರೆ ಭಾವನೆಗಳ ಅಲೆಯಲ್ಲಿ ಮತ್ತೆ ಮುಳುಗಿ ಏಳಬೇಕಾಗುತ್ತದೆ. ಮತ್ತೆ ನೆನಪಿನ ಸಾಲುಗಳ ಮೊರೆ ಹೋಗಬೇಕಾಗುತ್ತೆ.<br />ಇವಿಷ್ಟು ಕಳೆದ ಕೆಲ ದಿನಗಳಲ್ಲಿ ಕಾಡುತ್ತಿದ್ದ ಡಿಪ್ರೆಷನ್ ವೇಳೆ ಮನಸ್ಸಿಗೆ ಅತ್ಯಂತ ಗಾಢವಾಗಿ ಕಾಡಿದವುಗಳು.</div><div align="justify"> </div><div align="justify"> </div><div align="justify">ಚಿತ್ರ ಕೃಪೆ: ಇಂಟರ್ ನೆಟ್ </div>Chevarhttp://www.blogger.com/profile/12119362877342017192noreply@blogger.com8